ಸಿದ್ದು ಆಪ್ತನಿಂದ್ಲೇ ನಿಖಿಲ್‍ಗೆ ಒಳಗೊಳಗೆ ಗುನ್ನಾ – ಆಮಿಷದ ಆಡಿಯೋ ವೈರಲ್

Public TV
3 Min Read
SIDDU NIKIL

ಬೆಂಗಳೂರು: ಮಂಡ್ಯದಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗ ಮಂಡ್ಯದ ರಾಜಕೀಯದ ಸ್ಫೋಟಕ ಸುದ್ದಿ ಒಂದು ಆಡಿಯೋದಿಂದ ದೋಸ್ತಿಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.

ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಒಳಗೊಳಗೆ ಗುನ್ನಾ ಹೊಡೆಯಲು ತಯಾರಿ ನಡೆಯುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತನಿಂದಲೇ ನಿಖಿಲ್ ಸೋಲಿಗೆ ಮಸಲತ್ತು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬೆನ್ನಿಗೆ ನಿಲ್ಲುವಂತೆ ಸಿದ್ದರಾಮಯ್ಯ ಆಪ್ತ ಚೆಲುವರಾಯಸ್ವಾಮಿ ಕೆಲವರಿಗೆ ಆಮಿಷದ ಕಸರತ್ತು ನಡೆಸುತ್ತಿದ್ದಾರೆ. ಅವರಿಬ್ಬರ ಫೋನ್ ಸಂಭಾಷಣೆ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

MND ADIYO

ಸಂಭಾಷಣೆಯಲ್ಲಿ ಏನಿದೆ?
ಗನ್ ಮ್ಯಾನ್ : ಸರ್ ಶಿವಪ್ರಕಾಶ್ ಬಾಬು ಅವರ ಮಾತನಾಡ್ತಿರೋದು
ಶಿವಪ್ರಕಾಶ್ ಬಾಬು : ಹಾ, ಹೌದು ಹೇಳಿ
ಗನ್ ಮ್ಯಾನ್ : ಚೆಲುವರಾಯ ಸ್ವಾಮಿ ಸಾಹೇಬ್ರು ಮಾತನಾಡುತ್ತಾರೆ
ಶಿವಪ್ರಕಾಶ್ ಬಾಬು : ಹಾ ಕೊಡಿ
ಚೆಲುವರಾಯಸ್ವಾಮಿ : ಈ ಸಾರಿ ಎಲ್ಲ ನೀವೇ ನಿಂತುಕೊಂಡು ಮಾಡಬೇಕು

ಶಿವಪ್ರಕಾಶ್ ಬಾಬು : ಮಂಡ್ಯದಲ್ಲಿ ಯಾರಣ್ಣ ಲೀಡರ್? ಯಾರ್ ಬರುತ್ತಾರೆ ಅಣ್ಣಾ?
ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ನೀವೇ ಲಿಡರ್, ಮಂಡ್ಯದಲ್ಲಿ ಮರ್ಯಾದೆ ಉಳಿಸಿಕೊಳ್ಳಬೇಕು ಅಷ್ಟೇ, ಮುಂದೆ ಏನಾದರೂ ಸ್ವಾಭಿಮಾನಿಯಾಗಿ ನಿಂತುಕೊಳ್ಳಬೇಕು ಎಂದರೆ ನೀವೇ ಲೀಡರ್ ಆಗಬೇಕು. ಇವತ್ತು ಕುಮಾರಸ್ವಾಮಿ ವಿರುದ್ಧ ಅಲಯನ್ಸ್ ಮಾಡಿಕೊಂಡು ಯಾರ್ ಬಂದಿದ್ದಾರೆ ಹೇಳಿ, ನೀವೇ ಅರ್ಥ ಮಾಡಕೋಬೇಕು ಲೀಡರ್ ಗಳು
ಶಿವಪ್ರಕಾಶ್ ಬಾಬು : ಅಲ್ಲಾ ಅಣ್ಣ ಮಾಡುತ್ತೀವಿ, ಇಷ್ಟು ದಿನ ನೀವು ನೋಡಿದಹಾಗೆನೇ ಅಣ್ಣ ಇವತ್ತು
ಚೆಲುವರಾಯಸ್ವಾಮಿ : ನೀನ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ಇದು ನನ್ ಗನ್ ಮ್ಯಾನ್‍ದೇನೆ ನಂಬರ್, ಏನೇ ಆದರೂ ಸಿಕ್ಕು ಈ ನಂಬರ್ ಗೆ ಕಾಲ್ ಮಾಡು

