ಬೆಂಗಳೂರು: ಜಾತಿಗಣತಿ ಸಮೀಕ್ಷೆ (Caste Census) ಹಿನ್ನೆಲೆಯಲ್ಲಿ ದಸರಾ ರಜೆಯನ್ನು (Dasara Holiday) ಅ.18ರ ವರೆಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನಾಂಕ ವಿಸ್ತರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಲಾಯಿತು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಯಿತು. ಸಮೀಕ್ಷೆ ಹಿನ್ನೆಲೆ ರಾಜ್ಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಸಮಸ್ಯೆ
ದಸರಾ ರಜೆಯಲ್ಲಿರುವ ಮಕ್ಕಳಿಗೆ ಹೆಚ್ಚುವರಿಯಾಗಿ ಇನ್ನೂ 10 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ಜಾತಿಗಣತಿ ಸರ್ವೇ ಮುಗಿಸಲು ಸರ್ಕಾರ ಯೋಜಿಸಿದೆ. ಖಾಸಗಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ. ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ಸರ್ವೆಯಿಂದ ವಿನಾಯಿತಿ ನೀಡಲಾಗಿದೆ.
ದಸರಾ ಹಬ್ಬದ ವೇಳೆ ಗಣತಿಗೆ ಹಿನ್ನಡೆಯಾಗಿದೆ. ದಿನದ ಟಾರ್ಗೆಟ್ ರೀಚ್ ಆಗೋಕೆ ಸಾಧ್ಯ ಆಗಿಲ್ಲ. 11 ರಿಂದ 14 ಲಕ್ಷ ಮನೆಗಳ ಟಾರ್ಗೆಟ್ ಇತ್ತು. ಆಯುಧ ಪೂಜೆ ಮತ್ತು ವಿಜಯದಶಮಿ ವೇಳೆ ಗಣತಿ ಕುಂಠಿತವಾಗಿದೆ. ಇದನ್ನೂ ಓದಿ: ಜಾತಿಗಣತಿ ಸರ್ವೇ ಅವಧಿ ವಿಸ್ತರಣೆ – ಶಿಕ್ಷಕರಿಗೆ ಮಧ್ಯಾಹ್ನದ ನಂತರ ಸಮೀಕ್ಷೆ ಮಾಡಲು ಸೂಚನೆ
ಈವರೆಗೆ 1.15 ಕೋಟಿ ಮನೆಗಳ ಸಮೀಕ್ಷೆ ಆಗಿದೆ. ಇನ್ನೂ 30 ಲಕ್ಷ ಸಮೀಕ್ಷೆ ಬಾಕಿ ಇದೆ. ಅದಕ್ಕಾಗಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ರಜೆಯ ದಿನಗಳನ್ನು ವಿಶೇಷ ತರಗತಿಗಳ ಮೂಲಕ ಸರಿದೂಗಿಸಲು ಸರ್ಕಾರ ಕ್ರಮಕೈಗೊಂಡಿದೆ.
ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರು, ಸಿಎಸ್ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು.
ವಿಶೇಷ ರಜೆ ದಿನದಲ್ಲಿ ರಜೆ ಅವಧಿ ಸರಿದೂಗಿಸಲು ಸರ್ಕಾರದ ಸೂಚನೆ
ಶಿಕ್ಷಣ ಇಲಾಖೆ ಮುಂದೆ ಇರೋ ಆಯ್ಕೆಗಳೇನು!?
* ಶನಿವಾರ ಅರ್ಧ ದಿನದ ಬದಲು ಪೂರ್ಣ ದಿನ ಪಠ್ಯ ಬೋಧನೆ ಮಾಡೋದು.
* ಸರ್ಕಾರಿ ರಜೆ ಇರೋ ದಿನ ಪಠ್ಯ ಬೋಧನೆ ಮಾಡಿ ಸರಿದೂಗಿಸೋದು.
* ಪಠ್ಯ ಬೋಧನೆ ತುಂಬಾ ಹಿಂದುಳಿದರೆ ಭಾನುವಾರವೂ ಸ್ಪೆಷಲ್ ಕ್ಲಾಸ್ ಮಾಡಿ ಪಠ್ಯ ಬೋಧನೆ ಮಾಡಬಹುದು.
* ಪಠ್ಯ ಬೋಧನೆ ಮಾಡಲು ಶಾಲಾ ಅವಧಿ ಬದಲಾವಣೆ ಮಾಡಬಹುದು. ಈಗ ಶಾಲಾ ಅವಧಿ ಬೆಳಗ್ಗೆ 9:30 to ಸಂಜೆ 4 ಗಂಟೆಗೆ ಇದೆ. ಇದನ್ನ ಬದಲಾವಣೆ ಮಾಡಿಕೊಂಡು 8 ಗಂಟೆ ಅಥವಾ 8:30 ಕ್ಕೆ ಶಾಲೆಗಳು ನಡೆಸಬಹುದು.