ಬೆಂಗಳೂರು: ಕಾವೇರಿ (Cauvery Water Dispute) ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme Court) ಕೊಟ್ಟ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬೇಕೆಂಬ ದುರುದ್ದೇಶ ನಮಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಂದಿಡಬೇಕಾದ ಉದ್ದೇಶ ಇದೆ. ನಾವು 42% ರಷ್ಟು ಮಳೆ ಕೊರತೆ ಇದ್ದರು ಕೂಡ, ವಾಸ್ತವ ಪರಿಸ್ಥಿತಿ ವಿವರಿಸಲಿಲ್ಲ. ಸಂಕಷ್ಟದ ಸ್ಥಿತಿಯಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಶಾಕ್ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ
ಸುಪ್ರೀಂ ಕೋರ್ಟ್ನಲ್ಲೂ ನಮಗೆ ಸಹಾಯ ಆಗಲಿಲ್ಲ. ತಮಿಳುನಾಡು ಕೇಳುವ ಮುಂಚೆಯೇ ಜೂನ್ನಿಂದಲೇ ನೀರು ಬಿಡಲು ಶುರು ಮಾಡಿದ್ದೇಕೆ? ನನಗೆ ಸಂಶಯ ಇರೋದು, ಡಿಎಂಕೆ ಬೆದರಿಕೆ ಹಾಕಿರಬಹುದಾ? ಹೈಕಮಾಂಡ್ ಒತ್ತಡ ಇತ್ತಾ? ನೀರು ಬಿಟ್ಟು ಪಂಚಾಯಿತಿ ಕರೆಯುವಂತೆ ಮಾಡಿದ್ರಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ನೀರು ಬಿಟ್ಟ ಮೇಲೆ ಸರ್ವಪಕ್ಷ ಸಭೆ ಕರೆದ್ರಿ. ನೀರು ಬಿಟ್ಟ ಮೇಲೆ ಸಂಸದರ ಸಭೆ ಕರೆದ್ರಿ. ಎಲ್ಲ ಆದ್ಮೇಲೆ ನಿಮ್ಮ ಬೇಡಿಕೆ ಮುಂದಿಟ್ಟಿದ್ದೀರಿ. ಕಾಂಗ್ರೆಸ್ ರಾಜಕೀಯ ನಿರ್ಣಯಗಳಿಗಾಗಿ ಕರ್ನಾಟಕ ಬಲಿಪಶು ಮಾಡಿದ್ದಾರೆ. ವಾಸ್ತವಿಕ ಸಂಕಷ್ಟದ ಪರಿಸ್ಥಿತಿಯನ್ನ ಸುಪ್ರೀಂ ಕೋರ್ಟ್ಗೂ ಮನವರಿಕೆ ಮಾಡಿಕೊಡಲು ಆಗಲಿಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯಿಂದ ಪ್ರತ್ಯೇಕ ಗಣೇಶನ ಪ್ರತಿಷ್ಠಾಪನೆ – ವಿಸರ್ಜನೆ ವೇಳೆ ಗುಂಪು ಘರ್ಷಣೆ
Web Stories