ಭಯಾನಕ ಕನಸು ಬಿದ್ದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

Public TV
1 Min Read
SUICIDE

ಹೈದರಾಬಾದ್: ಭಯಾನಕ ಕನಸು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿಯೊಬ್ಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ವಿದ್ಯಾರ್ಥಿಯನ್ನು ಸೈಯದ್ ರೆಹಮತ್ ಆಲಿ ಎಂದು ಗುರುತಿಸಲಾಗಿದ್ದು, ಈತ ಶ್ರೀ ಚೈತನ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ.

macbeth evil

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಿದ್ಯಾಥಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಕಳೆದ ಕೆಲ ದಿನಗಳಿಂದ ಸಂಬಂಧಿಕರೊಬ್ಬರನ್ನು ಕೊಲ್ಲುವಂತಹ ಭಯಾನಕ ಕನಸುಗಳು ಬೀಳುತ್ತಿವೆ. ಈ ಕನಸಿನಿಂದ ನಾನು ಮನಸ್ಸು ವಿಚಲಿತವಾಗಿದೆ. ಅಲ್ಲದೇ ಇದರಿಂದ ಆಘಾತಗೊಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಬರೆದಿದ್ದಾನೆ.

ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ರೆಹಮತ್ ತನ್ನ ತಂದೆಗೆ ಕರೆ ಮಾಡಿ ತನಗೇನು ಆಗುತ್ತಿದೆ ಎನ್ನವುದರ ಮಾಹಿತಿ ನೀಡಿ ಫೋನ್ ಕಟ್ ಮಾಡಿದ್ದಾನೆ. ಆ ಬಳಿಕ ಆತನ ತಂದೆ ಕರೆ ಮಾಡಿದಾಗ ಫನ್ ನಾಟ್ ರೀಚೇಬಲ್ ಬರುತ್ತಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ರವಾನಿಸಿ ಸಹಾಯ ಮಾಡುವಂತೆ ಕೇಳಿದ್ದರು. ಸದ್ಯ ರೆಹಮತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

depression1

phone call

 

phone

Share This Article
Leave a Comment

Leave a Reply

Your email address will not be published. Required fields are marked *