ಬೆಂಗಳೂರು: ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮನ್ವಯ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮ್ಯಯ ಅವರು, ಬಹಳ ದಿನಗಳ ನಂತರ ಸಮನ್ವಯ ಸಭೆ ಸೇರಿದ್ದು, ಅಧಿವೇಶನ ಡಿಸೆಂಬರ್ 10 ರಂದು ಆರಂಭವಾಗಲಿರುವ ಕಾರಣ ಡಿಸೆಂಬರ್ 22ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಸಭೆಯಲ್ಲಿ ಸಂಪುಟ ವಿಸ್ತರಣೆ, ಶಾಸಕರಿಗೆ ಬೋರ್ಡ್ ಕಾರ್ಪೋರೇಷನ್ ನೇಮಕ ಕೂಡ ಮಾಡಲಾಗುವುದು. ಸದ್ಯ 10 ಮಂದಿ ಜೆಡಿಎಸ್ ಹಾಗೂ 20 ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಲಾಗುವುದು. ಅಲ್ಲದೇ ಸಭೆಯಲ್ಲಿ ಸರಕಾರ ಸುಗಮವಾಗಿ ನಡೆಯುವ ಕುರಿತು ಕೈಗೊಳ್ಳಬೇಕಾದ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯಿತು ಎಂದರು.
ಇದೇ ವೇಳೆ ಸರ್ಕಾರದ ಯಾವುದೇ ಶಾಸಕರು ಕೂಡ ರಾಜೀನಾಮೆ ನೀಡಲ್ಲ. ಅಂತಹ ಯಾವುದೇ ಬೆಳವಣಿಗೆ ಇಲ್ಲ. ಕೇವಲ ಕೆಲ ವರದಿಗಳು ಬಂದಿದೆ ಅಷ್ಟೇ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ಶಾಸಕರು ಸದನಕ್ಕೆ ಗೈರಾದರೆ ಬನ್ನಿ ಎಂದು ಹೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವುದೇ ನಾಯಕರು ರಾಜೀನಾಮೆ ನೀಡಲ್ಲ. ಇದು ಕೇವಲ ಬಿಜೆಪಿ ನಾಯಕರ ಹೇಳಿಕೆ ಮಾತ್ರ. ಒಮ್ಮೆ ಆಪರೇಷನ್ ಕಮಲ ಮಾಡಿ ಯಶಸ್ವಿಯಾಗಿದ್ದಾರೆ. ಈ ಬಾರಿ ಇಂತಹ ಯಾವುದೇ ಕ್ರಮ ನಡೆಯುವುದಿಲ್ಲ ಎಂದರು.
ನಾನು ಸಮನ್ವಯ ಸಮಿತಿಯ ಮುಖ್ಯಸ್ಥನಾದ ಕಾರಣ ಪಕ್ಷದ ಶಾಸಕರು ಆಗಮಿಸಿ ಚರ್ಚೆ ನಡೆಸುತ್ತಾರೆ. ಸದ್ಯ ಸಂಪುಟ ವಿಸ್ತರಣೆ 9 ರಂದೇ ಮಾಡಲು ತೀರ್ಮಾನ ಮಾಡುವ ಬಗ್ಗೆ ಈ ಹಿಂದೆ ಚಿಂತನೆ ಮಾಡಲಾಗಿತ್ತು. ಆದರೆ ಬೆಳಗಾವಿಯಲ್ಲಿ ಸದನ ಆರಂಭವಾಗುವುದರಿಂದ ಡಿಸೆಂಬರ್ 22ಕ್ಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv