ಉಡುಪಿ: ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಚಂದ್ರಗ್ರಹಣದ ಸಂದರ್ಭದಲ್ಲಿ ಎಲ್ಲೆಡೆ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಾಗಿಲು ಮುಚ್ಚಲಾಗಿದೆ. ಆದರೆ ಉಡುಪಿ ಶ್ರೀಕೃಷ್ಣ ಮಠವನ್ನು ಸಂಪೂರ್ಣವಾಗಿ ತೆರೆಯಲಾಗಿದೆ.
ಗ್ರಹಣ ಕಾಲದಲ್ಲಿ ಜಪ, ತಪ, ಧ್ಯಾನಕ್ಕೆ ಮಠದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮಠದ ಪ್ರವೇಶ ದ್ವಾರ ಮುಚ್ಚದೇ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಾಗುತ್ತಿದ್ದಂತೆ ಹಲವು ದೇವಾಲಯಗಳನ್ನು ಮುಚ್ಚಲಾಗಿತ್ತು. ಅಲ್ಲಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದಾದ ಬಳಿಕ ಬಾಗಿಲು ಹಾಕಿ ನಿರ್ಬಂಧ ವಿಧಿಸಲಾಯಿತು. ಗ್ರಹಣ ಮುಗಿಯುವವರೆಗೂ ಬಾಗಿಲು ತೆರೆಯುವುದಿಲ್ಲ. ಗ್ರಹಣ ಮುಗಿದ ಬಳಿಕ ದೇವಾಲಯಗಳ ಶುದ್ಧೀಕರಣ ಮಾಡಿ ನಂತರ ಬಾಗಿಲು ತೆರೆಯಲಾಗುವುದು.
ವಿಜ್ಞಾನ ಲೋಕಕ್ಕೆ ಚಂದ್ರಗ್ರಹಣವೆಂಬುದು ಒಂದು ಕೌತುಕ. ನಭೋಮಂಡಲದಲ್ಲಿ ಅಪರೂಪಕ್ಕೊಮ್ಮೆ ಸಂಭವಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ವಿಜ್ಞಾನಾಸಕ್ತರು ಕಾತರರಾಗಿದ್ದರು. ಚಂದ್ರಗ್ರಹಣ ವೀಕ್ಷಿಸಲು ನೆಹರೂ ತಾರಾಲಯದಲ್ಲಿ ಜನರಿಗೆ ಅವಕಾಶ ಕಲ್ಪಿಸಲಾಯಿತು. ಜನರು ಟೆಲಿಸ್ಕೋಪ್ನಲ್ಲಿ ಚಂದ್ರಗ್ರಹಣ ಕಣ್ತುಂಬಿಕೊಂಡರು.
Web Stories