vlcsnap 2019 03 24 11h44m06s574

ಶಿವಪ್ರಕಾಶ್ ಬಾಬು : ಅಣ್ಣ ನಾವು ನೀವ್ ಹೇಳಿದ ಹಾಗೇನೆ ಬರುತ್ತೀವಿ. ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಲ್ಲ. ಅಣ್ಣ, ನಾವು ನಿಮ್ಮನ್ನ ನಂಬಿಕೊಂಡು ಇರುತ್ತೀವಿ, ಆದರೆ ಯಾವ ರೀತಿ ರೆಸ್ಪಾನ್ಸ್ ಮಾಡೋದು ಅಣ್ಣ
ಚೆಲುವರಾಯಸ್ವಾಮಿ : ಮಂಡ್ಯದಲ್ಲಿ ಯಾವ ಲೀಡರ್ ಬೇಳೆಕಾಳ್ ಮಾಡಲ್ಲ. ನಾನ್ ಇದ್ದೀನಿ ಬಾರಯ್ಯ ತಲೆ ಕೆಡಿಸಿಕೊಳ್ಳಬೇಡ. ನನಗೆ ಗೊತ್ತಿದೆ ಮಾಡುತ್ತೀನಿ
ಶಿವಪ್ರಕಾಶ್ ಬಾಬು : ಈಗ ಮೊನ್ನೆ ಹೋಗಿ ಕುಮಾರಣ್ಣನ ಮಾತನಾಡಿಸಿಕೊಂಡು ಬಂದಿದ್ದೇವೆ ಅಣ್ಣ, ನಾಡಿದ್ದು ಮನೆಗೆ ಬರುತ್ತೀನಿ ಅಂದಿದ್ದಾರೆ ಅಣ್ಣ

ಚೆಲುವರಾಯಸ್ವಾಮಿ : ನೋಡುಗುರು ನಿನ್ ಇಷ್ಟ, ನನ್ ಮಾತಿಗೆ ಬೆಲೆ ಕೊಡುವುದಾದರೆ ಕೊಡು ಇಲ್ವಾ ನಿನ್ ಇಷ್ಟ. ಅರ್ಥಮಾಡಕೊಳ್ಳಿ ಬೇಳೆಕಾಳು ಯಾವ ಕುಮಾರಣ್ಣನು ಬರಲ್ಲಾ ನಿನ್ ಸತ್ತರೆ ನಾನ್ ಬರಬೇಕು ನಾನ್ ಸತ್ತರೆ ನೀನ್ ಬರಬೇಕು.
ಶಿವಪ್ರಕಾಶ್ ಬಾಬು : ಸರಿ ಅಣ್ಣ ನಿವ್ ಇವತ್ತು ಹೇಳುತ್ತೀರಾ ಅಣ್ಣ, ಆದರೆ ಮಂಡ್ಯದಲ್ಲಿ ಯಾರು ಲೀಡರ್ ಇಲ್ವಾಲ್ಲ ಅಣ್ಣ ನಾನ್ ಯಾರನ್ನ ಲೀಡರ್ ಮಾಡಲಿ ಅಣ್ಣ
ಚೆಲುವರಾಯಸ್ವಾಮಿ : ಅಲ್ಲಾ ನಿನಗೆ ನನಗಿಂತ ಯಾವ ಲೀಡರ್ ಬೇಕಾಯ್ಯ?
ಶಿವಪ್ರಕಾಶ್ ಬಾಬು : ಹೂಂ ಅಣ್ಣ ಮಾತಾಡುದ್ರಿ ಅವತ್ತು, ನಿನ್ನೆ ಮೊನ್ನೆ ಒಂದು ವಾರದಲ್ಲಿ ಸತೀಶ್ ಕೊಟ್ಟಾಗ ಮಾತಾಡುದ್ರಿ, ಮಾಡಬೇಕಪ್ಪ ನೀನ್ ಈ ಸಾರಿ ಸುಮಲತಾ ಅವರಿಗೆ ಅಂತ ಅದದ್ಮೇಲೆ ಇವತ್ತಿನ ವರೆಗೆ ಒಂದ್ ರೆಸ್ಪಾನ್ಸ್ ಇಲ್ಲಾ ಏನು ಇಲ್ಲಾ ನಾನು ಯಾರನ್ನ ಅಂತಾ ಮಾಡಲಿ

