ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ.
ಭಯೋತ್ಪಾದಕ ನಿಗ್ರಹದಳವನ್ನು ಬಲಪಡಿಸಲು ಅಲ್ಲಿನ ಪೊಲೀಸ್ ಪಡೆಗೆ (ಜೆಕೆಪಿ) 600 ಕ್ಕೂ ಹೆಚ್ಚು ಪೊಲೀಸರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ 42 ಹೊಸ ಗಡಿ ಭದ್ರತಾ ಪೊಲೀಸರನ್ನು ನಿಯೋಜನೆಗೆ ಮುಂದಾಗಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ
ಇತ್ತೀಚೆಗೆ ಪೂಂಚ್ (Poonch) ಹಾಗೂ ರಜೌರಿಯಲ್ಲಿ (Rajouri) ಸೇನಾ ವಾಹನದ ಮೇಲೆ ಉಗ್ರರು ದಾಳಿನಡೆಸಿ ಐವರು ಯೋಧರನ್ನು ಕೊಂದಿದ್ದರು. ಈ ಪ್ರಕರಣದ ಬೆನ್ನು ಹತ್ತಿರುವ ಸೇನೆ (Indian Army) ಸ್ಥಳೀಯರು ಉಗ್ರರಿಗೆ ಸಹಕರಿಸಿರುವ ಆರೋಪ ಮಾಡಿದೆ. ಅಲ್ಲದೆ ದಾಳಿ ನಡೆಸಿರುವ ಭಯೋತ್ಪಾದಕರು ಅಡಗಿದ್ದ ಸ್ಥಳದಲ್ಲಿ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಸ್ಫೋಟಕ್ಕೆ ಐವರು ಯೋಧರು ಬಲಿಯಾಗಿದ್ದರು. ಈ ವೇಳೆ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿತ್ತು. ಇದನ್ನೂ ಓದಿ: ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