ಉಡುಪಿ: ಕಂಬಳ ಗದ್ದೆಯಲ್ಲಿ ಓಡುತ್ತಿದ್ದ ಕೋಣಗಳು ಏಕಾಏಕಿ ಎಡಕ್ಕೆ ತಿರುಗಿ ವೇದಿಕೆಯತ್ತ ನುಗ್ಗಿ ಇಬ್ಬರನ್ನು ಕೆಸರು ಗದ್ದೆಗೆ ಎತ್ತಿ ಬಿಸಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯಲ್ಲಿ ಹರಕೆಯ ಕಂಬಳ ನಡೆಯುತ್ತಿತ್ತು. ಹರಕೆಗಾಗಿ ಕಂಬಳ ಗದ್ದೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತಿತ್ತು. ಈ ವೇಳೆ ಕೋಣವೊಂದು ಕಂಬಳ ಗದ್ದೆ ಬಿಟ್ಟು ಯದ್ವಾತದ್ವಾ ಓಡಿದೆ. ಪರಿಣಾಮ ಯದ್ವಾತದ್ವಾ ಓಡಿ ಓರ್ವನನ್ನು ತಿವಿದು ಕಸರುಗದ್ದೆಗೆ ಉರುಳಿಸಿದೆ.
ಕೋಣ ಟ್ರ್ಯಾಕ್ ಬಿಟ್ಟು ಎಡಕ್ಕೆ ಓಡಿ ಕಂಬಳ ವೀಕ್ಷಿಸುತ್ತಿದ್ದ ಜನರ ಮೇಲೆ ಎರಗಿದ್ದು, ಜನರು ಚಲ್ಲಾಪಿಲ್ಲಿ ಆಗಿದ್ದಾರೆ. ಎದುರು ಸಿಕ್ಕಿದ ಇಬ್ಬರನ್ನು ಉರುಳಿಸಿ ಎಸೆದಿದೆ. ವ್ಯಕ್ತಿಯೋರ್ವನಿಗೆ ಕೋಣವು ಕೊಂಬಿನಲ್ಲಿ ತಿವಿದಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಎಲ್ಲ ದೃಶ್ಯವನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ಗದ್ದೆಯ ಮತ್ತೊಂದು ಬದಿಯಲ್ಲಿದ್ದ ಕಂಬಳಾಭಿಮಾನಿಗಳು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಅದೃಷ್ಟವಶಾತ್ ಕೋಣದ ತಿವಿತಕ್ಕೆ ಒಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇಬ್ಬರು ಕೆಸರು ಗದ್ದೆಗೆ ಬಿದ್ದು ಕೆಸರುಮಯವಾಗಿದ್ದಾರೆ.
ಕಂಬಳದ ಕೋಣಗಳಿಗೆ ಬೆತ್ತದ ಏಟು ಹಾಕಲು ನಿರ್ಬಂಧ ಇದೆ. ಹೀಗಾಗಿ ಕೋಣ ಓಡಿಸುವ ವ್ಯಕ್ತಿಯ ನಿಯಂತ್ರಣಕ್ಕೆ ಕೋಣ ಸಿಗುವುದಿಲ್ಲ. ಆದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv