ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

Public TV
1 Min Read
CAR FIRE 2

ಹಾಸನ: ಚಲಿಸುತ್ತಿದ್ದ ಕಾರೊಂದು ಬೆಂಕಿಗಾಹುತಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.

ಕಡೂರು ಮೂಲದ ಮಲ್ಲಿಕಾರ್ಜುನ್ ಕಾರಿನಲ್ಲಿ ಬರುವಾಗ ಸ್ವಲ್ಪ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರನ್ನು ಅರಸೀಕೆರೆ ಪಟ್ಟಣದಲ್ಲಿರುವ ಮಂಜು ಫಾಸ್ಟ್ ಫುಡ್ ಅಂಗಡಿಯ ಮುಂದೆ ನಿಲ್ಲಿಸಿದ್ದಾರೆ. ನಂತರ ಕಾರ್‍ನಲ್ಲಿದ್ದ ವಸ್ತುಗಳನ್ನು ಈಚೆ ತೆಗೆದಿದ್ದಾರೆ. ಅಷ್ಟರಲ್ಲಿ ಕಾರಿನ ಮುಂಭಾಗ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿದೆ.

CAR FIRE 1

ತಕ್ಷಣ ಸ್ಥಳದಲ್ಲಿದ್ದವರ ಸಹಾಯ ಪಡೆದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ ಭಾಗಶಃ ಬೆಂಕಿಗಾಹುತಿಯಾಗಿದೆ. ಘಟನೆಗೆ ಬ್ಯಾಟರಿಯ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಹಿರಿಯ ಕಲಾವಿದರ ನೆರವಿಗೆ ನಿಲ್ಲೋಣ- ಲಕ್ಷ್ಮೀದೇವಿ ಭೇಟಿ ಮಾಡಿದ ಸುಧಾರಾಣಿ

CAR FIRE

Share This Article
Leave a Comment

Leave a Reply

Your email address will not be published. Required fields are marked *