ಕೆನಡಾ ಚುನಾವಣೆ| ಮೋದಿಯನ್ನು ಭೇಟಿಯಾಗಿದ್ದಕ್ಕೆ ಚಂದ್ರ ಆರ್ಯಗೆ ಟಿಕೆಟ್‌ ಮಿಸ್‌

Public TV
1 Min Read
Canadas Chandra Arya barred from running under Liberal Partys banner over ‘India ties

ಒಟ್ಟಾವಾ: ಕೆನಡಾದಲ್ಲಿ(Canada Election) ಅಧಿಕಾರದಲ್ಲಿರುವ ಲಿಬರಲ್ ಪಾರ್ಟಿ ಭಾರತದ (India) ಮೇಲೆ ದ್ವೇಷ ಮುಂದುವರಿಸಿದೆ. ಖಲಿಸ್ತಾನಿಗಳ (Khalistan) ವಿರುದ್ಧ ಕಠಿಣ ನಿಲುವು ತಾಳಿದ್ದ ತುಮಕೂರು ಮೂಲದ ಸಂಸದ ಚಂದ್ರ ಆರ್ಯಗೆ (Chandra Arya) ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡಲು ನಿರಾಕರಿಸಿದೆ. ಇದನ್ನೂ ಓದಿ: ಓಲಾ, ಊಬರ್ ಕ್ಯಾಬ್‍ಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್ – ಸಹಕಾರ್ ಟ್ಯಾಕ್ಸಿ ಲೋಕಾರ್ಪಣೆಗೆ ಸಿದ್ಧತೆ

 

ಕಳೆದ ವರ್ಷ ಭಾರತ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಮಾಡಿದ್ದ ಬಗ್ಗೆ ಸರ್ಕಾರಕ್ಕೆ ಚಂದ್ರ ಆರ್ಯ ಮಾಹಿತಿ ನೀಡಿಲ್ಲ ಎಂಬ ನೆಪ ಹೇಳಿ ಟಿಕೆಟ್ ಕೊಟ್ಟಿಲ್ಲ. ಕೆನಡಾ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದೆಗೆಟ್ಟ ಕಾರಣವನ್ನೂ ನೀಡಲಾಗಿದೆ. ಇದನ್ನೂ ಓದಿ : ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

ತಮ್ಮ ಮೇಲೆ ಭಾರತ ಸರ್ಕಾರದ ಪ್ರಭಾವವಿದೆ ಎಂಬ ಆರೋಪಗಳನ್ನು ಚಂದ್ರ ಆರ್ಯ ತಿರಸ್ಕರಿಸಿದ್ದಾರೆ. ಏಪ್ರಿಲ್ 28ಕ್ಕೆ ಕೆನಡಾ ಸಂಸತ್ ಚುನಾವಣೆ ನಡೆಯಲಿದೆ.

 

Share This Article