ರಾಮನಗರ: ಜಿಲ್ಲೆಯಲ್ಲಿ ಯುವಕನೊಬ್ಬನ ಹೊಟ್ಟೆಯ ಒಳಗಿದ್ದ ಪೊರಕೆಯ ಹಿಡಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಹೊರತೆರೆದಿರುವ ಘಟನೆ ನಡೆದಿದೆ.
ಮೆಹಬೂಬ್ ನಗರದ ನಿವಾಸಿ ಇರ್ಫಾನ್ ಷರೀಫ್ (26) ಹೊಟ್ಟೆಗೆ ಪೊರಕೆಯ ಹಿಡಿ ಸೇರಿತ್ತು. ರಾಮನಗರದ ನಾರಾಯಣ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಪೊರಕೆಯ ಹಿಡಿಯನ್ನು ಹೊರತೆಗೆದಿದ್ದಾರೆ.
ಮೂರು ದಿನದ ಹಿಂದೆ ಗುದದ್ವಾರದ ಮೂಲಕ ಇರ್ಫಾನ್ ಷರೀಫ್ ಹೊಟ್ಟೆಗೆ 21 ಸೆಂ.ಮೀ. ಪೊರಕೆಯ ಹಿಡಿ ಹೊಕ್ಕಿತ್ತು. ಹೊಟ್ಟೆ ಸೇರಿದ್ದ ಪೊರಕೆಯ ಹಿಡಿ ಕರುಳಿನವರೆಗೂ ತಲುಪಿತ್ತು. ಇದರಿಂದ ಕರುಳಿನ ಭಾಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಹೊಟ್ಟೆಗೆ ಪೊರಕೆ ಹಿಡಿ ಸೇರಿರುವುದು ಕಂಡು ಬಂದಿದೆ.
ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎಸ್.ವಿ. ನಾರಾಯಣಸ್ವಾಮಿರವರು ಪೊರಕೆಯ ಹಿಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಬೇರೆ ಹುಡುಗರು ಕರೆದುಕೊಂಡು ಹೋಗಿ ಹಾಕಿದ್ದಾರೆ ಎಂದು ಪೋಷಕರು ವೈದ್ಯರ ಬಳಿ ಹೇಳಿದ್ದಾರೆ.