ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಳ್ತಂಗಡಿಯಲ್ಲಿ ಚಿರತೆ ದುರಂತ ಸಾವು

Public TV
1 Min Read
MNG CHEETAH DEATH

ಮಂಗಳೂರು: ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಚಿರತೆ ದುರಂತ ಸಾವು ಕಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗುಂಡೂರಿನಲ್ಲಿ ನಡೆದಿದೆ.

ವೇಣೂರು ಬಳಿ ಸೆರೆ ಸಿಕ್ಕಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಜನವಸತಿ ಇರುವ ಪ್ರದೇಶದಲ್ಲಿ ಬಿಟ್ಟಿದ್ದರು. ಆದರೆ ಅಲ್ಲಿ ಕಾಡು ಹಂದಿಗೆಂದು ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದಿದೆ. ಎರಡು ದಿನಗಳ ಬಳಿಕ ಚಿರತೆ ಸಿಲುಕಿಕೊಂಡಿರುವುದು ಸ್ಥಳೀಯರಿಗೆ ಗೊತ್ತಾಗಿದೆ.

MNG CHEETHA DEATH 4

ಚಿರತೆ ಉರುಳಿಗೆ ಬಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದೆ. ಕಳೆದ ಸೋಮವಾರ ಚಿರತೆಯನ್ನು ಜನವಸತಿ ಇರುವಲ್ಲಿ ಬಿಟ್ಟಿದ್ದಕ್ಕೆ ಸ್ಥಳೀಯರು ಅರಣ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗ ಅದೇ ಚಿರತೆ ಸಾವನ್ನಪ್ಪಿರುವುದನ್ನು ನೋಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಚಿರತೆ ಸಾವನ್ನಪ್ಪಿದೆ ಎಂದು ಆರೋಪಿಸುತ್ತಿದ್ದಾರೆ. ವೇಣೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.

MNG CHEETHA DEATH

MNG CHEETHA DEATH 3 1

 

Share This Article
Leave a Comment

Leave a Reply

Your email address will not be published. Required fields are marked *