ಬೆಂಗಳೂರು: ಬಾಲಕಿಯ ಚಿಕಿತ್ಸೆಗೆ ಹಣ ನೀಡಿದ್ದಷ್ಟೇ ಅಲ್ಲದೆ ಖುದ್ದಾಗಿ ಭೇಟಿಯಾಗಿ ಆಕೆಗೆ ಚಾಲೆಂಚಿಂಗ್ ಸ್ಟಾರ್ ದರ್ಶನ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಇಂದು ಪೂರ್ವಿಕಾ ಹುಟ್ಟುಹಬ್ಬ ದಿನ. ಹೀಗಾಗಿ ಆಕೆಯನ್ನು ಭೇಟಿ ಮಾಡಿದ ದರ್ಶನ್ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ತಿಳಿಸಿದರು. ಖುಷಿ ಖುಷಿಯಾಗಿ ಬಾಲಕಿ ತನ್ನ ನೆಚ್ಚಿನ ನಾಯಕನ ಜೊತೆಗೆ ಕೆಲಹೊತ್ತು ಕಾಲ ಕಳೆದಳು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಪೂರ್ವಿಕಾ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ‘ಯಜಮಾನ’ ಸಿನಿಮಾ ಶೂಟಿಂಗ್ ವೇಳೆ ಪೂರ್ವಿಕಾ ದರ್ಶನ್ ಅವರನ್ನು ಭೇಟಿಯಾಗಿದ್ದಳು. ಈ ವೇಳೆ ಆಕೆಯ ಚಿಕಿತ್ಸೆ ನೆರವು ನೀಡುವ ಭರವಸೆಯನ್ನು ಡಿ ಬಾಸ್ ಕೊಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv