Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಇನ್ನೂ ಅಳಿಯಂದಿರಿಗೆ ಸ್ಥಾನ ನೀಡ್ಬೇಕು, ನಮ್ಮದೇನು ಬಹುಮತದ ಸರ್ಕಾರವೇ? – ಕತ್ತಿಗೆ ಈಶ್ವರಪ್ಪ ಟಾಂಗ್

Public TV
Last updated: August 24, 2019 8:44 pm
Public TV
Share
2 Min Read
eshwarappa 3
SHARE

ಬೆಂಗಳೂರು: ಅದೇ ಬೇಕು, ಇದೇ ಬೇಕು ಎನ್ನಲು ನಮ್ಮದೇನು ಬಹುಮತದ ಸರ್ಕಾರವೇ? ಇನ್ನೂ 17, 18 ಜನ ಅಳಿಯಂದಿರಿದ್ದಾರೆ. ಅವರಿಗೂ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವುದನ್ನು ಸಚಿವ ಈಶ್ವರಪ್ಪ ಖಚಿತಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೇಳಲು ನಮ್ಮ ಬಳಿ ಪೂರ್ಣ ಬಹುಮತವಿದೆಯೇ? ಇನ್ನು 17, 18 ಜನ ಅಳಿಯಂದಿರಿದ್ದಾರೆ. ಅಳಿಯಂದಿರ ಬೆಂಬಲ ಇರದಿದ್ದರೆ ಈ ಸರ್ಕಾರವೇ ಬರುತ್ತಿರಲಿಲ್ಲ. ಅವರನ್ನು ತೃಪ್ತಿಪಡಿಸಬೇಕಿರುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ನನಗೆ ಇದೇ ಖಾತೆ ಬೇಕು, ಅದೇ ಖಾತೆ ಬೇಕು, ಸಚಿವ ಸ್ಥಾನ ಬೇಕು ಎಂದು ಕೇಳುವುದು ಸರಿಯಲ್ಲ ಎಂದು ಹೇಳಿ ಉಮೇಶ್ ಕತ್ತಿ ಅವರಿಗೆ ಟಾಂಗ್ ನೀಡಿದ್ದಾರೆ.

Umesh Katti

ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ, ಹಿರಿಯರ ತೀರ್ಮಾನಕ್ಕೆ ಬದ್ಧರಾಗಿರಬೇಕು. ಅನರ್ಹ ಶಾಸಕರು ನಮಗೆ ಹೊರೆಯೆನಿಸುವುದಿಲ್ಲ. ಏಕೆಂದರೆ ಅವರಿಲ್ಲದಿದ್ದರೆ ನಮ್ಮ ಸರ್ಕಾರವೇ ಇಲ್ಲ. ಪೂರ್ಣ ಬಹುಮತ ಬಂದಿದ್ದರೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಪೂರ್ಣ ಬಹುಮತ ಬಾರದ್ದರಿಂದ ಎಲ್ಲ ಶಾಸಕರು ಇದನ್ನು ಅರಿತುಕೊಳ್ಳಬೇಕು. ಸುಖಾಸುಮ್ಮನೆ ಅಸಮಾಧಾನ ವ್ಯಕ್ತಪಡಿಸಬಾರದು. ಸಂದರ್ಭ ಬಂದಾಗ ಸೂಕ್ತ ಸ್ಥಾನ ಸಿಗುತ್ತದೆ. ನಾನೂ ಸಹ ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ, ನನಗೆ ಖಾತೆ ಬಗ್ಗೆ ಗೊಂದಲವಿಲ್ಲ, ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದ್ದಕ್ಕೆ ಉಮೇಶ್ ಕತ್ತಿ ಬೇಸರವಾಗಿರುವುದು ನಿಜ. ಈ ಕುರಿತು ನಿರಂತರವಾಗಿ ಉಮೇಶ್ ಕತ್ತಿ ಬಳಿ ಮಾತನಾಡುತ್ತಿದ್ದೇನೆ. ಫೋನ್ ಮಾಡಿ ಮಾತನಾಡಿದ್ದೇನೆ, ಖುದ್ದು ಭೇಟಿಯಾಗಿ ಮಾತನಾಡಿದ್ದೇನೆ. ಅವರು ಸಹ ಈ ಕುರಿತು ಸ್ಪಷ್ಟಪಡಿಸಿ, ಯಾವುದೇ ಅಪೇಕ್ಷೆ ಇಲ್ಲ ಸರ್ಕಾರ ಬೀಳಿಸಲ್ಲ. ಸಚಿವ ಸ್ಥಾನ ಸಿಕ್ಕರೆ ಕೆಲಸ ಮಾಡುತ್ತೇನೆ ಇಲ್ಲದಿದ್ದರೆ ಬೇಸರವಿಲ್ಲ ಎಂದು ಹೇಳಿದ್ದಾರೆ. ಹಿರಿತನದ ಆಧಾರ ಮೇಲೆ ಅವರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ, ಇಂದು ಸಂದರ್ಭ ಬೇರೆ ಇದೆ. ಹೀಗಾಗಿ ಸಹಕರಿಸಬೇಕು ಎಂದು ಹೇಳಿದರು.

BSY Cabinet

ಚುನಾವಣೆಗೆ ನಾವು ರೆಡಿ
ಯಾವಾಗ ಚುನಾವಣೆ ಬಂದರೂ ನಾವ್ ರೆಡಿಯಾಗಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚುನಾವಣೆಯ ನಡೆಯುವ ಸೂಚನೆಯನ್ನು ಈಶ್ವರಪ್ಪ ನೀಡಿದ್ದು, ಎಲೆಕ್ಷನ್ ಯಾವಾಗ ಬೇಕಾದ್ರೂ ಬರಬಹುದು. ನಾನು ಮಧ್ಯಂತರ ಚುನಾವಣೆ ಬಗ್ಗೆ ಹೇಳುತ್ತಿಲ್ಲ. ಈಗ ಸಮಸ್ಯೆ ಬಹುಮತದ ಸರ್ಕಾರ ಬಾರದಿರುವುದರಿಂದ ಉದ್ಭವವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ. ಆ ಮೂಲಕ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.

CKB Siddu HDD

ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಒಳಗೊಳಗೆ ಚಾಕು ಹಾಕಿಕೊಳ್ಳುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಇದನ್ನು ಕಂಡಿದ್ದೇವೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಹಿಂದೆ ತೆರೆ ಮರೆಯಲ್ಲಿ ಬಡಿದಾಡುತ್ತಿದ್ದರು. ಈಗ ಬಹಿರಂಗವಾಗಿಯೇ ಬಡಿದಾಡುತ್ತಿದ್ದಾರೆ. ಯಾವ ವಿಚಾರದಲ್ಲಿ ಇಬ್ಬರೂ ಒಂದಾಗುತ್ತಾರೆ? ಜಾತಿ, ವೈಚಾರಿಕವಾಗಿ ಒಂದಾಗಿರುತ್ತಾರಾ? ಇವರಿಗೆ ಅಧಿಕಾರ ಮಾತ್ರ ಬೇಕು. ಸಿದ್ದರಾಮಯ್ಯನವರಿಗೂ ಅಧಿಕಾರ ಬೇಕು, ದೇವೇಗೌಡರ ಮಕ್ಕಳಿಗೂ ಅಧಿಕಾರ ಬೇಕು. ಇದು ದೇಶದಲ್ಲೇ ನಡಿಯುವುದಿಲ್ಲ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಸರ್ಕಾರಗಳು ಬರಬೇಕು. ಇಲ್ಲವೇ ಜನರ ಅಭಿವೃದ್ಧಿಗಾಗಿ ಸರ್ಕಾರ ಬರಬೇಕು. ಎರಡೂ ಇಲ್ಲದೆ ಸುಮ್ಮನೇ ಬಡಿದಾಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಇವರಿಬ್ಬರ ಬಡಿದಾಟಕ್ಕೆ ಕೊನೆ ಇಲ್ಲ, ಇಬ್ಬರೂ ಬಡಿದಾಡಿಕೊಂಡು ಕೊನೆಗೆ ಬಿಜೆಪಿ ಮೇಲೆ ಹಾಕುತ್ತಾರೆ ಎಂದು ಮೈತ್ರಿ ನಾಯಕರ ವಿರುದ್ಧ ಈಶ್ವರಪ್ಪ ಹರಿಹಾಯ್ದರು.

TAGGED:bs yeddyurappacabinetks eshwarappaportfolioPublic TVumesh kattiಉಮೇಶ್ ಕತ್ತಿಕೆ.ಎಸ್.ಈಶ್ವರಪ್ಪಖಾತೆ ಹಂಚಿಕೆಪಬ್ಲಿಕ್ ಟಿವಿಬಿ.ಎಸ್.ಯಡಿಯೂರಪ್ಪಸಚಿವ ಸಂಪುಟ
Share This Article
Facebook Whatsapp Whatsapp Telegram

You Might Also Like

05
Districts

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Public TV
By Public TV
2 hours ago
Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
2 hours ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
2 hours ago
01 NEW 1
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 1

Public TV
By Public TV
2 hours ago
02 NEW
Big Bulletin

ಬಿಗ್‌ ಬುಲೆಟಿನ್‌ 14 June 2025 ಭಾಗ 2

Public TV
By Public TV
2 hours ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?