ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಚೀಟಿಂಗ್ ಕೇಸ್

Public TV
1 Min Read
chandrashekar swamiji

ಬೆಂಗಳೂರು: ಆರ್.ಟಿ.ನಗರದಲ್ಲಿರುವ ಪ್ರಸಿದ್ಧ ಜ್ಯೋತಿಷಿ  ಚಂದ್ರಶೇಖರ್ ಭಟ್ ವಿರುದ್ಧ ಚೀಟಿಂಗ್ ಕೇಸ್ ದಾಖಲಾಗಿದೆ.

ಆಶ್ರಫ್ ಅಲಿ ಎಂಬುವರು ಈ ಸಂಬಂಧ ದೂರು ನೀಡಿದ್ದಾರೆ. ಸ್ವಾಮೀಜಿ ಅಲ್ಲದೇ ಚಂದ್ರಶೇಖರ್ ಭಟ್ ಅವರ ಪತ್ನಿ ರಜಿನಿ ಸಿ ಭಟ್ ಹಾಗು ಗಿರೀಶ್ ಕಾಮತ್ ಅವರ ವಿರುದ್ಧವೂ ವಂಚನೆ ಕೇಸ್ ದಾಖಲಾಗಿದೆ.

ಅರಮನೆ ಮೈದಾನದ ಸುತ್ತಾಮುತ್ತ ಹೋರ್ಡಿಂಗ್ಸ್ ಕೊಡಿಸುವ ವಿಚಾರವಾಗಿ 2 ಕೋಟಿ ರೂಪಾಯಿ ದುಡ್ಡು ಪಡೆದುಕೊಂಡು ಈಗ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳು ಇದಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ನನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಂಚನೆ ಪ್ರಕರಣವನ್ನು ತನಿಖೆ ನಡೆಸಲು ಆರ್.ಟಿ.ನಗರ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *