Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

Bengaluru City

ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

Public TV
Last updated: July 23, 2018 5:43 pm
Public TV
Share
4 Min Read
Chandra Grahan Astrology Prediction
SHARE

– ಗ್ರಹಣ ದಿನ ಏನ್ಮಾಡ್ಬೇಕು ಎಂದು ವಿವರಿಸಿದ್ದಾರೆ ಜ್ಯೋತಿಷಿಗಳು
– ನಂಬಿಕೆಯಿಲ್ಲದವರು ಆಕಾಶದ ವಿಸ್ಮಯ ನೋಡಿ ಎಂಜಾಯ್ ಮಾಡಿ

ಬೆಂಗಳೂರು: ಬಾನಂಗಳದ ಚಂದಿರ ಹುಣ್ಣಿಮೆಯ ದಿನವೂ ಮಂಕಾಗಲಿದ್ದಾನೆ. ಬಾಹ್ಯಕಾಶದಲ್ಲಿ ನಡೆಯುವ ವಿಸ್ಮಯ ಮನುಕುಲದ ಮೇಲೆ ಬೀರುವ ಪ್ರಭಾವ ಅಷ್ಟೇ ರೌದ್ರವಂತೆ. ಜುಲೈ 27 ರ ಹುಣ್ಣಿಮೆಯ ರಾತ್ರಿ 11.54 ರಿಂದ 3.40 ರವೆಗೆ ಸಂಭವಿಸುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಯಾವ ರಾಶಿಗಳಿಗೆ ಕೆಡುಕನ್ನುಂಟು ಮಾಡಲಿದೆ, ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳುವ ಮಾರ್ಗ ಹೇಗೆ..? ಜ್ಯೋತಿಷಿಗಳು ಏನ್ ಹೇಳ್ತಾರೆ ಹುಣ್ಣಿಮೆ ಚಂದಿರನ ರಾಶಿಗಳ ಜೊತೆಗಿನ ಆಟ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿಗಳು ವಿವರಿಸಿದ್ದಾರೆ.

ಹುಣ್ಣಿಮೆ ಚಂದಿರನ ವಕ್ರದೃಷ್ಟಿ ಯಾವ ರಾಶಿಯ ಮೇಲೆ ಬೀರಲಿದೆ?: ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ ಮಕರ ರಾಶಿ, ಮೇಷ, ವೃಷಭ ಮತ್ತು ಮಿಥುನ ಲಗ್ನದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದೆ. ಇದು ನಾಲ್ಕು ರಾಶಿಗಳ ಮೇಲೆ ತೀರಾ ಕೆಡುಕು, ನಾಲ್ಕು ರಾಶಿಗಳಿಗೆ ಮಿಶ್ರ ಫಲ ಹಾಗೂ ನಾಲ್ಕು ರಾಶಿಗಳಿಗೆ ಕೊಂಚ ಶುಭದಾಯಕವಾಗಿದೆ. ಆದ್ರೇ ಇದು ಭೂಮಂಡಲವನ್ನೇ ಅಲುಗಾಡಿಸುವಂತೆ ಮಾಡುವ ಚಂದಿರನ ಹೊಳಪನ್ನು ಮರೆಮಾಚುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

