ಮರಿಗಳನ್ನು ಹುಡುಕಿಕೊಂಡು ಬಂದು ಬೋನಿಗೆ ಬಿದ್ದ ತಾಯಿಚಿರತೆ

Public TV
1 Min Read
MND CHEEETH AV1

ಮಂಡ್ಯ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ತಾಯಿ ಚಿರತೆಯೊಂದು ಸೆರೆಯಾದ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಕೆಆರ್ ಪೇಟೆಯ ಕಳ್ಳನಕೆರೆ ಗ್ರಾಮದ ದೇವರಾಜು ಎಂಬವರ ಜಮೀನಿನಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಬಳಿಕ ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗಿತ್ತು.

ಮರಿಗಳು ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ಖಚಿತಗೊಂಡ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿ ಮರಿಗಳು ಸಿಕ್ಕ ಜಾಗದಲ್ಲಿ ಒಂದು ಬೋನು ಇರಿಸಿದ್ದರು. ಇದ್ರಿಂದ ತನ್ನ ಮೂರು ಮರಿಗಳನ್ನ ಹುಡುಕಿಕೊಂಡು ಬಂದ ತಾಯಿ ಚಿರತೆ ಇಂದು ಬೋನಿಗೆ ಬಿದ್ದಿದೆ.

ಸದ್ಯ ಚಿರತೆ ಆತಂಕದಿಂದ ಕಂಗಾಲಾಗಿದ್ದ ಗ್ರಾಮಸ್ಥರು, ಚಿರತೆ ಸೆರೆಯಾದ ಹಿನ್ನಲೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಸೆರೆಯಾದ ಚಿರತೆ ನೋಡಲು ಸ್ಥಳಕ್ಕೆ ಜನರ ದಂಡೆ ಹರಿದು ಬಂದಿದೆ. ಆದ್ರೆ ವಿಚಾರ ತಿಳಿಸಿದ್ರೂ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಬಾರದೇ ಇದ್ದಿದ್ದನ್ನು ಕಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

vlcsnap 2017 11 11 09h08m19s193

vlcsnap 2017 11 11 09h08m28s37

vlcsnap 2017 11 11 09h08m38s130

vlcsnap 2017 11 11 09h08m44s187

vlcsnap 2017 11 11 09h08m51s12

vlcsnap 2017 11 11 09h09m02s118

Share This Article
Leave a Comment

Leave a Reply

Your email address will not be published. Required fields are marked *