ಸೆಪ್ಟೆಂಬರ್ 7 ಭಾನುವಾರ ರಾತ್ರಿ ರಾಹು ಗ್ರಸ್ತ ಚಂದ್ರಗ್ರಹಣ ನಡೆಯಲಿದೆ. ರಾತ್ರಿ 09:45ರಿಂದ ಸೆ.8 ರ ನಸುಕಿನ ಜಾವ 1:27ರವರೆಗೆ ಗ್ರಹಣ ನಡೆಯಲಿದೆ. ಈ ಸಮಯದಲ್ಲಿ ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಿದರೆ ಒಳ್ಳೆದಾಗುತ್ತದೆ. ಗ್ರಹಣಕ್ಕೆ ಸಂಬಂಧಿಸಿದಂತೆ ರಾಶಿಫಲಗಳನ್ನು ಇಲ್ಲಿ ನೀಡಲಾಗಿದೆ.
ಮೇಷ: ಉದ್ಯೋಗದಲ್ಲಿ ಕಲಹ, ಆರೋಗ್ಯ ಸಮಸ್ಯೆ, ಗ್ರಹಣ ಬಳಿಕ ಇನ್ನಷ್ಟು ಸಂಕಷ್ಟ, ವ್ಯವಹಾರದಲ್ಲಿ ತೊಂದರೆ.
ವೃಷಭ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಗತ್ಯ ಮಾತು ಬೇಡ, ಮಾತಿನ ಮೇಲೆ ನಿಗಾ ಇರಲಿ, ಆರೋಗ್ಯದ ಕಡೆ ಎಚ್ಚರವಿರಲಿ, ಮೊಣಕಾಲು, ಸೊಂಟ ನೋವಿನ ಬಾಧೆ, ರಕ್ತ ಸಂಬಂಧ ಕಾಯಿಲೆ ಬಗ್ಗೆ ಎಚ್ಚರ.
ಮಿಥುನ: ಗ್ರಹಣದಿಂದ ಲಾಭವೂ ಇಲ್ಲ. ನಷ್ಟವೂ ಇಲ್ಲ, ಮಾನಸಿಕ ಕಿರಿಕಿರಿ, ಒತ್ತಡ, ಜೀವನದಲ್ಲಿ ಬದಲಾವಣೆಯ ಸಮಯ.
ಕರ್ಕಾಟಕ: ಆರ್ಥಿಕ ಸಂಕಷ್ಟ ಎದುರಾಗಲಿದೆ, ಆಚಾತುರ್ಯ ನಡೆಯಬಹುದು, ಕಷ್ಟ-ಸುಖ ಸಮತೋಲನದಲ್ಲಿರಲಿದೆ.
ಸಿಂಹ: ನಾನು, ನನ್ನದೆಂಬ ಮೊಂಡಾಟ ಬೇಡ, ಮೊಂಡು ಹಠ ಜಾಸ್ತಿ ಆಗಲಿದೆ, ಗ್ರಹಣದಿಂದ ವಿಶೇಷ ಲಾಭವಿಲ್ಲ, ಈ ರಾಶಿಯವರಿಗೆ ಗುರುಬಲ ಇದೆ. ಮಾನಸಿಕ ಸ್ಥಿತಿ ಹತೋಟಿಯಲ್ಲಿರಲಿದೆ.
ಕನ್ಯಾ: ಗ್ರಹಣದಿಂದ ಕೊಂಚ ಒಳ್ಳೆಯದಾಗಲಿದೆ, ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ.
ತುಲಾ: ಕೆಲಸವನ್ನು ಮುನ್ನುಗ್ಗಿ ಮಾಡಬೇಕು, ದೇವರು ಕೊಟ್ಟ ವರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ನಿಮ್ಮ ಉದ್ಧಾರದ ಜೊತೆ ಬೇರೆಯವರ ಉದ್ಧಾರವೂ ಸಾಧ್ಯ, ನಿಮ್ಮ ಪ್ರಯತ್ನ ನಿರಂತರವಾಗಿರಲಿ.
ವೃಶ್ಚಿಕ: ಸಮಾಧಾನರಾಗಿರಿ, ಸಂತೃಪ್ತರಾಗಿರಿ, ಕಿರಿಕಿರಿ ಬೇಡ, ದುಡ್ಡು ಬಾರದೇ ಸಮಸ್ಯೆ ಅನುಭವಿಸಿರುತ್ತೀರಿ, ಹಿರಿಯರ ಅನುಭವದ ಮಾತು ಪಾಲಿಸಿ.
ಮಕರ: ಕಳೆದ ಆರು ತಿಂಗಳಿನಿಂದ ಸಮಸ್ಯೆ ಇದೆ, ಮಾಡದಿರುವ ತಪ್ಪುಗಳಿಗೆ ತಲೆಬಾಗಿಸುವ ಪರಿಸ್ಥಿತಿ ಇದೆ, ಗ್ರಹಣದಿಂದ ಮುಂದಿನ 6 ತಿಂಗಳು ಹುಷಾರಾಗಿರಬೇಕು, ಗುರು, ಶನಿ ವಕ್ರನಿರುವುದರಿಂದ ಸಮಸ್ಯೆ ಇರಲಿದೆ.
ಧನುಸ್ಸು: ಮುಂದಿನ 3 ತಿಂಗಳು ಲಾಭದಾಯಕವಾಗಿಲ್ಲ, ಜೀವನದಲ್ಲಿ ಪರಿವರ್ತನೆ ಕಾಲ ಸಮೀಪಿಸುತ್ತಿದೆ.
ಕುಂಭ: ಬಹಳಷ್ಟು ಸಮಸ್ಯೆಗಳಿವೆ, ವಿದ್ಯೆ, ಬುದ್ಧಿಯಿಂದ ಎಲ್ಲ ಸರಿಮಾಡಿಕೊಳ್ಳಬೇಕು, ಸಜ್ಜನರ ಜೊತೆಗೆ ಇರಬೇಕು, ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ.
ಮೀನಾ: ದೂರದ ಪ್ರಯಾಣ ಬೇಡ, ಕೊಟ್ಟಿರೋದನ್ನು ವಾಪಸ್ ತೆಗೆದುಕೊಳ್ಳೋದು ಕಷ್ಟ, ಗ್ರಹಣ ಛಾಯೆಯಿಂದ ಕೆಲ ತೊಂದರೆ ಎದುರಾಗಬಹುದು, ಆರು ತಿಂಗಳ ಬಳಿಕ ಒಳಿತಾಗಲಿದೆ.