ಬೆಂಗಳೂರು: ಸಿಲಿಕಾನ್ ಸಿಟಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಆದೇಶದ ಮೇರೆಗೆ ಸೇತುವೆಗೆ ಬಣ್ಣ ಬಳೆಯಲಾಗಿದೆ.
ಸಿಟಿ ಮಾರ್ಕೆಟ್, ಮೈಸೂರು ರೋಡ್ ಸದಾ ಬ್ಯುಸಿ ಇರುವ ರಸ್ತೆ. ದಿನಕ್ಕೆ ಲಕ್ಷಾಂತರ ವಾಹನಗಳು ಮೈಸೂರು ರಸ್ತೆ ಮೂಲಕ ಸಂಚಾರ ಮಾಡುತ್ತಿರುತ್ತವೆ. ಹೀಗಾಗಿ ಸದಾ ಟ್ರಾಫಿಕ್ನಿಂದ ಕೂಡಿರುತ್ತದೆ. ಕೆಂಗೇರಿ, ಬಿಡದಿ, ರಾಮನಗರ, ಮಂಡ್ಯ ಮತ್ತು ಮೈಸೂರು ಕಡೆ ಹೋಗುವ ವಾಹನ ಸವಾರರು ಈ ಮಾರ್ಗವಾಗಿ ಹೋಗುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.
ಅದರಲ್ಲೂ ಮೆಜೆಸ್ಟಿಕ್ ಮತ್ತು ಟೌನ್ಹಾಲ್ ಕಡೆಯಿಂದ ಬರುವ ವಾಹನಗಳು ಸಿಟಿ ಮಾರ್ಕೆಟ್ನ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಸಂಚಾರ ಮಾಡಬೇಕಾಗಿದೆ. ಈ ಮೇಲ್ಸೇತುವೆ ಮೇಲೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳು ಉಲ್ಲಂಘನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಮೇಲ್ಸೇತುವೆ ಮೇಲೆ ಅಪಘಾತಗಳನ್ನ ತಪ್ಪಿಸುವ ಉದ್ದೇಶದಿಂದ ಸೇತುವೆಗೆ ಬಣ್ಣ ಬಳಿಯಲಾಗಿದೆ.
ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಅವರು ಈ ಮೇಲ್ಸೇತುವೆಗೆ ಬಣ್ಣವನ್ನು ಬಳಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಇರಬಹುದು, ಮುಂಜಾನೆ ಇರಬಹುದು, ಬೆಳಗಿನ ಸಮಯದಲ್ಲಿ ಕೂಡ ಸೇತುವೆ ಗೋಡೆ, ಅಡೆತಡೆ ವಾಹನ ಸವಾರರಿಗೆ ಕಂಡು ಎಚ್ಚರಿಕೆಯಿಂದ ಸವಾರರು ವಾಹನಗಳನ್ನ ಸಂಚಾರಿಸಲಿ ಎಂದು ಬಣ್ಣ ಬಳಿಯಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೌಮ್ಯಲತಾ ಅವರು, “ಈ ದಿನ ಪಶ್ಚಿಮ ವಿಭಾಗ ವ್ಯಾಪ್ತಿಯ ಮೈಸೂರು ರಸ್ತೆ, ಸಿಟಿ ಮಾರುಕಟ್ಟೆಯ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಮೇಲ್ಸೇತುವೆ ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದವು. ಈ ರಸ್ತೆಯಲ್ಲಿ ಅಪಘಾತವನ್ನು ತಡೆಗಟ್ಡುವ ನಿಟ್ಟಿನಲ್ಲಿ ನನ್ನ ಸೂಚನೆ, ನಿಲುವಳಿ ಮತ್ತು ನಿರ್ದೇಶನದ ಮೇರೆಗೆ ಬಿಬಿಎಂಪಿಯು ಮೇಲ್ಸೇತುವೆಯ ರಸ್ತೆಯ ಗೋಡೆಗೆ ಬಣ್ಣ ಬಳಿಸಿ ಕ್ರಮ ಕೈಗೊಂಡಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಅವರು ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಬಣ್ಣ ಬಳಿಯುವಂತೆ ಬಿಬಿಎಂಪಿಗೆ ನಿರ್ದೇಶನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸೇತುವೆಗೆ ಬಣ್ಣ ಬಳಿಯುವ ಮೂಲಕ ಅಪಘಾತ ತಡೆಗೆ ಮುಂದಾಗಿದ್ದಾರೆ. ಇನ್ನಾದರೂ ವಾಹನ ಸವಾರರು ಎಚ್ಚೇತ್ತು ಎಚ್ಚರಿಕೆ ವಾಹನಗಳನ್ನ ಓಡಿಸುತ್ತಾರ ಕಾದು ನೋಡಬೇಕಿದೆ.
ಈದಿನ ಸಂ#ಪಶ್ಚಿಮ ವಿಭಾಗ ವ್ಯಾಪ್ತಿಯ #ಮೈಸೂರುರಸ್ತೆ ಸಿಟಿಮಾರುಕಟ್ಟೆಯ ಶ್ರೀ #ಬಾಲಗಂಗಾಧರನಾಥ ಸ್ವಾಮಿಜಿ ಮೇಲುಸೇತುವೆ ರಸ್ತೆಯಲ್ಲಿ ಪದೇಪದೇ ಸಂಭವಿಸುತ್ತಿದ್ದ ರಸ್ತೆ ಅಪಘಾತವನ್ನು ತಡೆಗಟ್ಡುವ ನಿಟ್ಟಿನಲ್ಲಿ ನನ್ನ ಸೂಚನೆ, ನಿಲುವಳಿ & #ನಿರ್ದೇಶನದ ಮೇರೆಗೆ ಬಿಬಿಎಂಪಿಯು ಮೇಲುಸೇತುವೆಯ ರಸ್ತೆಯ ಗೋಡೆಗೆ ಬಣ್ಣ ಬಳಿಸಿ ಕ್ರಮ ಕೈಗೊಂಡಿರುತ್ತದೆ. pic.twitter.com/5GI3fdzVTx
— Mohammad Sujeetha M S, IPS (@DCPTrWestBCP) February 8, 2020