ಸಂದೇಶ್ ನಾಗರಾಜ್ ಅರ್ಪಿಸಿ, ಎನ್.ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ತೆರೆಕಂಡು ಇದೀಗ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಭರಪೂರ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಬಾಯಿಂದಬಾಯಿಗೆ ಹರಡಿಕೊಂಡ ಸದಭಿಪ್ರಾಯಗಳಿಂದಲೇ ಎರಡನೇ ದಿನ ಮತ್ತಷ್ಟು ಹೌಸ್ಫುಲ್ ಪ್ರದರ್ಶನದೊಂದಿಗೆ ಮಹಾ ಗೆಲುವಿನತ್ತ ದಾಪುಗಾಲಿಡುತ್ತಿದೆ. ಅಷ್ಟಕ್ಕೂ ಮೊದಲಿನಿಂದ ಬಿಡುಗಡೆಯ ಕಡೇ ಘಳಿಗೆಯವರೆಗೂ ಒಡೆಯನ ಮೇಲೆ ಕುದುರಿಕೊಂಡಿದ್ದ ಕ್ರೇಜ್ ಇತ್ತಲ್ಲಾ ಅದು ದೊಡ್ಡ ಮಟ್ಟದ ಗೆಲುವಿನ ಮುನ್ಸೂಚನೆಯಂತಿತ್ತು.
ಒಂದೊಳ್ಳೆ ಕಂಟೆಂಟು ಮತ್ತು ಅದರಲ್ಲಿ ಮಾಸ್ ಮತ್ತು ಫ್ಯಾಮಿಲಿ ಮ್ಯಾನ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರೀತಿಗಳೇ ಅದನ್ನು ನಿಜವಾಗಿಸಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಮಾಸ್, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಥರದ ಪಾತ್ರಗಳಿಗೂ ಸರಿ ಹೊಂದುವಂಥಾ ನಟನೆ. ಒಂದು ಕಡೆ ಅವರ ಅಭಿಮಾನಿಗಳು ದರ್ಶನ್ ಸದಾ ಆಕ್ಷನ್ ಓರಿಯಂಟೆಡ್ ಪಾತ್ರಗಳಲ್ಲಿಯೇಮಿಂಚಬೇಕೆಂದು ಬಯಸುತ್ತಾರೆ. ಮತ್ತೊಂದು ಕಡೆಯಿಂದ ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಮತ್ತೆ ಮತ್ತೆ ಫ್ಯಾಮಿಲಿ ಮ್ಯಾನ್ ಆಗಿ ಕಣ್ತುಂಬಿಕೊಳ್ಳಲು ಕಾತರಿಸುತ್ತಾರೆ. ಈ ಥರದ ಪ್ರೇಕ್ಷಕರ ಎಲ್ಲ ಬೇಡಿಕೆ, ಆಶಯಗಳನ್ನೂ ತಣಿಸುವಂಥಾ ರೀತಿಯಲ್ಲಿ ಒಡೆಯ ಮೂಡಿ ಬಂದಿದೆ. ಈ ಕಾರಣದಿಂದಲೇ ಎರಡನೇ ದಿನ ಮತ್ತಷ್ಟು ಆವೇಗದಿಂದ ಈ ಸಿನಿಮಾಮುನ್ನುಗ್ಗುತ್ತಿದೆ.
ಒಡೆಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ದರ್ಶನ್ ಅವರಂಥಾ ಸ್ಟಾರ್ ನಟರ ಸಿನಿಮಾಗಳೆಂದ ಮೇಲೆ ಒಂದು ಕ್ರೇಜ್, ದೊಡ್ಡ ಮಟ್ಟದ ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ ಅದೆಲ್ಲವನ್ನೂ ಮೀರಿದಂಥಾ ಮೇಲ್ಮಟ್ಟದಲ್ಲಿ ಅಂಥಾ ಸಿನಿಮಾಗಳು ಮೂಡಿ ಬಂದಾಗ ಪ್ರೇಕ್ಷಕರ ಸಂತಸಕ್ಕೆ ಎಲ್ಲೆಗಳೇ ಇರುವುದಿಲ್ಲ. ಒಡೆಯನ ಗೆಲುವಿನ ನಾಗಾಲೋಟದ ಹಿಂದೆ ಇದೇ ಅಂಶ ಪ್ರಧಾನವಾಗಿ ಕೆಲಸ ಮಾಡಿದೆ.
ಒಡೆಯ ಚಿತ್ರ ದರ್ಶನ್ ಅವರನ್ನು ಬೇರೆಯದ್ದೇ ಥರದಲ್ಲಿ ಅನಾವರಣಗೊಳಿಸಲಿದೆ ಅನ್ನೋ ನಂಬಿಕೆ ಈ ಹಿಂದಿನಿಂದಲೇ ಹುಟ್ಟಿಕೊಂಡಿತ್ತು. ಅವರಿಲ್ಲಿ ಗಜೇಂದ್ರನಾಗಿ ಅಬ್ಬರಿಸಿದ ರೀತಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಸ್ವರೂಪದ್ದು. ಇದರಿಂದಾಗಿಯೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಒಡೆಯ ಇಷ್ಟವಾಗಿದ್ದಾರೆ. ಈ ಹಿಂದೆ ಎನ್. ಸಂದೇಶ್ ಅವರು ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನ ಮೂಲಕ ದರ್ಶನ್ ಅಭಿನಯದ ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಎಂಬೆರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವೆರಡೂ ಸಿನಿಮಾಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಒಡೆಯ ಚಿತ್ರ ಆ ಸಾಲಿನಲ್ಲಿ ಸಂದೇಶ್ ಪ್ರೊಡಕ್ಷನ್ಸ್ಗೆ ಹ್ಯಾಟ್ರಿಕ್ ಗೆಲುವು ತಂದು ಕೊಟ್ಟಿದೆ.
ಫ್ಯಾಮಿಲ್ ಕಂ ಆಕ್ಷನ್ ಸ್ವರೂಪದ ಈ ಕಥೆ ನಿಜಕ್ಕೂ ಮೋಡಿ ಮಾಡಿದೆ. ವರ್ಷದ ಕೊನೆಯನ್ನು ಒಡೆಯ ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಿಂದಲೇ ಶೃಂಗಾರಗೊಳ್ಳುವಂತೆ ಮಾಡಿದ್ದಾನೆ. ನೀವಿನ್ನೂ ಈ ಸಿನಿಮಾ ನೋಡಿಲ್ಲ ಎಂದಾದರೆ ಖಂಡಿತಾ ಒಮ್ಮೆನೋಡಿ. ಅತ್ಯುತ್ತಮ ಚಿತ್ರ ನೋಡಿದ ಖುಷಿಯೊಂದು ಮನಸು ಸೋಕುತ್ತದೆ.