ಶಿಕ್ಷಣ ಸಚಿವರ ಮನ ಗೆದ್ದ ಸಾಂಬಾರ್ ಬಸವಣ್ಣ

Public TV
1 Min Read
CNG SURESH 111

ಚಾಮರಾಜನಗರ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಸಚಿವ ಸುರೇಶ್ ಕುಮಾರ್ ಬೆಟ್ಟದಲ್ಲಿನ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು ‘ನನ್ನ ಮನ ಮುಟ್ಟಿದ ಸನ್ನಿವೇಶ’ ಎಂದು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸಚಿವರು ಬರೆದಿದ್ದೇನು?:
ಇಂದು ನನ್ನ ಮನ ಮುಟ್ಟಿದ ಸನ್ನಿವೇಶ. ಬೆಳಗ್ಗೆಯಿಂದ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಅಭಿವೃದ್ಧಿ ಪರಿಶೀಲನೆ ನಡೆಸುವಾಗ ದೇವಾಲಯದ ದಾಸೋಹ ಭವನಕ್ಕೆ ಹೋದೆ. ಹಾಗೇ ಅಡುಗೆ ಮನೆಗೆ ಪ್ರವೇಶಿಸಿದಾಗ ಬಿಸಿಬಿಸಿ ಸಾಂಬಾರ್ ತಯಾರಿಸುತ್ತಿದ್ದ ಈ ಪುಣ್ಯಾತ್ಮ ಸಿಕ್ಕರು.

suresh kumar 3

ಇವರ ಹೆಸರು ಬಸವಣ್ಣ. ಕಳೆದ 32 ವರ್ಷಗಳಿಂದ ದಾಸೋಹದ ಅಡುಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಖುಷಿಯಿಂದ ಬಸವಣ್ಣನವರ ಬೆನ್ನು ತಟ್ಟಿ ಅವರ ಸೇವೆಯನ್ನು ಕೊಂಡಾಡಿದಾಗ ಅವರು ಯಾವುದೇ ಹಮ್ಮು-ಬಿಮ್ಮು ತೋರದೆ ಹೇಳಿದ್ದು “ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು” ಎಂದು. ಅವರ ವಿನಮ್ರತೆಗೆ ನಾನು ಶರಣು ಶರಣೆಂದೆ ಎಂದು ಸಚಿವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಸಚಿವರ ಪೋಸ್ಟ್ ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *