ಬಿಎಸ್‍ವೈ ಮೇಲೆ ನನಗೆ ಅನುಕಂಪ ಇದೆ, ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ: ರೇವಣ್ಣ

Public TV
1 Min Read
REVANNA 2

ಬೆಂಗಳೂರು: ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ ಎನ್ನುವ ಯಡಿಯೂರಪ್ಪನವರ ಮೇಲೆ ನನಗೆ ಅನುಕಂಪವಿದೆ, ಅವರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲಾಗಿ ಅನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕುರಿತು ನಾನು ಮಾತಾಡಲ್ಲ. ಯಡಿಯೂರಪ್ಪ ಬಗ್ಗೆ ಮಾತಾಡಿದರೆ ನಾನು ಪೊಳ್ಳಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಅವರ ಮೇಲೆ ನನಗೆ ಅನುಕಂಪ ಇದೆ. ಅವರಿಂದ ಸರಕಾರ ರಚಿಸಲು ಸಾಧ್ಯವಾಗಲಿಲ್ಲ. ಇಂಥ ಸಂದರ್ಭದಲ್ಲಿ ಅವರ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಟಾಂಗ್ ನೀಡಿದರು.

ಶಾಸಕ ಶ್ರೀರಾಮುಲು ಹೇಳಿಕೆ ಬಗ್ಗೆ ನಾನೇನು ಮಾತಾಡೊಲ್ಲ. ಶ್ರೀರಾಮುಲು ಬಗ್ಗೆ ಮಾತಾಡಿದರೆ ನನ್ನನ್ನು ನಾನೇ ಅಗೌರವ ಮಾಡಿಕೊಂಡಂತೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅವಧಿಗಳಲ್ಲಿ ಏನೇನಾಗಿದೆ ಅಂತ ಬಹಿರಂಗ ಚರ್ಚೆ ಆಗಲಿ. ಬಹಿರಂಗ ಚರ್ಚೆಗೆ ನಾವು ಸಿದ್ದ. ಮಠಾಧೀಶರು ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರು ಹಾಗೂ ಮಠಾಧೀಶರಿಗೆ ಸವಾಲು ಹಾಕಿ ಪ್ರತ್ಯೇಕ ರಾಜ್ಯ ರಚನೆಗಾಗಿ ಬಂದ್ ಮಾಡುತ್ತಿರೋರಿಗೆ ಸಚಿವ ರೇವಣ್ಣ ತಿರುಗೇಟು ನೀಡಿದರು.

ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಅಂತ ಚರ್ಚೆ ನಡೆಯಲಿ. ಮಠಾಧೀಶರ ಪ್ರತಿಭಟನೆ ಕುರಿತು ನಾನು ಮಾತಾಡಲ್ಲ. ಉತ್ತರ ಕರ್ನಾಟಕದವರಿಗೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಿಎಂ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸುತ್ತೇನೆ ಅಂತ ತಿಳಿಸಿದರು.

Share This Article