ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಿತ್ಲತೋಟ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಗ್ರಾಮದ ವೆಂಕಟರಮಣ ಹೆಗಡೆ ಎಂಬವರ ಮನೆಯ ಎದುರಿದ್ದ ಬಾವಿಗೆ ಚಿರತೆ ಬಿದ್ದಿತ್ತು. ಚಿರತೆ ರಾತ್ರಿ ವೇಳೆ ನಾಯಿಯನ್ನು ಹಿಡಿಯಲು ಬಂದಿತ್ತು. ಈ ವೇಳೆ ಕತ್ತಲೆಯಲ್ಲಿ ಏನೂ ಕಾಣದೆ ಮನೆಯ ಬಾವಿಗೆ ಬಿದ್ದಿದೆ.
ಬಾವಿಗೆ ಬಿದ್ದ ಶಬ್ಧ ಕೇಳಿ ನೋಡಿದಾಗ ಚಿರತೆ ಬಿದ್ದಿರುವ ದೃಶ್ಯ ಮನೆಯವರಿಗೆ ಕಂಡು ಬಂದಿತ್ತು. ಚಿರತೆಯನ್ನು ನೋಡಿದ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರೋಪ್ ಮೂಲಕ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ.
ಬಾವಿಯಿಂದ ಮೇಲೆ ಬಂದ ತಕ್ಷಣ ಚಿರತೆ ಅರಣ್ಯದ ಕಡೆ ಪಲಾಯನ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv