ಮುಂಬೈ: ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲು ಮುರಿಯಿರಿ. ನಾನು ಮರುದಿನ ಜಾಮೀನು ನೀಡಲು ಬರುತ್ತೇನೆ ಎಂಬ ಶಾಸಕ ಪ್ರಕಾಶ್ ಸುರ್ವೆ ಹೇಳಿಕೆ ಖಂಡಿಸಿ ಉದ್ಧವ್ ಠಾಕ್ರೆ ಅವರ ಶಿವಸೇನೆ ದೂರು ದಾಖಲಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಬೆಂಬಲಿಸುವ ಶಾಸಕರಲ್ಲಿ ಒಬ್ಬರಾದ ಪ್ರಕಾಶ್ ಸುರ್ವೆ ಅವರು, ಆಗಸ್ಟ್ 14 ರಂದು ಮುಂಬೈನ ಮಗಥಾಣೆ ಪ್ರದೇಶದ ಕೊಕನಿ ಪದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಯಾರಾದರೂ ನಿಮಗೆ ಏನಾದರೂ ಹೇಳಿದರೆ ಅವರಿಗೆ ಉತ್ತರಿಸಿ. ಯಾರ ದಾದಾಗಿರಿ ಇಲ್ಲಿ ನಡೆಯುವುದಿಲ್ಲ. ನೀವು ಕೂಡ ಹೊಡೆಯಿರಿ. ನಿಮಗಾಗಿ ನಿಮ್ಮ ಪ್ರಕಾಶ್ ಸುರ್ವೆ ಇಲ್ಲಿದ್ದಾನೆ. ನೀವು ಅವರ ಕೈಗಳನ್ನು ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲುಗಳನ್ನು ಮುರಿಯಿರಿ, ಮರುದಿನ ನಾನು ಬಂದು ನಿಮಗೆ ಜಾಮೀನು ನೀಡುತ್ತೇನೆ, ಚಿಂತಿಸಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ದೃಷ್ಟಿಯಿಂದ ಬದಲಾಗುತ್ತಾರಾ ಬಿಜೆಪಿ ರಾಜ್ಯಾಧ್ಯಕ್ಷ..?
ನಾವು ಯಾರೊಂದಿಗೂ ಜಗಳವಾಡುವುದಿಲ್ಲ, ಆದರೆ ಯಾರಾದರೂ ನಮ್ಮೊಂದಿಗೆ ಜಗಳವಾಡಿದರೆ, ನಾವು ಅವರನ್ನು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪ್ರಚೋದನಕಾರಿ ಹೇಳಿಕೆಯನ್ನು ಖಂಡಿಸಿ ಉದ್ಧವ್ ಠಾಕ್ರೆ ಬಣವು ದಹಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದನ್ನೂ ಓದಿ: ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಟಿಆರ್ಎಸ್ ಮುಖಂಡನ ಬರ್ಬರ ಹತ್ಯೆ
ಆನ್ಲೈನ್ನಲ್ಲಿ ವೀಡಿಯೊ ಪಡೆಯುತ್ತಿರುವ ಇರುವುಗಳನ್ನು ಗಮನಿಸಿದರೆ, ಈ ವಿಚಾರವಾಗಿ ಇಂದು ಪ್ರತಿಪಕ್ಷಗಳು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ಅಲ್ಲದೇ ಮುಖ್ಯಮಂತ್ರಿ ಶಿಂಧೆ ಅವರ ಪತ್ರಿಕಾಗೋಷ್ಠಿ ಕೂಡ ನಿಗದಿಯಾಗಿದೆ. ಉದ್ಧವ್ ಠಾಕ್ರೆ ತಾಂತ್ರಿಕವಾಗಿ ಅವರ ತಂದೆ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮುಖ್ಯಸ್ಥರಾಗಿ ಉಳಿದಿದ್ದಾರೆ. ಆದರೆ ಪಕ್ಷದ ಹಕ್ಕು ಯಾರಿಗೆ ಸಿಗುತ್ತದೆ ಎಂಬ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ.