ಪಾಕ್ ಪಂದ್ಯ ಬಹಿಷ್ಕರಿಸಿದರೆ ನಮಗೆ ನಾವೇ ಗುಂಡಿಟ್ಟುಕೊಂಡಂತೆ: ವಿನೋದ್ ರಾಯ್

Public TV
1 Min Read
Vinod Rai

ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಬಹಿಷ್ಕಾರ ಮಾಡುವುದು ನಮಗೆ ನಾವೇ ಗುಂಡಿಟ್ಟುಕೊಂಡಂತೆ ಎಂದು ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅಭಿಪ್ರಾಯ ಪಟ್ಟಿದ್ದಾರೆ.

ಭಯೋತ್ಪಾದನೆಗೆ ಬೆಂಬಲ ನೀಡವಂತಹ ರಾಷ್ಟ್ರಗಳನ್ನು ಐಸಿಸಿ ಕ್ರಿಕೆಟ್ ಸದಸ್ಯತ್ವವನ್ನು ಕಳೆದುಕೊಳ್ಳುವಂತೆ ಮಾಡುವ ಅನಿವಾರ್ಯತೆ ಇದ್ದು, ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ind vs pak

ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರು ಶುಕ್ರವಾರವೇ ಐಸಿಸಿಗೆ ಪತ್ರ ಬರೆದಿದ್ದು, ಭಯೋತ್ಪಾದನೆಗೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿಗೆ ಇರುವ ಒಪ್ಪಂದಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ನಾನು ಕೂಡ ನೋಡಿದ್ದು, ನಮ್ಮಿಂದ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವ ಸಾಮರ್ಥ್ಯವಿದೆ. ಈ ಒಂದು ಕಾರ್ಯ ಉತ್ತಮವಾಗಿದ್ದು, ಭಾರತ ಸರ್ಕಾರ ಕೂಡ ಇಂತಹದ್ದೇ ಕಾರ್ಯದಲ್ಲಿ ತೊಡಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ತಂಡ ಭಾರತ ದೇಶವನ್ನು ವಿಶ್ವ ಪಟ್ಟದಲ್ಲಿ ಪ್ರತಿನಿಧಿಸುತ್ತದೆ. ನಮ್ಮ ದೇಶದ ಕ್ರಿಕೆಟ್ ಆಟವನ್ನು ತ್ಯಜಿಸಿದ ರಾಷ್ಟ್ರವಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ ಬಿಸಿಸಿಐ ಇಂತಹ ದಾರಿಯನ್ನು ಅನುಸರಿಲು ಭಾರತದ ಒಲಿಂಪಿಕ್ ಸಂಸ್ಥೆ ಮೇಲೆ ವಿಶ್ವ ಒಲಿಂಪಿಕ್ ಸಂಸ್ಥೆ ಕೈಗೊಂಡ ಕ್ರಮ ಕಾರಣ ಎನ್ನಲಾಗಿದ್ದು, ಕೆಲ ದಿನಗಳ ಹಿಂದೆ ಪಾಕ್ ಶೂಟರ್ ಗಳಿಗೆ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತ ವೀಸಾ ನಿರಾಕರಣೆ ಮಾಡಿತ್ತು. ಪರಿಣಾಮ ಭಾರತದ ತೀರ್ಮಾನಕ್ಕೆ ಒಲಿಂಪಿಕ್ ಸಮಿತಿ ಅಸಮಾಧಾನ ವ್ಯಕ್ತಪಡಿಸಿ ದೇಶಕ್ಕೆ ನೀಡಿದ್ದ ಕ್ರೀಡಾಕೂಟದ ಅತಿಥ್ಯದ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ.

India Pakistan

ಒಲಿಪಿಂಕ್ ಸಮಿತಿಯ ನಿರ್ಣಯದಿಂದ ಆದ ಸ್ಥಿತಿ ಬಿಸಿಸಿಐ ಆಗಬಾರದು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಪಾಕಿಸ್ತಾನ ತಂಡವನ್ನು ವಿಶ್ವಕಪ್ ನಿಂದಲೇ ಹೊರಗಿಡಲು ಪ್ರಯತ್ನ ನಡೆಸಲಾಗುತ್ತದೆ. ಆದರೆ ವಿಶ್ವಕಪ್‍ನಿಂದ ಪಾಕ್ ತಂಡವನ್ನು ಹೊರಗಿಡುವುದು ಒಂದು ದಿನದಲ್ಲಿ ಸಾಧ್ಯವಾಗುವುದಿಲ್ಲ ಎಂದು ರಾಯ್ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *