ಹುಡ್ಗಿರನ್ನು ಚುಡಾಯಿಸುತ್ತಿದ್ದ ಪಡ್ಡೆ ಹುಡ್ಗುರನ್ನು ಪ್ರಶ್ನಿಸಿದ್ದ ಪೇದೆ ಮೇಲೆ ಹಲ್ಲೆ!

Public TV
1 Min Read
POLICE 2

ಬೆಂಗಳೂರು: ರಸ್ತೆ ಬದಿ ಬೈಕ್ ನಿಲ್ಲಿಸಿ ಹೆಣ್ಣುಮಕ್ಕಳನ್ನ ಚುಡಾಯಿಸ್ತಿದ್ದನ್ನ ಪ್ರಶ್ನೆ ಮಾಡಲು ಹೋದ, ಸಂಚಾರಿ ಪೇದೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಆರ್‍ಪುರಂ ಭಟ್ಟರಹಳ್ಳಿಯಲ್ಲಿ ನಡೆದಿದೆ.

ಶಿವಾನಂದ ರಾಥೋಡ್ ಹಲ್ಲೆಗೊಳಗಾದ ಸಂಚಾರಿ ಪೇದೆ. ಕೆಆರ್ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರೋ ಇವರು ಸಬ್ ಇನ್ಸ್ ಪೆಕ್ಟರ್ ಜೊತೆ ಡಿಡಿ ಕೇಸ್ ಚೆಕ್ ಮಾಡ್ತಿದ್ರು.

ಈ ವೇಳೆ ರಸ್ತೆ ಬದಿಯಲ್ಲಿ ಬೈಕ್‍ಗಳನ್ನ ಪಾರ್ಕಿಂಗ್ ಮಾಡಿಕೊಂಡು ಕೆಲ ಹುಡುಗರು ಹೆಣ್ಣುಮಕ್ಕಳನ್ನ ಚುಡಾಯಿಸೋ ಕೆಲಸ ಮಾಡುತ್ತಿದ್ದನು, ಮನಗಂಡ ಪೇದೆ ಶಿವಾನಂದ ರಾಥೋಡ್ ಆ ಹುಡುಗರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಳ್ಳಾಡಿ ನೂಕಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅದಿಲ್, ನದೀಮ್ ಹಾಗು ಆತನ ಸಹಚರರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಅಂತಾ ಪೇದೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

https://www.youtube.com/watch?v=47mHt00Bhy4&feature=youtu.be

POLICE 4

POLICE 6

POLICE 1

Share This Article