ಮೊದಲ ಬಾರಿ ತಂದೆಯ ಸಾವಿನ ದುರಂತ ಕತೆಯನ್ನು ಬಿಚ್ಚಿಟ್ಟ ದರ್ಶನ್

Public TV
2 Min Read
darshan 4

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೃತಪಟ್ಟ ಎಳೆಯ ಅಭಿಮಾನಿಯ ಮುಂದೆ ತಂದೆಯ ಸಾವಿನ ದುರಂತ ಕತೆಯನ್ನು ಬಿಚ್ಚಿಟ್ಟ ವಿಡಿಯೋ ಈಗ ವೈರಲ್ ಆಗಿದೆ.

ಈ ಹಿಂದೆ ದರ್ಶನ್ ಅವರನ್ನು ಭೇಟಿ ಮಾಡಲು ಬಳ್ಳಾರಿಯಿಂದ ಪುಟ್ಟ ಅಭಿಮಾನಿ ಕೀರ್ತಿರಾಜ್ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡಿರುವುದಾಗಿ ಬಾಲಕನ ಪೋಷಕರು ದರ್ಶನ್ ಅವರ ಬಳಿ ಹೇಳಿಕೊಂಡಿದ್ದರು. ಕೆಲ ದಿನಗಳ ಹಿಂದೆ ಕೀರ್ತಿ ರಾಜ್ ನಿಧನ ಹೊಂದಿದ್ದು, ಈಗ ದರ್ಶನ್ ಬಾಲಕನ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

darshan 3

ವಿಡಿಯೋದಲ್ಲಿ ಏನಿದೆ?
ಮಂಗಳೂರಿನ ವೈದ್ಯರ ನಿರ್ಲಕ್ಷ್ಯದಿಂದ ಕಾಲನ್ನು ಕಳೆದುಕೊಂಡಿದ್ದಾನೆ. ಸಿದ್ದರಾಮಯ್ಯ, ಸಿಎಂ ಯಾರ ಬಳಿ ಹೋದರೂ ತನಗೆ ಸಹಾಯವಾಗಿಲ್ಲ. ಅಲ್ಲದೆ ಮಗನ ತಪ್ಪಿಲ್ಲದೇ ಕಾಲು ಕಳೆದುಕೊಂಡಿದ್ದಕ್ಕೆ ಹೋರಾಟ ಮಾಡೋಣವೆಂದರೆ ಎಲ್ಲ ಕಡೆ ಸುಳ್ಳು ರಿಪೋರ್ಟ್ ಕೊಡುತ್ತಾರೆ. ಎಂಬಿಬಿಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳು ಡಾಕ್ಟರ್ ಇಲ್ಲದೇ ಚಿಕಿತ್ಸೆ ಮಾಡುವುದರಿಂದ ಮಗನಿಗೆ ಈ ಪರಿಸ್ಥಿತಿ ಎಂದು ಹೇಳಿ ದರ್ಶನ್ ಅವರ ಮುಂದೆ ಕೀರ್ತಿರಾಜ್ ತಾಯಿ ಕಣ್ಣೀರಿಟ್ಟಿದ್ದರು.

darshan 1 1

ಅಭಿಮಾನಿಯ ಸಮಸ್ಯೆ ಕೇಳಿ ದರ್ಶನ್ ತಮ್ಮ ತಂದೆಯ ಸಾವಿನ ಕತೆಯನ್ನು ಬಿಚ್ಚಿಟ್ಟಿದ್ದರು. ಈ ಬಗ್ಗೆ ಮಾತನಾಡಿದ ದರ್ಶನ್, ನನ್ನ ತಂದೆಗೆ ಹೃದಯದ ಸಮಸ್ಯೆ ಆಗಿತ್ತು. ಆದರೆ ಕಿಡ್ನಿ ಸಮಸ್ಯೆ ಯಾವುದು ಇರಲಿಲ್ಲ. ಹಾರ್ಟ್‍ನಲ್ಲಿ ರಕ್ತ ಬ್ಲಾಕ್ ಆಗಿದೆ ಚೆಕ್ ಮಾಡಬೇಕು ಎಂದು ಡೈ (ಕ್ಯಾಮೆರಾ) ಹಾಕೋಕೆ ಹೇಳಿದ್ದರು. ಅದು ನೇರವಾಗಿ ಕಿಡ್ನಿಗೆ ತೊಂದರೆಯಾಗಿತ್ತು. ಅಷ್ಟೇ ಅವರ ಎಡವಟ್ಟಿನಿಂದ ತಂದೆ ಸಾವನ್ನಪ್ಪಿದ್ದರು ಎಂದು ವೈದ್ಯರ ನಿರ್ಲಕ್ಷ್ಯದಿಂದ ತಂದೆಯನ್ನು ಕಳೆದುಕೊಂಡೆ ಎಂದು ದರ್ಶನ್ ಭಾವುಕರಾಗಿ ನುಡಿದರು.

darshan 2

ಬಳಿಕ ಮಾತನಾಡಿದ ದರ್ಶನ್, ಈ ಜಗತ್ತಿನಲ್ಲಿ ಕಷ್ಟಪಟ್ಟು ಮೇಲೆ ಯಾರು ಬರಲ್ಲ. ಒಂದು ಶಾಲೆ, ಆಸ್ಪತ್ರೆ ಇಲ್ಲ ದೇವಸ್ಥಾನ ಕಟ್ಟಿ ದುಡ್ಡು ಮಾಡುತ್ತಾರೆ ಎಂದು ಹೇಳಿದರು.

ಈ ವೇಳೆ ಕಾಲಿಲ್ಲದ ಪುಠಾಣಿ ಕೀರ್ತಿರಾಜ್ ನಾನು ಕುದುರೆ ಸವಾರಿ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದ. ಇದಕ್ಕೆ ದರ್ಶನ್, ಸರಿ ನನ್ನ ಫಾರ್ಮ್‍ನಲ್ಲೇ ಸವಾರಿ ಮಾಡುವಿಯಂತೆ ಎಂದು ಹೇಳಿ ಪ್ರೀತಿ ತೋರಿಸಿದರು. ನಂತರ, ನಿಮ್ಮ ಕೈಗೆ ಏನಾಯ್ತು ಎಂದು ಪ್ರಶ್ನೆ ಕೇಳಿದ್ದಕ್ಕೆ ನಾನು ಕೋತಿ ಕೆಲಸ ಮಾಡೋಕೆ ಹೋಗಿ ಹಿಂಗಾಯ್ತು ಎಂದು ಉತ್ತರಿಸಿದ್ದರು.

ಬ್ಯುಸಿ ಶೆಡ್ಯೂಲ್ ಮಧ್ಯೆಯೂ ದರ್ಶನ್ ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಪುಟಾಣಿ ಅಭಿಮಾನಿಯನ್ನು ಮಾತನಾಡಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *