ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗಿದ್ದ ಕರ್ನಾಟಕ ಎಲೆಕ್ಷನ್ ಮುಗಿದಿದ್ದು, 2,622 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಮೇ 15 ಮಂಗಳವಾರದಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದೆಲ್ಲದರ ನಡುವೆ ಚುನಾವಣಾ ವೇಳೆ ದೇಶದಲ್ಲೇ ಅತೀಹೆಚ್ಚು ಹಣ, ಮದ್ಯ ಪೂರೈಕೆ ಆಗಿದ್ದು ಇಲ್ಲೇ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ನಗರದ ಮಹಾರಾಣಿ ಕಾಲೇಜ್, ಮೌಂಟ್ ಕಾರ್ಮಲ್ ಕಾಲೇಜ್, ಆರ್.ಸಿ ಕಾಲೇಜ್, ಆರ್.ವಿ ಕಾಲೇಜ್ನಲ್ಲಿ ಎಲ್ಲಾ ಕ್ಷೇತ್ರದ ಎಲ್ಲಾ ಕ್ಷೇತ್ರದ ಮತ ಪೆಟ್ಟಿಗೆಗಳನ್ನ ಭದ್ರವಾಗಿ ಇಡಲಾಗಿದೆ. ಇನ್ನು ಸ್ಟ್ರಾಂಗ್ ರೂಂ ಸುತ್ತಮತ್ತ ಖಾಕಿ ಸರ್ಪಗಾವಲು ಮಾಡಲಾಗಿದೆ.
ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆ ಆಗುತ್ತೆ ಆನ್ನೊದನ್ನ ನೋಡೊದಾದ್ರೆ..
* ಆರ್.ಸಿ. ಕಾಲೇಜ್
* ನೆಲಮಂಗಲ
* ಹೊಸಕೋಟೆ
* ದೊಡ್ಡಬಳ್ಳಾಪುರ
* ದೇವನಹಳ್ಳಿ
* ಮಹಾರಾಣಿ ಕಾಲೇಜ್
* ಮಾಹದೇವಪುರ
* ಯಲಹಂಕ
* ಬ್ಯಾಟರಾಯನಪುರ
* ಯಶವಂತಪುರ
* ದಾಸರಹಳ್ಳಿ
* ಆನೆಕಲ್ಲು
* ಎಸ್ .ಎಸ್.ಎಂ.ಆರ್.ವಿ ಕಾಲೇಜ್ ಜಯನಗರ ಟಿ ಬ್ಲಾಕ್
* ಬಸವನಗುಡಿ
* ಬೊಮ್ಮನಹಳ್ಳಿ
* ಬಿಟಿಎಂ ಲೇಔಟ್
* ಪದ್ಮನಾಭನಗರ
* ವಿಜಯ ನಗರ
* ಗೋವಿಂದರಾಜ್ ನಗರ
* ಬಿಎಂಎಸ್ ಮಹಿಳಾ ಕಾಲೇಜ್ ಬಸವನ ಗುಡಿ
* ಶಿವಾಜಿ ನಗರ
* ಶಾಂತಿ ನಗರ
* ಗಾಂಧಿ ನಗರ
* ರಾಜಾಜಿ ನಗರ
* ಚಾಮರಾಜ ಪೇಟೆ
* ಚಿಕ್ಕ ಪೇಟೆ
* ಮೌಂಟ್ ಕಾರ್ಮಲ್ ಕಾಲೇಜ್
* ಮಹಾಲಕ್ಷ್ಮಿ ಲೇಔಟ್
* ಸರ್ವಜ್ಞ ನಗರ
* ಹೆಬ್ಬಾಳ
* ಕೆ.ಆರ್ ಪುರಂ
* ಸಿವಿ ರಾಮ್ ನಗರ
ರಾಮನಗರದಲ್ಲಿ ಅತೀ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಇಲ್ಲಿ ಮತದಾನವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟಲಿಲ್ಲ.