ಚೆನ್ನೈ: ಚೆನ್ನೈನಲ್ಲಿ ನವೆಂಬರ್ 7ರಿಂದ 12ರವರೆಗೆ ಸುರಿದ ಭಾರೀ ಮಳೆ ಸಾಮಾನ್ಯ ಮಳೆಗಿಂತ ಸುಮಾರು ಐದೂವರೆ ಪಟ್ಟು ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಚೆನ್ನೈನ ಹವಾಮಾನ ಇಲಾಖೆಯ ಉಪ ನಿರ್ದೇಶಕ ಎಸ್. ಬಾಲಚಂದ್ರನ್ ಅವರು, ಈ ಆರು ದಿನಗಳಲ್ಲಿ ನಗರದಲ್ಲಿ 46 ಸೆಂ.ಮೀ ಮಳೆಯಾಗಿದೆ. ಇದು ನಗರದಲ್ಲಿ ಸಾಮಾನ್ಯವಾಗಿ ಸುರಿಯುವ 8 ಸೆಂಟಿಮೀಟರ್ ಮಳೆಗಿಂತಲೂ ಶೇಕಡ 491 ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಇಂದು ಭಾರೀ ಮಳೆ ಸಾಧ್ಯತೆ – 6 ಜಿಲ್ಲೆಯಲ್ಲಿ ರೆಡ್ ಅಲರ್ಟ್
Advertisement
Tamil Nadu: Heavy waterlogging continues in Chennai following incessant rains. Visuals from Egmore High Road pic.twitter.com/G1JvIjFCgq
— ANI (@ANI) November 11, 2021
Advertisement
ಇತ್ತೀಚೆಗೆ ಆದ ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 10 ಸೆಂ.ಮೀ ಮಳೆ ದಾಖಲಾಗಿದೆ. ಇದು ವಾರದ ಸಾಮಾನ್ಯಕ್ಕಿಂತ ಶೇಕಡಾ 142 ಅಧಿಕವಾಗಿದೆ. ಮೂರು ದಿನಗಳ ನಿರಂತರ ಮಳೆಗೆ ಅಂತಿಮವಾಗಿ ಶುಕ್ರವಾರ ವಿರಾಮ ಸಿಕ್ಕಿದೆ. ಆದರೆ ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಒಳನಾಡಿನ ತಮಿಳುನಾಡು ಮತ್ತು ನೆರೆಹೊರೆ ಪ್ರದೇಶಗಳಿಗೆ ಸಾಕಷ್ಟು ಹಾನಿಯಾಗಿದೆ. ಅಲ್ಲದೇ ಶನಿವಾರದ ವೇಳೆಗೆ ಅಂಡಮಾನ್ ದ್ವೀಪಗಳ ಬಳಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇದೆ ಮತ್ತು ನವೆಂಬರ್ 15 ರಂದು ಪೂರ್ವ-ಮಧ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Tamil Nadu | Thunderstorm with moderate rain is likely to occur at one or two places over the Kanniyakumari and Tirunelveli districts within the next two hours, as per alert issued by Regional Meteorological Centre, Chennai at 0916 hours pic.twitter.com/J4Xw5ZtQFh
— ANI (@ANI) November 13, 2021
Advertisement
ಇನ್ನೂ ವಾಯುಭಾರ ಕುಸಿತ ಪರಿಣಾಮ ಬೀರುವ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದು ಹವಾಮಾನ ವ್ಯವಸ್ಥೆಯ ಚಲನೆ ಮತ್ತು ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವಾರಾಂತ್ಯದಲ್ಲಿ ಕರಾವಳಿ ಆಂಧ್ರಪ್ರದೇಶದಿಂದ ರಾಯಲಸೀಮಾದಾದ್ಯಂತ ಕೊಮೊರಿನ್ ಪ್ರದೇಶಕ್ಕೆ ಮತ್ತು ಟಿ.ಎನ್ನ ಒಳಭಾಗದವರೆಗೆ ಹಾದು ಹೋಗುವುದರಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆ ಪ್ರದೇಶದಲ್ಲಿ ವಾಸಿಸುವ ಜನರನ್ನು ಇತರ ಜಿಲ್ಲೆಗಳಿಗೆ ಸ್ಥಳಾಂತರಿಸಬಹುದು. ಕನ್ಯಾಕುಮಾರಿ, ವೆಲ್ಲೂರು, ಕೊಯಮತ್ತೂರು, ಮಧುರೈ ಮತ್ತು ನಾಮಕ್ಕಲ್ನಂತಹ 18 ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್ಪೆಕ್ಟರ್!