Chandra Grahan 1

ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಏನು ಪ್ರಭಾವ?: ಈ ಚಂದ್ರಗ್ರಹಣ ನಕ್ಷತ್ರ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಯಾವ ರಾಶಿಯವರಿಗೆ ಚಂದ್ರನ ಪ್ರಭಾವ ಇರುತ್ತೋ ಅವ್ರಿಗೆ ಕೆಡುಕು, ಚಿಂತೆ, ಅನಾರೋಗ್ಯ, ಮಾನಹಾನಿ ಸೇರಿದಂತೆ ನಾನಾ ಕಂಟಕ ತಲೆದೋರಲಿದೆ ಅಂತಾ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ. ಮುಖ್ಯವಾಗಿ ಉತ್ತರಾಷಾಢ, ಕೃತಿಕಾ, ಉತ್ತರ, ಶ್ರವಣ, ರೋಹಿಣಿ, ಹಸ್ತ ನಕ್ಷತ್ರದವರಿಗೆ ತೀವ್ರ ತೊಂದರೆ ಕಾಡಲಿದ್ದು, ರಾಶಿ ಪ್ರಕಾರ ಮಕರ, ಧನಸ್ಸು, ವೃಷಭ, ಸಿಂಹ ರಾಶಿಯವರಿಗೆ ದೋಷದ ಫಲ ಹೆಚ್ಚಾಗಿ ಆಗುತ್ತದೆ. ಕೆಲವು ರಾಶಿಗೆ ಕೆಡುಕು ಮಾಡುವ ಈ ಚಂದ್ರಗ್ರಹಣ ವೃಶ್ಚಿಕ, ಮೀನ, ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವಾದ್ರೂ ದ್ವಾದಶ ರಾಶಿಗಳಿಗೂ ಕಂಟಕ ಎದುರಾಗೋದ್ರಿಂದ ಎಲ್ಲರಿಗೂ ಗ್ರಹಣ ದೋಷ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

ಆನ್ ಲೈನ್ ಬುಕ್ಕಿಂಗ್ ಶುರು!: ಚಂದ್ರಗ್ರಹಣದ ನೆರಳು ಬೀಳುವ ಸೂಚನೆ ಸಿಕ್ಕಾಗ ಮನುಷ್ಯ ಜೀವ ತಲ್ಲಣಿಸುತ್ತೆ. ಈ ಗ್ರಹಣ ದೋಷದಿಂದ ಪಾರಾಗುವ ಬಗೆ ಹೇಗೆ? ಬದುಕಿನ ಗಂಡಾಂತರ ನಿವಾರಣೆಯಾಗಲು ಏನು ಮಾಡಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆ. ಖಂಡಿತಾ ಇದಕ್ಕೆಲ್ಲ ಮಾರ್ಗೋಪಾಯಗಳಿವೆ. ಗ್ರಹಣ ದೋಷ ನಿವಾರಣೆಗಾಗಿ ಆಯಾಯ ರಾಶಿ ನಕ್ಷತ್ರಗಳ ದೋಷ ನಿವಾರಣೆಗಾಗಿ ದೇಗುಲಗಳಲ್ಲಿ ಪೂಜೆ ಪುನಸ್ಕಾರಕ್ಕೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಈಗಾಗಲೇ ಬಹುತೇಕ ದೇಗುಲಗಳ ಮುಂದೆ ಗ್ರಹಣ ದೋಷ ನಿವಾರಣಾ ಪೂಜೆಯ ವಿವರದ ಬ್ಯಾನರ್ ಬಿದ್ದಾಗಿದೆ. ಅಷ್ಟೇ ಯಾಕೆ ಕೆಲ ದೇಗುಲದಲ್ಲಿ ಗ್ರಹಣ ದೋಷ ಪೂಜೆ ನಿವಾರಣೆಗಾಗಿ ಅನ್ ಲೈನ್ ಬುಕ್ಕಿಂಗ್ ಗೆ ಜನ ಮುಗಿಬೀಳುತ್ತಿದ್ದಾರೆ ಎಂದು ಉಮಾಮಹೇಶ್ವರಿ ದೇವಸ್ಥಾನದ ಸೂರ್ಯಪ್ರಕಾಶ ಗುರೂಜಿ ಹೇಳಿದ್ದಾರೆ.

ವಿಚಿತ್ರ ಅಂದ್ರೆ ಮನುಕುಲಕ್ಕೆ ಮಾತ್ರವಲ್ಲ, ದೇಗುಲದ ಗರ್ಭಗುಡಿಯೊಳಗೂ ದೇವರಿಗೆ ಗ್ರಹಣದ ಸಂದರ್ಭದಲ್ಲಿ ಬಂಧನ ಭೀತಿ. ದರ್ಭೆಯಲ್ಲಿ ದೇವರನ್ನು ಬಂಧಿಸಿಡಲಾಗುತ್ತೆ. ಆದರೆ ಜನರ ವಿಪರೀತ ಭಯದಿಂದಾಗಿ ಕೆಲ ದೇಗುಲದಲ್ಲಿ ಜುಲೈ 27ರಲ್ಲಿ ಮಿಡ್ ನೈಟ್ ಪೂಜೆ ಪ್ರಾರ್ಥನೆಗಳು ಯಾಗ ಹೋಮಗಳು ಕೂಡ ನಡೆಯಲಿದೆ.

Chandra Grahan 2

ಗ್ರಹಣ ದೋಷ ನಿವಾರಣೆ ಹೇಗೆ?: ಗ್ರಹಣ ದೋಷ ನಿವಾರಣೆಗಾಗಿ ಜುಲೈ 28ರ ಬೆಳಗಿನ ಜಾವ ಎಲ್ಲಾ ದೇಗುಲದಲ್ಲೂ ಹೋಮ ಹವನ ನಡೆಯಲಿದೆ. ದೇವರ ಜಪ ಪೂಜೆಯ ಜೊತೆಗೆ ಚಂದ್ರಗ್ರಹ ಶಾಂತಿಗೆ, ಅಕ್ಕಿ, ಬಿಳಿವಸ್ತ್ರ, ಹಾಲು ದಾನ, ಉಪ್ಪು ಹಾಕದ ಮೊಸರನ್ನ ದಾನ, ಶ್ರೀ ದುರ್ಗಾಸ್ತುತಿ ಹಾಗೂ ಕೇತುಗ್ರಹ ಶಾಂತಿಗೆ ಹುರುಳಿಕಾಳು, ಚಿತ್ರವಸ್ತ್ರ, ಶ್ರೀ ಗಣೇಶನಿಗೆ ಕೆಂಪು ಕಣಿಗಲೆ ಹೂವು ಸಮರ್ಪಣೆ, ಮೃತ್ಯುಂಜಯ ಜಪ ಮಾಡಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

ಗ್ರಹಣದ ದಿನ ಊಟ, ತಿಂಡಿ ಹೇಗೆ?: ಗ್ರಹಣದ ದಿನ ಮಧ್ಯಾಹ್ನ 2.30ರ ತನಕ ಭೋಜನ ಮಾಡಬಹುದು. ಅನಾರೋಗ್ಯ ಇರುವವರು ರಾತ್ರಿ 7.30ರೊಳಗೆ ಭೋಜನ ಮುಗಿಸುವುದು ಒಳ್ಳೆಯದು ಅನ್ನುವ ಸಲಹೆಯನ್ನು ನೀಡಿದ್ದಾರೆ. ಗ್ರಹಣದ ಸಂದರ್ಭದಲ್ಲಿ ಭೋಜನ ನಿಷಿದ್ಧ. ಗ್ರಹಣದ ಬಳಿಕ ತಣ್ಣೀರ ಸ್ನಾನವನ್ನು ಮಾಡಿ ಶಿವನ ದರ್ಶನ ಪಡೆದರೆ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇನ್ನು ಮನುಷ್ಯರಿಗೆ ಮಾತ್ರವಲ್ಲ ದೇಗುಲದಲ್ಲೂ ಗ್ರಹಣ ದೋಷ ನಿವಾರಣೆಗಾಗಿ ದೇವರಿಗೆ ದರ್ಭೆಯ ಪೂಜೆಯ ಬಳಿಕ ಸಂಪ್ರೋಕ್ಷಣಾ ವಿಧಿ ವಿಧಾನ ನಡೆಯಲಿದ್ದು, ಕ್ಷುದ್ರಗೊಂಡ ದೇವರನ್ನು ತಣಿಸಲು ಎಳನೀರಿನ ಅಭಿಷೇಕ, ಕ್ಷೀರಾಭಿಷೇಕಗಳು ನಡೆಯಲಿದೆ. ಇಡೀ ದೇಗುಲದ ಪ್ರಾಂಗಣ, ಗರ್ಭಗುಡಿಯನ್ನು ಶುದ್ಧೀಕರಿಸಲಾಗುತ್ತೆ. ಹೀಗೆ ಗ್ರಹಣದ ದೋಷ ನಿವಾರಣೆಗೆ ನಾನಾ ಮಾರ್ಗಗಳು ಇವೆ.

