ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಬಿಎಂಪಿ ವ್ಯಾಪ್ತಿಯ ತಮ್ಮ ಮನೆ ತೆರಿಗೆ ಪಾವತಿಸಿದ್ದಾರೆ.
ದರ್ಶನ್ 2019-20ರ ಸಾಲಿನ ತಮ್ಮ ತೂಗುದೀಪ ನಿವಾಸದ ತೆರಿಗೆ ಪಾವತಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಹಿಂದೆ ದರ್ಶನ್ ಮಂಡ್ಯದಲ್ಲಿ ಜೋಡೆತ್ತಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡಿದಾಗ ತೆರಿಗೆ ಕಟ್ಟುತ್ತಿನಿ, ರೈತನಾಗಿ ದುಡಿದಿದ್ದೇನೆ ಎಂದು ಹೇಳಿದ್ದರು.
ಈಗ ದರ್ಶನ್ ನುಡಿದಂತೆ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ತೆರಿಗೆ ಪಾವತಿಯಾಗಿದೆ. ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ವಿರುದ್ಧ ವಾಕ್ ಸಮರಕ್ಕೆ ದರ್ಶನ್ ಕಾರಣವಾಗಿದ್ದರು. ಈ ಹಿಂದೆ 2018-19ರ ಸಾಲಿನ ತೆರಿಗೆ ಪಾವತಿ ತಡವಾಗಿದಕ್ಕೆ ದರ್ಶನ್ 100 ರೂ ದಂಡ ಸೇರಿ ಕಟ್ಟಿದ್ದಾರೆ. ಈಗ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಿದ ದರ್ಶನ್ ಶೇ.5ರಷ್ಟು ರಿಯಾಯಿತಿ ಸಹ ಪಡೆದಿದ್ದಾರೆ.