#WATCH | Madurai, Tamil Nadu | Flood warning issued as the water level in the Vaigai dam reached 69 feet against the full reservoir capacity of 71 feet pic.twitter.com/lFtFDnZ5T6
— ANI (@ANI) November 12, 2021
ಶುಕ್ರವಾರ ಹಲವಾರು ಹವಾಮಾನ ಕೇಂದ್ರಗಳಿಂದ ಹಿಡಿದು ವಾಲ್ಪಾರೈ ಮತ್ತು ಯೆರ್ಕಾಡ್ ಸೇರಿದಂತೆ ರಾಜ್ಯಾದ್ಯಂತ ಸಂಜೆ 5.30 ರವರೆಗೆ ಭಾರೀ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಮಳೆ, ಕಳೆದ 24 ಗಂಟೆಗಳಲ್ಲಿ ಕನ್ಯಾಕುಮಾರಿಯ ಸೂರಲಕೋಡ್ನಲ್ಲಿ ಅತಿ ಹೆಚ್ಚು ಅಂದರೆ 15 ಸೆಂ.ಮೀ ಮಳೆಯಾಗಿದೆ. ಮಳೆಯಿಂದಾಗಿ ವ್ಯಾಸರಪಾಡಿ, ಮಡ್ಲಿ ಸುರಂಗಮಾರ್ಗ ಮತ್ತು ದುರೈಸ್ವಾಮಿ ಸುರುಂಗಮಾರ್ಗ ಸೇರಿದಂತೆ ಅನೇಕ ಸುರಂಗಮಾರ್ಗಗಳು ಜಲಾವೃತಗೊಂಡಿದ್ದರಿಂದ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಚೆನ್ನೈನ ಸುಮಾರು ಏಳು ರಸ್ತೆಗಳಾದ ಪುಲಿಯಾಂತೋಪ್-ಡಾ.ಅಂಬೇಡ್ಕರ್ ರಸ್ತೆ ಮತ್ತು ಶಿವಸ್ವಾಮಿ ಸಲೈ, ಮೈಲಾಪುರ ಮತ್ತು ಪೆರುಂಬಕ್ಕಂ ಹೈ ರೋಡ್, ಶೋಲಿಂಗನಲ್ಲೂರ್ ಅನ್ನು ಶುಕ್ರವಾರ ಮುಚ್ಚಲಾಗಿದೆ ಎಂದು ಚೆನ್ನೈ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದರು.
#WATCH Waterlogging persists in Korattur area following heavy rainfall in #Chennai #TamilNadu pic.twitter.com/xN3tEwquAh
— ANI (@ANI) November 12, 2021
ಎಲ್ಡಮ್ಸ್ ರಸ್ತೆ ಬಳಿಯ ಟಿಟಿಕೆ ರಸ್ತೆ, ಬಜುಲ್ಲಾ ರಸ್ತೆ, ಉತ್ತರ ಉಸ್ಮಾನ್ ರಸ್ತೆ ಮತ್ತು ವೆಪೇರಿ ಹೈ ರಸ್ತೆ ಸೇರಿದಂತೆ ಒಟ್ಟು 13 ರಸ್ತೆಗಳು ಜಲಾವೃತವಾಗಿವೆ. ಆದರೆ, ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೆಲ ರಸ್ತೆಗಳಲ್ಲಿ ನೀರು ಇರುವುದರಿಂದ ಮುಚ್ಚಲಾಗಿದೆ. ರೆಡ್ ಹಿಲ್ಸ್ ಮತ್ತು ಚೆಂಬರಂಬಾಕ್ಕಂ ಜಲಾಶಯಗಳಿಗೆ ಒಳಹರಿವು ಕಡಿಮೆಯಾದ ಕಾರಣ, ನೀರಿನ ಬಿಡುಗಡೆಯನ್ನು ಕ್ರಮವಾಗಿ ಸೆಕೆಂಡಿಗೆ 2,500 ಘನ ಅಡಿ (ಕ್ಯೂಸೆಕ್) ಮತ್ತು 1,000 ಕ್ಯೂಸೆಕ್ಗೆ ಇಳಿಸಲಾಯಿತು. ಮನಾಲಿಯಲ್ಲಿ ವಸತಿ ಪ್ರದೇಶಗಳು ಜಲಾವೃತಗೊಂಡಿದ್ದರಿಂದ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ರೆಡ್ ಹಿಲ್ಸ್ನಿಂದ ನೀರು ಬಿಡುವುದನ್ನು ಕಡಿತಗೊಳಿಸಲು ಪ್ರಯತ್ನಿಸಿದ್ದರು. ಚೆಂಬರಂಬಾಕ್ಕಂನಿಂದ ನೀರು ಬಿಡುವ ಬಗ್ಗೆ ಸುಮಾರು ಎರಡು ಲಕ್ಷ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ – 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
Tamil Nadu | Stagnant water being pumped out at T-Nagar in Chennai, following incessant rainfall in the region as a result of cyclonic circulation in Bay of Bengal pic.twitter.com/Yd4BO6Y6X0
— ANI (@ANI) November 12, 2021
ಆಂಧ್ರಪ್ರದೇಶದ ಜಲಾಶಯಗಳ ಒಳಹರಿವಿನಿಂದಾಗಿ ಶುಕ್ರವಾರ ತಿರುವಳ್ಳೂರು ಜಿಲ್ಲೆಯ ಪೂಂಡಿ ಜಲಾಶಯಕ್ಕೆ 18,000 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಲಾಯಿತು. ಇದರಿಂದಾಗಿ ಕೊಸಸ್ತಲೈಯಾರ್ನ ಪ್ರದೇಶಗಳು ಜಲಾವೃತಗೊಂಡಿದೆ. ಒಟ್ಟಾರೆ ವಾರಾಂತ್ಯದಲ್ಲಿ ಚೆನ್ನೈನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.