ಚಿಕ್ಕಮಗಳೂರು: ಮದುವೆ ಮುಗಿಸಿಕೊಂಡು ವಾಪಸ್ ಹೊರಟಿದ್ದ ಮದುವೆ ದಿಬ್ಬಣ ಬಸ್ ಒಂದು ಪಲ್ಪಿ ಹೊಡೆದಿರುವ ಘಟನೆ ಶೃಂಗೇರಿಯ ಆನೆಗುಂದ ಬಳಿ ನಡೆದಿದೆ.
ಶೃಂಗೇರಿಯಲ್ಲಿ ಸೋಮವಾರ ನಡೆದ ಮದುವೆ ಆಗಮಿಸಿದ್ದ ಮದುವೆ ದಿಬ್ಬಣ ಬಸ್ ಇಂದು ಮಂಡ್ಯಕ್ಕೆ ಹಿಂದಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮದುವೆ ಸೋಮವಾರ ಮುಗಿದಿದ್ದು, ಬಸ್ ನಲ್ಲಿ ಕೇವಲ 16 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ಶೃಂಗೇರಿಯ ಆನೆಗುಂದ ಬಳಿ ಬಂದಾಗ ಅಪಘಾತ ಸಂಭವಿಸಿದೆ. ಶೃಂಗೇರಿ ರಸ್ತೆ ಮಾರ್ಗವು ಅತ್ಯಂತ ಹೆಚ್ಚು ತಿರುವುಗಳಿರುವ ಪ್ರದೇಶವಾಗಿದ್ದು, ಚಾಲಕನಿಗೆ ಇಂತಹ ಪ್ರದೇಶದಲ್ಲಿ ಬಸ್ ಚಾಲನೆ ಮಾಡಲು ಅನುಭವ ಇಲ್ಲದ ಕಾರಣ ಬಸ್ ನಿಯಂತ್ರಣ ಕಳೆದು ಕೊಂಡು ಪಲ್ಟಿ ಹೊಡೆದಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದಿರುವ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.