ಚಾಮರಾಜನಗರ: ಪರೇಡ್ ವೇಳೆ ರೌಡಿಶೀಟರ್ಗೆ ಎಸ್ಪಿ ಹೆಚ್.ಡಿ ಆನಂದ್ ಕುಮಾರ್ ಅವರು ಕಪಾಳಮೋಕ್ಷ ಮಾಡಿದ್ದಾರೆ.
ಗೌರಿ-ಗಣೇಶ, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಎಸ್ಪಿ ರೌಡಿಗಳ ಪರೇಡ್ ಆಯೋಜಿಸಿದರು. ಈ ವೇಳೆ ಎಸ್ಪಿ ರೌಡಿಶೀಟರ್ಗಳಿಗೆ ಪ್ರಶ್ನೆ ಕೇಳುತ್ತಿದ್ದರು. ಆದರೆ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಹುಸಿ ನಗುತ್ತಿದ್ದನು. ಇದರಿಂದ ಕೋಪಗೊಂಡ ಎಸ್ಪಿ ಕಪಾಳಮೋಕ್ಷ ಮಾಡಿದ್ದಾರೆ.
ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನನಲ್ಲಿ ಎಸ್ಪಿ ಹೆಚ್.ಡಿ ಆನಂದ್ ಕುಮಾರ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಯಿತು. ಈ ವೇಳೆ ಚಾಮರಾಜನಗರ ವಿಭಾಗದ 150ಕ್ಕೂ ಹೆಚ್ಚು ರೌಡಿಶೀಟರ್ಗಳು ಪರೇಡ್ನಲ್ಲಿ ಭಾಗಿಯಾದರು.
ಬಳಿಕ ಎಸ್ಪಿ ಆನಂದ್ ಕುಮಾರ್ ಅವರು ಸಮಾಜ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ಗಳಿಗೆ ಬಿಸಿ ಮುಟ್ಟಿಸುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.