ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಪರ್ ಹಾಗೂ ಬಿಗ್ ಬಾಸ್-5ರ ವಿಜೇತ ಚಂದನ್ ಶೆಟ್ಟಿ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಜೊತೆ ಬಂದು ಮತ ಚಲಾಯಿಸಿದ್ದಾರೆ.
ಚಂದನ್ ಶೆಟ್ಟಿ ಮತ ಚಲಾಯಿಸಿ ಬಂದ ಕೂಡಲೇ ಅವರನ್ನು ಪುಟ್ಟ ಮಕ್ಕಳು ಆಗಮಿಸಿದ್ದರು. ಮಕ್ಕಳು ಚಂದನ್ ಶೆಟ್ಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಂತರ ಚಂದನ್ ಶೆಟ್ಟಿ ಮಕ್ಕಳ ಮೂಲಕ ಮತ ಚಲಾಯಿಸಿ ಎಂಬ ಜಾಗೃತಿ ಮೂಡಿಸಿದರು.
ಮತದಾನ ನಮ್ಮೆಲ್ಲರ ಹಕ್ಕು. ನಾವು ಪ್ರಜೆ ಎಂದು ಪ್ರೂವ್ ಮಾಡಿಕೊಳ್ಳಲು ಒಳ್ಳೆಯ ದಿನ. ನಾವು ಪ್ರಜೆಯಾಗಿದ್ದಕ್ಕೂ ಸಾರ್ಥಕವಾಗೋ ದಿನ. ನೀವು ಕೂಡ ಮತಚಲಾಯಿಸಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ ಎಂದು ಚಂದನ್ ಶೆಟ್ಟಿ ಹೇಳಿದರು.
ಚಂದನ್ ಶೆಟ್ಟಿ ಕೊನೆಯಲ್ಲಿ ತಮ್ಮ ರ್ಯಾಪ್ ಸಾಂಗ್ ಮೂಲಕ ಎಲ್ಲರಿಗೂ ಮತದಾನದ ಜಾಗೃತಿ ಮೂಡಿಸಿದ್ದಾರೆ. “ವೋಟ್ ಮಾಡಬೇಕು ನಾವು ವೋಟ್ ಮಾಡಬೇಕು” ಎಂದು ಸಾಂಗ್ ಹೇಳುವ ಮೂಲಕ ಚಂದನ್ ಮತದಾನದ ಜಾಗೃತಿ ಮೂಡಿಸಿದರು.