ಬೆಂಗಳೂರು: ಯಜಮಾನ ಚಿತ್ರದ ಶೂಟಿಂಗ್ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ನೀಡಿ ಡ್ರೈವ್ ಸೇಫ್ ಎಂಬ ಸಂದೇಶವನ್ನು ನೀಡಿದ್ದಾರೆ.
ಯಜಮಾನ ಚಿತ್ರದ ಶೂಟಿಂಗ್ನಲ್ಲಿರುವ ದರ್ಶನ್ ಚಿತ್ರೀಕರಣದ ಜಾಗದಲ್ಲಿರುವ ಅಭಿಮಾನಿಗಳನ್ನು ಸದಾ ಸಂಧಿಸುತ್ತಾರೆ. ಹೀಗೊಂದು ದಿನ ಒಬ್ಬ ಅಭಿಮಾನಿ ವಾಹನದಲ್ಲಿ ಬಂದು ದರ್ಶನ್ ಇರೋದು ನೋಡಿ ವಾಹನ ನಿಲ್ಲಿಸಿ ಮಾತನಾಡಿಸಿದ್ದರು.
ಆಗ ಅಭಿಮಾನಿ ತಮ್ಮ ಬಳಿ ದುಬಾರಿ ಫೋನ್ ಇದ್ದರೂ ಪೆನ್ನು ಪೇಪರ್ ಹಿಡಿದು ದರ್ಶನ್ಗೆ ಆಟೋಗ್ರಾಫ್ ಕೇಳಿದ್ದರು. ದರ್ಶನ್ ಕೂಡ ಬಹಳ ತಾಳ್ಮೆಯಿಂದ ಹಸ್ತಾಕ್ಷರ ಬರೆದುಕೊಟ್ಟರು. ಅದನ್ನು ಓದಿದ ಬಳಿಕ ಆಟೋಗ್ರಾಫ್ ಪಡೆದ ಆ ಅಭಿಮಾನಿಯಂತೂ ಕೆಲಹೊತ್ತು ಬಿಟ್ಟ ಕಣ್ಣು ಬಿಟ್ಟಂತೆ ನಿಂತುಬಿಟ್ಟರು.
ಸಾಮಾನ್ಯವಾಗಿ ತಾರೆಯರು ಅಭಿಮಾನಿಗಳಿಗೆ ಆಟೋಗ್ರಾಫ್ನಲ್ಲಿ ಶುಭವಾಗಲಿ, ಒಳ್ಳೆಯದಾಗಲಿ, ಪ್ರೀತಿ ಇರಲಿ ಹೀಗೆ ಏನೇನೋ ಬರೆಯುತ್ತಾರೆ. ಪ್ರೀತಿಪೂರ್ವಕ ಮಾತು, ಜೀವನಕ್ಕೆ ಶುಭ ಕೋರುತ್ತಾರೆ. ಆದರೆ ದರ್ಶನ್ ಆಟೋಗ್ರಾಫ್ ನೀಡಿ ವಿಭಿನ್ನವಾಗಿ “ಡ್ರೈವ್ ಸೇಫ್” ಎಂದು ಬರೆದಿದ್ದರು.
ರಸ್ತೆ ಅಪಘಾತಗಳು ಹೆಚ್ಚಾಗಿ ವರದಿಯಾಗುತ್ತಿರುವ ಕಾಲವಿದು. ಸಾಮಾನ್ಯವಾಗಿ ಪ್ರತಿಯೊಬ್ಬರ ಬಳಿಯೂ ವಾಹನ ಇರುತ್ತೆ. ಅಂಥಹವರಿಗೆ ದರ್ಶನ್ ಇನ್ಡೈರೆಕ್ಟಾಗಿ ಜಾಗೃತಿ ಮೂಡಿಸಿದ್ದಾರೆ. ಜೀವ ಇದ್ದರೇ ಜೀವನ ಅಲ್ವೇ? ಹೀಗಾಗಿ ದರ್ಶನ್ ವಾಹನ ಚಲಾಯಿಸುವ ತಮ್ಮ ಅಭಿಮಾನಿಗಳಿಗೆ ಸೇಫಾಗಿ ಡ್ರೈವ್ ಮಾಡಿ ಎಂದು ಸೂಚಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಾಮಾಜಿಕ ಕಳಕಳಿ ಮೂಡಿಸುತ್ತಿದ್ದಾರೆ.