‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

Public TV
1 Min Read
Ane bala 10

ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

Anany Bhat Yograj Bhat

ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ. ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತಿ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.

ಜನತಾ ಟಾಕೀಸ್ ಬ್ಯಾನರ್ ಸಂಸ್ಥೆಯಡಿ ಎ.ವಿ ವೇಣುಗೋಪಾಲ್ (ಅಡಕಿಮಾರನಹಳ್ಳಿ) ನಿರ್ಮಿಸಿರುವ ‘ಆನೆ ಬಲ’ ಸಿನಿಮಾ ಇದೇ 28 ರಂದು ರಿಲೀಸ್ ಆಗ್ತಾ ಇದೆ. ಈಗಾಗಲೇ ಪೋಸ್ಟರ್, ಟ್ರೇಲರ್ ಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಹಾಡೊಂದು ರಿಲೀಸ್ ಆಗಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಸೂನಗಹಳ್ಳಿ ರಾಜು ನಿರ್ದೆಶನ ಮಾಡಿದ್ದು, ಜೆ.ಟಿ ಬೆಟ್ಟೆಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *