ಪೊಲೀಸ್ರಿಂದ ಪಾರಾಗಲು ಹೋಗಿ ಡಿಕ್ಕಿ- ಕಂಟೈನರ್ ಮೇಲೆಯೇ ಉರುಳಿದ ಮರ

Public TV
1 Min Read
CKB 6

ಚಿಕ್ಕಬಳ್ಳಾಪುರ: ಪೊಲಿಸರಿಂದ ಪಾರಾಗಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಟೈನರ್ ಲಾರಿ ಮೇಲೆಯೇ ಮರ ಉರುಳಿ ಬಿದ್ದಿದೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ದೊಡ್ಡಬೆಳವಂಗಲ ಕ್ರಾಸ್ ಬಳಿ ನಡೆದಿದೆ.

ಕಂಟೈನರ್ ಲಾರಿ ಬರುತ್ತಿದ್ದ ದೊಡ್ಡಬೆಳವಂಗಲ ಕ್ರಾಸ್ ನಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಚಾಲಕ ಲಾರಿಯನ್ನು ಯದ್ವಾ-ತದ್ವಾವಾಗಿ ಚಲಾಯಿಸಿದ್ದಾನೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ಮರಕ್ಕೆ ಡಿಕ್ಕಿ ಹೊಡೆದಿದೆ.

ddd9d618 a7c2 4ef3 a338 c9513231d65d

ಡಿಕ್ಕಿ ಹೊಡೆದ ರಭಸಕ್ಕೆ ಮರ ಮುರಿದು ಲಾರಿ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *