ಉಡುಪಿ: ಮೋದಿಯೆದುರು ಸಿದ್ದರಾಮಯ್ಯ ಬಚ್ಚ. ನಿನಗೆ ಯಾರು ಭಯಪಡ್ತಾರೆ ಸಿದ್ದರಾಮಯ್ಯಾ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಯ ಮೇಲೆ ಒಂದೂ ಆರೋಪಗಳಿಲ್ಲ. ನಿನ್ನ ಮೈಮೇಲೆ ಆರೋಪಗಳ ಸುರಿಮಳೆಯೇ ಇದೆ. ಸಿಎಂ ಅಂತಹ ವ್ಯಕ್ತಿಗೆ ಪ್ರಧಾನಿ ಮೋದಿ ಹೆದರಬೇಕಾ ಅಂತ ಪ್ರಶ್ನೆಮಾಡಿದರು.
ಶ್ರೀಕೃಷ್ಣ- ಮಂಜುನಾಥಸ್ವಾಮಿ ಸಿಎಂ ಅವರನ್ನು ಕ್ಷಮಿಸಲ್ಲ. ಉಡುಪಿ ಶ್ರೀಕೃಷ್ಣಮಠಕ್ಕೆ ಸಿಎಂ ಬರದಿರುವುದು ಒಳ್ಳೆದಾಯ್ತು. ಸಿಎಂ ಬಂದ್ರೆ ಕೃಷ್ಣ ಮಠ ಅಪವಿತ್ರ ಆಗುತ್ತಿತ್ತು. ಧರ್ಮಸ್ಥಳ ದೇವಸ್ಥಾನಕ್ಕೆ ಸಿಎಂ ಮೀನು ಮಾಂಸ ತಿಂದು ಹೋದರು. ಮಂಜುನಾಥ ಸ್ವಾಮಿ ಬಾಗಿಲಲ್ಲೇ ತಡೆದು ನಿಲ್ಲಿಸಿದ. ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂದರು. ಶ್ರೀಕೃಷ್ಣ- ಮಂಜುನಾಥ ನಿನ್ನನ್ನು ಕ್ಷಮಿಸಲ್ಲ ಸಿದ್ದರಾಮಯ್ಯ ಎಂದು ಶಾಪ ಹಾಕಿದರು.
ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಸಿಎಂ ಆಗಲು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಯಾತ್ರೆ ಹೊರಟಿದ್ದೇನೆ ಎಂದರು.
ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇಂದು ಚಳಿಗಾಲದ ಅಧಿವೇಶನ ನಡೆಯಲು ಬಿಡಲ್ಲ ಎಂದು ಸವಾಲು ಹಾಕಿದರು. ಕ್ಲೀನ್ ಚಿಟ್ ಸಿಕ್ಕ ಎಲ್ಲ ಕೇಸು ಮರು ತನಿಖೆ ಮಾಡುತ್ತೇನೆ. ಸತ್ಯಾಂಶವನ್ನು ಹೊರಗೆಳೆಯುತ್ತೇನೆ ಅಂತ ಬಿಸೆ ವೈ ಹೇಳಿದ್ರು.
Glimpses of the unprecedented response to #ParivartanaYatre led by Sri. @BSYBJP in temple town Udupi. pic.twitter.com/2lU7MtRrlo
— BJP Karnataka (@BJP4Karnataka) November 12, 2017
ಉಡುಪಿಯಲ್ಲಿ ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದ ಸಭೆಯನ್ನು ನಾನು ನೋಡಿರಲಿಲ್ಲ. ರಾಜ್ಯದ ಜನ ನೆಮ್ಮದಿಯಿಂದ ಬಾಳುವಂತಾಗಬೇಕು. ಅದಕ್ಕಾಗಿ ಈ ಕಾಂಗ್ರೆಸ್ ಸರಕಾರ ಕಿತ್ತೊಗೆಯಬೇಕು ಎಂಬುದು ಯಾತ್ರೆಯ ಉದ್ದೇಶ. ದೇಶ ಕಾಂಗ್ರೆಸ್ ಮುಕ್ತವಾಗಬೇಕಾದರೆ ರಾಜ್ಯವೂ ಕಾಂಗ್ರೆಸ್ ಮುಕ್ತವಾಗಬೇಕು.#ParivartanaYatre #Udupi pic.twitter.com/QW6tZOsycN
— B.S.Yediyurappa (@BSYBJP) November 12, 2017
Glimpses of the unprecedented response to #ParivartanaYatre led by Sri. @BSYBJP in temple town Udupi. pic.twitter.com/lnj85Q9RtL
— BJP Karnataka (@BJP4Karnataka) November 12, 2017
ನಿಮ್ಮೆಲ್ಲರ ಆಶೀರ್ವಾದಿಂದ ಮೂರ್ನಾಲ್ಕು ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ರಾಜ್ಯಕ್ಕೆ ಉತ್ತಮ ಮತ್ತು ಪ್ರಾಮಾಣಿಕ ಆಡಳಿತ ನೀಡಬೇಕೆಂಬ ಇರಾದೆಯಿದೆ. ಉಡುಪಿಗೆ ಬಂದರೂ ದೇವಸ್ಥಾನಕ್ಕೆ ಹೋಗಲಿಲ್ಲ. ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ಹೋದರು. ಇಂಥವರು ರಾಜ್ಯದ ಮುಖ್ಯಮಂತ್ರಿಯಾಗಿರಬೇಕೆ?#ParivartanaYatre #Udupi
— B.S.Yediyurappa (@BSYBJP) November 12, 2017
24-25ರಂದು ಸಂತರ ಸಮ್ಮೇಳನ ನಡೆಯುತ್ತಿದೆ. ನಮ್ಮ ಮುಖ್ಯಮಂತ್ರಿ ಯೋಗ್ಯತೆಗೆ ಹೊಂಡವಿಲ್ಲದ ರಸ್ತೆ ನೀಡಲು ಸಾಧ್ಯವಾಗುತ್ತಿಲ್ಲ. ನಡೆಯುತ್ತಿರುವ ಒಳ್ಳೆಯ ಕೆಲಸಕ್ಕೆ ಒಳ್ಳೆಯ ರಸ್ತೆ ನಿರ್ಮಿಸುವ ಮೂಲಕ ಕೊಂಚ ಸೌಲಭ್ಯ ಒದಗಿಸುವುದು ಸರ್ಕಾರಕ್ಕೆ ಸಾಧ್ಯವಿಲ್ಲವೇ?#ParivartanaYatre #Udupi
— B.S.Yediyurappa (@BSYBJP) November 12, 2017
ಡಾ.ವಿ.ಎಸ್. ಆಚಾರ್ಯ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಜಿಲ್ಲಾಧಿಕಾರಿ ಕಚೇರಿ, ಕಾಂಕ್ರೀಟ್ ರಸ್ತೆ ಆಗಿದೆ. ಇದಕ್ಕೆ ಅವರು ಕಾರಣ. ಹಿಂದೆ ಉಡುಪಿ ಹೇಗಿತ್ತು ಎಂಬುದು ನಿಮಗೆಲ್ಲ ಗೊತ್ತು. ಅವರಿಗೆ ಉಡುಪಿ ಅಭಿವೃದ್ಧಿಯ ಬಗ್ಗೆ ಅಷ್ಟು ಕಾಳಜಿಯಿತ್ತು.#ParivartanaYatre #Udupi
— B.S.Yediyurappa (@BSYBJP) November 12, 2017
ಚಿನ್ನದ ನಾಡು, ಗಂಧದ ಬೀಡು, ರೇಷ್ಮೆಯ ನಾಡಾದ ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯ ದೃಷ್ಟಿಕೋನ ಇರಿಸಿಕೊಂಡು ಕೆಲಸ ಮಾಡುವ ಸರ್ಕಾರ ಬೇಕಿದೆ. ನಮ್ಮ ಸರ್ಕಾರ ಇದ್ದಾಗ ನಾವು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದೆವು. ಈ ಸರ್ಕಾರ ಬೆಂಗಳೂರಿನ ಕೆಲವು ಸೈಟ್ ಗಳನ್ನು ಅಡವಿಟ್ಟು ಸಾಲ ತರುವ ಹಂತ ತಲುಪಿದೆ.#ParivartanaYatre #Udupi
— B.S.Yediyurappa (@BSYBJP) November 12, 2017