ನಂಬಿಕೆಯಿಲ್ಲದವರು ಹೀಗೆ ಮಾಡಿ!: ನಮಗೆ ಗ್ರಹಣದ ಬಗ್ಗೆ ನಂಬಿಕೆಯಿಲ್ಲ. ಇವೆಲ್ಲವನ್ನೂ ನಂಬಲು ನಾವು ಸಿದ್ಧವಿಲ್ಲ ಎನ್ನುವವರೂ ಇದ್ದಾರೆ. ಅಂಥವರು ಆಕಾಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿಯಾಗಲು ವಿಪರೀತ ಭಯವೂ ಬೇಕಾಗಿಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ನಭದ ಕೌತುಕ ಕಣ್ತುಂಬಿಸಿಕೊಳ್ಳುವ ಉತ್ಸಾಹವಿದ್ದರೆ ದಿಗಂತದತ್ತ ದೃಷ್ಟಿ ಹಾಯಿಸಿ. ದೋಷ, ಸಮಸ್ಯೆ, ಕಂಟಕ ಎಲ್ಲವನ್ನೂ ಮರೆತು ಬಾನಂಗಳದ ಚಂದಮಾಮನ ಇನ್ನೊಂದು ಅವತಾರವನ್ನು ನೋಡಿ ಎಂಜಾಯ್ ಮಾಡಿ.

Chandra Grahan 3

TAGGED:Astrology PredictionbengaluruchandragrahanaLunar eclipseಚಂದ್ರಗ್ರಹಣಜ್ಯೋತಿಷ್ಯಬೆಂಗಳೂರು
Share This Article
Facebook Whatsapp Whatsapp Telegram

Cinema news

Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories

You Might Also Like

Om Birla
Latest

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ

Public TV
By Public TV
16 minutes ago
Supreme Court 1
Court

ಎಸ್‌ಐಆರ್‌ ಪ್ರಕ್ರಿಯೆಗೆ ಅಡ್ಡಿಪಡಿಸಲಾಗುವುದಿಲ್ಲ: ರಾಜ್ಯಗಳಿಗೆ ‘ಸುಪ್ರೀಂ’ ಸ್ಪಷ್ಟ ಸಂದೇಶ

Public TV
By Public TV
24 minutes ago
mekedatu 1
Bengaluru City

ಸಂಗಮ ಕೆಳಭಾಗದಲ್ಲಿ ಮೇಕೆದಾಟು ಡ್ಯಾಂಗೆ ಸ್ಥಳ ನಿಗದಿ – ಕೇಂದ್ರಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

Public TV
By Public TV
40 minutes ago
Student Kills Girl Then Shoots Himself In 3 Second Classroom Horror
Crime

ಕ್ಲಾಸ್‌ ರೂಮ್‌ನಲ್ಲೇ ಯುವತಿಗೆ ಗುಂಡು ಹಾರಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

Public TV
By Public TV
48 minutes ago
KL Rahul
Cricket

ಆಪತ್ಬಾಂಧವ ಕೆ.ಎಲ್‌ ರಾಹುಲ್ ಅದ್ಭುತ ಶತಕ – ರಣಜಿ ಸೆಮಿಫೈನಲ್‌ಗೆ ಕರ್ನಾಟಕ

Public TV
By Public TV
1 hour ago
rcb g.parameshwara
Bengaluru City

ಬೆಂಗಳೂರಿನಲ್ಲಿ RCB ಪಂದ್ಯ ನಡೆಸಲು ಮುಂದುವರಿದ ಕೆಎಸ್‌ಸಿಎ ಕಸರತ್ತು; ಪರಮೇಶ್ವರ್ ಭೇಟಿ ಮಾಡಿದ ಕೆಎಸ್‌ಸಿಎ, ಆರ್‌ಸಿಬಿ ನಿಯೋಗ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?