mnd 1

ಚೆಲುವರಾಯಸ್ವಾಮಿ : ಅಲ್ಲಾ ಅಲ್ಲಿ ಅಪ್ಪಾಜಿಗೆ, ಪುಟ್ಟಸ್ವಾಮಿಗೆ, ರಾಮಣ್ಣಗೆ ಹೇಳುತ್ತೀನಿ, ನಿಂತುಕೊಂಡು ಮಾಡು ತಲೆ ಕೆಡಿಸಿಕೊಳ್ಳ ಬೇಡ, ಬೇರೆ ಯಾವುದೇ ಕಾರಣಕ್ಕೂ ಹೋಗಬೇಡ
ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾಡಿದ್ದು ಕುಮಾರಣ್ಣ ಬರುತ್ತೀನಿ ಅಂತಾ ಹೇಳಿದ್ದಾರಣ್ಣ ನಾನೇನ್ ಮಾಡಲಿ ಹೇಳಿ ಅಣ್ಣ
ಚೆಲುವರಾಯಸ್ವಾಮಿ : ನೀನ್ 2 ದಿನ ಮನೆಯಲ್ಲಿ ಇರಬೇಡ ಎಲ್ಲದರೂ ಹೊರಗಡೆ ಹೋಗಿ ಬಾ
ಶಿವಪ್ರಕಾಶ್ ಬಾಬು : ಅಲ್ಲ ಅಣ್ಣ ನಾನ್ ಮಾತು ಕೊಟ್ಟಿದ್ದಿನಿ, ನೀವ್ ಬೇಕಾದರೆ ನೆಕ್ಸ್ಟ್ ಬನ್ನಿ ಅಣ್ಣ ನಾನ್ ಮಂಡ್ಯದಲ್ಲಿ ನಿಂತು ನಿಮಗೊಸ್ಕರ ಮಾಡುತ್ತೀನಿ ಅಣ್ಣ, ಈಗ ಅಪ್ಪಾಜಿ ಅಣ್ಣನೂ ಹೇಳಿದ್ರು ನನಗೆ 1 ಕೋಟಿ ಕೊಡುತ್ತೀನಿ ಎಂದು. ಆದರೆ ನಾನೇ ದುಡ್ಡು ಬೇಡ ಅಂದೆ ಅಣ್ಣ
ಚೆಲುವರಾಯಸ್ವಾಮಿ : ಏ ಬಾಬು ಆಯ್ತು ಹೋಗಪ್ಪ ಸುಮ್ಮನೆ ನನ್ ಹತ್ರ ವಾದ ಮಾಡಬೇಡ ಒಳ್ಳೆದಾಗಲಿ ಮಾಡೋಗೂ

Share This Article
Leave a Comment

Leave a Reply

Your email address will not be published. Required fields are marked *