ಕಾಂಗ್ರೆಸ್ ಪಾಲಾದ ಚಿಕ್ಕಬಳ್ಳಾಪುರ ನಗರಸಭೆ- ಸಚಿವ ಸುಧಾಕರ್‌ಗೆ ಮುಖಭಂಗ

Public TV
2 Min Read
ckb congress

ಚಿಕ್ಕಬಳ್ಳಾಪುರ: ಜಿಲ್ಲೆಯ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ನಗರಸಭೆ ಕಾಂಗ್ರೆಸ್ ಪಕ್ಷದ ಪಾಲಾಗಿದೆ.

31 ವಾರ್ಡುಗಳ ಪೈಕಿ 16 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದು, 09 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಲ್ಲದೆ 02 ವಾರ್ಡುಗಳಲ್ಲಿ ಜೆಡಿಎಸ್ ಹಾಗೂ 04 ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.

ckb congress 4

31 ವಾರ್ಡುಗಳ ವಿಜೇತರ ಪಟ್ಟಿ:
ಕಾಂಗ್ರೆಸ್:
ರತ್ನಮ್ಮ, ಶಕೀಲಾ ಭಾನು, ಸತೀಶ್, ನಿರ್ಮಲಾಪ್ರಭು, ದೀಪಕ್, ಅಂಬರೀಶ್, ರಫೀಕ್, ಅಂಬಿಕಾ, ನರಸಿಂಹಮೂರ್ತಿ, ಅಪ್ಜಲ್, ಸ್ವಾತಿ.ಎಂ, ನೇತ್ರಾವತಿ, ಚಂದ್ರಶೇಖರ್, ವೆಂಕಟೇಶ್, ಮೀನಾಕ್ಷಿ, ಜಯಲಕ್ಷ್ಮೀ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳು.

ಬಿಜೆಪಿ:
ಸುಮ ಶಶಿಶೇಖರ್, ಗಜೇಂದ್ರ, ನಾಗರಾಜ್, ದೀಪ.ಬಿ.ಕೆ, ಮಂಜುಳ.ಆರ್, ಯತೀಶ್, ಎ.ಬಿ.ಮಂಜುನಾಥ್, ಬಿ.ಎನ್.ರಾಜೇಶ್ವರಿ, ಭಾರತಿದೇವಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು.

ckb congress 3

ಜೆಡಿಎಸ್ ಹಾಗೂ ಪಕ್ಷೇತರ:
ಮಠಮಪ್ಪ, ವೀಣಾರಾಮು ಅವರು ಜೆಡಿಎಸ್‍ನಿಂದ ಗೆದ್ದ ಅಭ್ಯರ್ಥಿಗಳಾದರೆ, ಪಕ್ಷೇತರವಾಗಿ ರುಕ್ಮಿಣಿ ಮುನಿರಾಜು, ಸುಬ್ರಮಣ್ಯಂ, ಮಹಮದ್ ಜಾಫರ್, ಡಿ.ಎಸ್.ಆನಂದ್ ರೆಡ್ಡಿ ಬಾಬು ಜಯಗಳಿಸಿದ್ದಾರೆ.

ಈ ಮೂಲಕ ಸದ್ಯ ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ಪಾಲಾಗಿದೆ. ಇತ್ತ ನೂತನ ಸಚಿವ ಡಾ.ಕೆ ಸುಧಾಕರ್ ಬಿಜೆಪಿ ಪಕ್ಷದಿಂದ ನಗರಸಭೆ ಚುನಾವಣಾ ಉಸ್ತುವಾರಿ ವಹಿಸಿದ್ದರು. ವಾರ್ಡುವಾರು ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರವನ್ನ ಸಹ ನಡೆಸಿದ್ದರು. ಇದಲ್ಲದೇ ನಗರಸಭೆ ಚುನಾವಣೆ ಹಿನ್ನೆಲೆ ವಿಶೇಷ ಪ್ರಣಾಳಿಕೆಯನ್ನ ಸಹ ಸುಧಾಕರ್ ಬಿಡುಗಡೆ ಮಾಡಿದ್ದರು. ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹವಾ ಕ್ರಿಯೇಟ್ ಮಾಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿ ಗೆದ್ದು ಬೀಗಿ ಸಚಿವರಾದ ಸುಧಾಕರ್ ಸದ್ಯ ನಗರಸಭೆಯಲ್ಲೂ ಕಮಾಲ್ ಮಾಡಲಿದ್ದಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ ಎಲ್ಲವೂ ಉಲ್ಟಾ ಎಂಬಂತಾಗಿದ್ದು, ಬಿಜೆಪಿಯ ಅಧಿಕಾರ ಹಿಡಿಯುವ ಕನಸು ನುಚ್ಚು ನೂರಾಗಿದೆ.

SUDHAKAR CKB

20ರಿಂದ 22 ವಾರ್ಡುಗಳಲ್ಲಿ ಗೆಲುವಿನ ನೀರಿಕ್ಷೆಯಲ್ಲಿದ್ದ ಸಚಿವ ಸುಧಾಕರ್‍ಗೆ ನಗರಸಭೆ ಚುನಾವಣೆ ಫಲಿತಾಂಶ ತೀವ್ರ ನಿರಾಸೆ ತಂದಿದೆ. ನೂತನ ಸಚಿವರಾದ ನಂತರ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸುವ ಹಾಗೂ ನಗರಸಭೆಯಲ್ಲಿ ತಮ್ಮದೇ ಪಕ್ಷದ ಸಾರ್ವಭೌಮತ್ವ ಸಾಧಿಸುವ ಇರಾದೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ನಗರಸಭೆಯಲ್ಲೂ ಬಿಜೆಪಿ ಅರಳಿಸಿ ಚಿಕ್ಕಬಳ್ಳಾಪುರ ನಗರಸಭೆಯನ್ನ ಕೇಸರಿಮಯ ಮಾಡುವ ಕನಸು ನನಸಾಗಿಲ್ಲ. ಎಲ್ಲರೂ ಬಿಜೆಪಿ 15-16 ಸ್ಥಾನಗಳಿಸುವ ನಿರೀಕ್ಷೆಯಲ್ಲಿದ್ದರೂ ಮತದಾರ ಪ್ರಭುಗಳು ಮಾತ್ರ ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಆಶೀರ್ವಾದ ಮಾಡಿದ್ದಾರೆ. ಇದರಿಂದ ನೂತನ ಸಚಿವ ಸುಧಾಕರ್ ಅವರಿಗೆ ಮುಖಭಂಗ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *