ಬೆಂಗಳೂರು: ಬಿಜೆಪಿ ಟಿಕೆಟ್ಗಾಗಿ (BJP Ticket) 5 ಕೋಟಿ ಡೀಲ್ ನಾಯಕಿ ಚೈತ್ರಾ ಕುಂದಾಪುರ (Chaitra Kundapura) ಮಾಡ್ತಾ ಇದ್ದಿದ್ದು ಸಮಾಜಸೇವೆ, ಧಾರ್ಮಿಕ ಚಿಂತಕಿ. ಹೀಗಿದ್ದ ಬಡತನ ಮನೆಯ ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾದಳು. ಗ್ರಾಂ ಲೆಕ್ಕದಲ್ಲಿ ಇದ್ದ ಬಿಸ್ಕೆಟ್ ರೂಪದಲ್ಲಿ ಕೆಜಿ ಆಯ್ತು.
ಹೌದು. ಚೈತ್ರಾ ಮತ್ತು ಗ್ಯಾಂಗ್ ಅಲಿಯಾಸ್ ಕಬಾಬ್ ಗ್ಯಾಂಗ್ ಆಡಿದ್ದ ನೌಟಂಕಿ ಆಟಕ್ಕೆ ಶಹಬ್ಬಾಷ್ ಅನ್ಲೇ ಬೇಕು. ಯಾವುದೋ ಒಂದು ಬಕ್ರಾ ಸಿಗ್ತು ಅಂತ ಚೆನ್ನಾಗಿ ಸುಲಿಗೆ ಮಾಡಿದ್ದ ಗ್ಯಾಂಗ್ ಇದು. ಎಂಎಲ್ಎ ಆಗ್ತೀನಿ ಅಂತ ಹಗಲು ಕನಸನ್ನೇ ಕಾಣುತ್ತಾ ಇದ್ದ ಗೋವಿಂದ ಬಾಬು ಪೂಜಾರಿ ಕೋಟಿ ಕೋಟಿ ಹಣ ಪಡೆದು ಮೂರು ನಾಮ ಹಾಕಿದ್ರು. ಇದೆಲ್ಲಾ ಓಲ್ಡ್ ಸ್ಟೋರಿ, ಲೇಟೆಸ್ಟ್ ಏನಪ್ಪಾ ಅಂದ್ರೆ ಗೋವಿಂದಣ್ಣ ಕಿಸೆಯಲ್ಲಿ ಕದ್ದ ಕಾಸನ್ನ 6 ಭಾಗ ಮಾಡಿ ಹರಿದು ಹಂಚಿಕೊಂಡಿದ್ರು. ಇನ್ನೊಂದು ಟ್ವಿಸ್ಟ್ ಅಂದ್ರೆ ಕಥಾನಾಯಕಿ ಚೈತ್ರಾಗೆ ಜಾಯಿಂಟ್ ವೆಂಚರ್ ಇತ್ತು ಅನ್ನೋದು ಚೈತ್ರಾ ಮತ್ತು ಶ್ರೀಕಾಂತ್ ತಮಗೆ ಬಂದ ಹಣವನ್ನು ಜಾಯಿಂಟ್ ಅಕೌಂಟ್ ಅಲ್ಲಿ ಇಟ್ಟುಕೊಂಡಿದ್ರು.
3 ಕೋಟಿ ಹಣ ಏನಾಯ್ತು?: ಚೈತ್ರಾ ಮತ್ತು ಶ್ರೀಕಾಂತ್ ಹೆಸರಲ್ಲಿ 1 ಕೋಟಿ 8 ಲಕ್ಷ ಎಫ್ಡಿ, ಚೈತ್ರಾಳ ಬ್ಯಾಂಕ್ ಲಾಕರ್ನಲ್ಲಿ 40 ಲಕ್ಷ ನಗದು, ಚೈತ್ರಾಳ ಮತ್ತೊಂದು ಲಾಕರ್ನಲ್ಲಿ 23 ಲಕ್ಷದ ಚಿನ್ನದ ಬಿಸ್ಕೆಟ್, ಹೊಸದಾಗಿ ಮನೆ ಕಟ್ಟಿಸೋಕೆ 40 ಲಕ್ಷ, ಚೈತ್ರಾಳ ಅಕ್ಕನ ಮನೆ ಸರಿ ಮಾಡಿಸೋಕೆ 15 ಲಕ್ಷ, ಚೈತ್ರಾಳ ಹೊಸ ಕಿಯಾ ಕಾರು 12 ಲಕ್ಷ (ಉಳಿದದ್ದು ಸಾಲ), ಗಗನ್ ಕಡೂರ್ ಮದುವೆಗೆ 35 ಲಕ್ಷ, ಗಗನ್ ಕಡೂರ್ ಕಾರಿನ ಬೆಲೆ 10 ಲಕ್ಷ, ರಮೇಶ್ಗೆ (ವಿಶ್ವನಾಥ್ ಜಿ) 1 ಲಕ್ಷದ 50 ಸಾವಿರ, ಚೆನ್ನನಾಯ್ಕ್ ಗೆ 1 ಲಕ್ಷ (93 ಸಾವಿರ ನಗದು), ಪ್ರಜ್ವಲ್ಗೆ 10 ಲಕ್ಷ ಹಣ, ಅಭಿನವ ಹಾಲಾಶ್ರೀಗೆ ನೀಡಿದ ಹಣ 1.5 ಕೋಟಿ ಹಂಚಿಕೆಯಗಿದೆ.
ಹೀಗೆ 5 ಕೋಟಿ ಹಣವನ್ನು ಎಷ್ಟೊಂದು ಪಾಲು ಮಾಡಿ ಹಂಚಿಕೊಂಡಿದ್ದಾರೆ. ಇನ್ನು ಜಾಯಿಂಟ್ ಅಕೌಂಟ್ ಎಫ್ಡಿ, ಚಿನ್ನದ ಬಿಸ್ಕೆಟ್, 40 ಲಕ್ಷ ನಗದು, ಮುಧೋಳದಲ್ಲಿ ಇದ್ದ ಕಿಯಾ ಕಾರು ಇದೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಪ್ರಕಾರ 2 ಕೋಟಿ ಅಷ್ಟು ರಿಕವರಿ ಆಗಿದೆ.
ಈ ಪ್ರಕರಣದಲ್ಲಿ ಇನ್ನುಳಿದವರ ಬಳಿ ಹಣ ರಿಕವರಿ ಮಾಡಬೇಕಿದ್ದು, ತಲೆಮರೆಸಿಕೊಂಡಿರೋ ಸ್ವಾಮೀಜಿಗಾಗಿ ಪೆÇಲೀಸರು ಹುಡುಕಾಟ ನಡೆಸಿದ್ದಾರೆ.
Web Stories