Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಂಪುಟ ವಿಸ್ತರಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲು ಹೈಕಮಾಂಡ್ ಚಿಂತನೆ

Public TV
Last updated: January 30, 2020 8:42 am
Public TV
Share
2 Min Read
BJP FLAG 2 copy
SHARE

ಬೆಂಗಳೂರು : ತಲೆನೋವಾಗಿರುವ ಸಂಪುಟ ವಿಸ್ತರಣೆ ಕಸರತ್ತು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದ್ದಂತೆ ಹಲವು ರೀತಿಯ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ. ಸಿಎಂ ಯಡಿಯೂರಪ್ಪ ಅವರು ತಮ್ಮದೇ ಅನುಭವದ ಆಧಾರದಲ್ಲಿ ಸಂಪುಟ ವಿಸ್ತರಣೆಯ ತಂತ್ರಗಾರಿಕೆಯಲ್ಲಿ ತೊಡಗಿದ್ದರೆ ಹೈಕಮಾಂಡ್ ಮತ್ತು ಸಂಘ ಪರಿವಾರ ಭಿನ್ನವಾಗಿ ಯೋಚಿಸುತ್ತಿರುವುದು ಈಗ ಬಹಿರಂಗವಾಗಿದೆ.

CM BSY 3

ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ಎಷ್ಟು ಶಾಸಕರಿಗೆ ಅವಕಾಶ, ಪ್ರಾದೇಶಿಕತೆ, ಸಮುದಾಯಗಳ ಅಂಕಿ-ಅಂಶಕ್ಕಿಂತ ಯುವಕರಿಗೇ ಯಾಕೆ ಹೆಚ್ಚು ಅವಕಾಶ ನೀಡಬಾರದು ಎನ್ನುವುದು ಹೈಕಮಾಂಡ್ ಲೆಕ್ಕ. ಈ ಬಾರಿ ವಿಸ್ತರಣೆ ಸಂದರ್ಭದಲ್ಲಿ ಯುವ ಶಾಸಕರಿಗೆ ಅವಕಾಶ ನೀಡುವುದು ಉತ್ತಮ ಎನ್ನುವುದು ನಿರ್ಧಾರಕ್ಕೆ ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಏಳೆಂಟು ಯುವ ಶಾಸಕರನ್ನು ಪಕ್ಷ ವರಿಷ್ಠರು ಗುರುತಿಸಿದ್ದಾರೆ. ಕರಾವಳಿಯ ಭಾಗದಿಂದ ಕಾರ್ಕಳ ಶಾಸಕ ಸುನಿಲ್‍ಕುಮಾರ್, ಹಳೇ ಮೈಸೂರು ಭಾಗದಿಂದ ನಂಜನಗೂಡು ಶಾಸಕ ಹರ್ಷವರ್ಧನ್ ಮತ್ತು ಹಾಸನ ಶಾಸಕ ಪ್ರೀತಂಗೌಡ, ಹೈದರಾಬಾದ್ ಕರ್ನಾಟಕದಿಂದ ಕಲಬುರಗಿ ಉತ್ತರ ಶಾಸಕ ದತ್ತಾತ್ರೇಯ ರೇವೂರ ಮತ್ತು ಸುರಪುರ ಶಾಸಕ ರಾಜುಗೌಡ, ಮುಂಬೈ ಕರ್ನಾಟಕದಿಂದ ಧಾರವಾಡದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರನ್ನು ಪಟ್ಟಿ ಮಾಡಿಕೊಂಡಿದೆ. ಜಾತಿ, ಪ್ರದೇಶವಾರು ಲೆಕ್ಕಾಚಾರದಲ್ಲಿ ಈ ಯುವ ಶಾಸಕರಿಗೆ ಅವಕಾಶ ನೀಡಬೇಕೆನ್ನುವುದು ವರಿಷ್ಠರ ಉದ್ದೇಶ ಎನ್ನಲಾಗಿದೆ.

BJP Youth MLA

ಪಕ್ಷವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಹಿರಿಯರನ್ನು ತೆರೆಗೆ ಸರಿಸಿ ಯುವಕರಿಗೆ ಆದ್ಯತೆ ಕೊಡುವ ವಿಚಾರದಲ್ಲಿ ಪಕ್ಷದ ವರಿಷ್ಠರು ವಿಶೇಷ ಆಸಕ್ತಿ ಹೊಂದಿದ್ದಾರೆ. ಭವಿಷ್ಯದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ಸಂಘಟಿಸುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್, ಶತಾಯಗತಾಯ ಯುವ ಶಾಸಕರಿಗೆ ಹೊಸ ಮುಖಗಳಿಗೆ ಸಂಪುಟ ವಿಸ್ತರಣೆಯಲ್ಲಿ ಮನ್ನಣೆ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.

JP Nadda Amit Shah modi

ಮತ್ತೊಂದು ಕಡೆ ಆರ್‌ಎಸ್‌ಎಸ್ ಕೂಡ ಸಂಪುಟ ವಿಸ್ತರಣೆ ಕಗ್ಗಂಟು ಬಿಡಿಸಲು ಎಂಟ್ರಿ ಕೊಟ್ಟಿದೆ. ಸಂಘ ಪರಿವಾರ ವಿಶೇಷವಾಗಿ ಕರಾವಳಿ ಭಾಗದ ಬಗ್ಗೆ ಹೆಚ್ಚು ಒಲವು ತೋರುತ್ತಿದೆ. ಕಾರಣವೇನೆಂದರೆ ಬಿಜೆಪಿ ಹೆಚ್ಚು ನೆಲೆ ಇರುವುದು, ಪಕ್ಷ ಬಲಿಷ್ಠವಾಗಿರುವುದು ಕರಾವಳಿ ಭಾಗದಲ್ಲಿ. ಅದನ್ನು ಕಳೆದುಕೊಳ್ಳುವುದಾಗಲಿ, ಕಾರ್ಯಕರ್ತರಲ್ಲಿ ಅತೃಪ್ತಿ, ಅಸಮಾಧಾನ ಮೂಡುವುದಕ್ಕಾಗಲಿ ಅವಕಾಶ ನೀಡಬಾರದೆಂದು ಪರಿವಾರದ ಉದ್ದೇಶ. ಅದರಂತೆ ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೂ ವಿಶೇಷ ಆದ್ಯತೆ, ಒತ್ತು ನೀಡಬೇಕೆಂದು ಆರ್‌ಎಸ್‌ಎಸ್ ಬಯಸಿದೆ. ದಕ್ಷಿಣ ಕನ್ನಡ ಜಿಲ್ಲೆಯ 6, ಉಡುಪಿಯ 5, ಉತ್ತರ ಕನ್ನಡ ಜಿಲ್ಲೆಯ 5 ಶಾಸಕರು ಪಕ್ಷದಿಂದ ಆಯ್ಕೆಯಾಗಿದ್ದರು. ಆ ಪ್ರದೇಶಕ್ಕೆ ನೀಡಬೇಕಾದ ಪ್ರಾಧನ್ಯತೆ ನೀಡಿಲ್ಲ ಎಂಬ ಅಸಮಾಧಾನವಿದೆ. 16 ಶಾಸಕರ ಪೈಕಿ ಕನಿಷ್ಠ 3 ಮಂದಿಯನ್ನು ಸಂಪುಟಕ್ಕೆ ಸೇರಿಸಬೇಕೆನ್ನುವುದು ಸಂಘ ಪರಿವಾರದ ಒತ್ತಡ. ಬಿಜೆಪಿ ಕಟ್ಟಲು ಮಾದರಿಯಾಗಿ ಕರಾವಳಿಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಎಲ್ಲ ಕಾರ್ಯಗಳಿಗೂ ಕರಾವಳಿಯನ್ನು ಬಳಸಿಕೊಂಡು ಈಗ ನಿರ್ಲಕ್ಷಿಸುವುದು ಸರಿಯಲ್ಲ ಎನ್ನವುದು ಆರ್‌ಎಸ್‌ಎಸ್ ಅಭಿಪ್ರಾಯ. ಹಾಗಾಗಿ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕರಾವಳಿಗೆ ಹೆಚ್ಚು ಆದ್ಯತೆ ಸಿಗುವ ನಿರೀಕ್ಷೆ ಇದೆ.

rss 647 101116052404

ಬಂಟ ಸಮುದಾಯದ ಪ್ರಾಬಲ್ಯವಿರುವ ಕರಾವಳಿಯಲ್ಲಿ ಸಂಸದರು ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದೇ ರೀತಿ 5 ಮಂದಿ ಬಂಟ ಸಮುದಾಯದ ಶಾಸಕರೂ ಇದ್ದಾರೆ. ಬಿಜೆಪಿಗೆ ಹೆಚ್ಚು ಬೆಂಬಲ, ಬಲ ನೀಡುತ್ತಿರುವ ಮೂರು ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯಕ್ಕೆ ನಿರೀಕ್ಷಿತ ಅವಕಾಶ ಕೊಟ್ಟಿಲ್ಲ ಅನ್ನೋ ಕೂಗು ಕೂಡ ಇದೆ. ಅದನ್ನು ಈಗ ಪಕ್ಷದ ವರಿಷ್ಠರು ಸರಿಪಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸಂಘ ಪರಿವಾರದ ಆಶಯದಂತೆ ಸಂಪುಟ ವಿಸ್ತರಣೆ ನಡೆದರೆ ಕರಾವಳಿಗೆ ಹೆಚ್ಚಿನ ಅವಕಾಶ ಸಿಗುವ ಸಾಧ್ಯತೆ ಇದೆ.

TAGGED:bjpbs yeddyurappacabinet expansionPublic TVrssಆರ್‍ಎಸ್‍ಎಸ್ಪಬ್ಲಿಕ್ ಟಿವಿಬಿ.ಎಸ್.ಯಡಿಯೂರಪ್ಪಬಿಜೆಪಿಸಂಪುಟ ವಿಸ್ತರಣೆ
Share This Article
Facebook Whatsapp Whatsapp Telegram

Cinema news

balaramana dinagalu
ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಬಲರಾಮನ ದಿನಗಳು
Cinema Latest South cinema Top Stories
ashwini gowda
ʻನನ್ ತಲೇಲಿ ಬುದ್ಧಿ ಇಲ್ಲ’ ಹೇಳಲು ಅಶ್ವಿನಿ ಒಪ್ಪಲ್ಲ!
Cinema Latest TV Shows
Bigg Boss
ಗಿಲ್ಲಿ ಜೊತೆ ಕಿರಿಕ್ ಮಾಡ್ಕೊಂಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು
Cinema Latest Sandalwood Top Stories
Sathish Ninasam 2
ʻಏಳೋ ಏಳೋ ಮಾದೇವʼ ಸಾಂಗ್ – ಸತೀಶ್ ನೀನಾಸಂ ಸೂಪರ್
Cinema Latest Sandalwood

You Might Also Like

Google Meet
Latest

ಭಾರತದಲ್ಲಿ ಗೂಗಲ್ ಮೀಟ್ ಡೌನ್

Public TV
By Public TV
40 minutes ago
Imran Khan
Latest

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹತ್ಯೆ ವದಂತಿ

Public TV
By Public TV
50 minutes ago
Muruga Mutt Seer
Chitradurga

ಈಗ ಮಾತನಾಡುವ ಸಂದರ್ಭ ಕಡಿಮೆಯಿದೆ – ಖುಲಾಸೆಯಾದ ಬಳಿಕ ಮುರುಘಾ ಶ್ರೀ ಪ್ರತಿಕ್ರಿಯೆ

Public TV
By Public TV
1 hour ago
Shivamurthy Murugha Sharana Aide Jithendra
Chitradurga

ಮುರುಘಾ ಶ್ರೀಗಳು ಗಂಗೆಯಷ್ಟೇ ಪವಿತ್ರ: ಆಪ್ತ ಜಿತೇಂದ್ರ ರಿಯಾಕ್ಷನ್

Public TV
By Public TV
2 hours ago
Odanadi Parashu
Chitradurga

ಆರೋಪಿಗಳನ್ನು ರಕ್ಷಿಸಲು ತನಿಖಾಧಿಕಾರಿಗಳು ಸರಿಯಾದ ದಾಖಲೆ ಸಲ್ಲಿಸಿರಲಿಲ್ಲ: ಒಡನಾಡಿ ಪರಶು

Public TV
By Public TV
2 hours ago
MURUGHA SHREE
Chitradurga

ಪೋಕ್ಸೋ ಪ್ರಕರಣದಲ್ಲಿ ಬಿಗ್‌ ರಿಲೀಫ್‌ – ಮುರುಘಾ ಶ್ರೀ ನಿರ್ದೋಷಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?