ಅಪ್ರಾಪ್ತೆಯನ್ನು ಪ್ರೀತ್ಸಿ, ಮದ್ವೆಯಾಗಿ ರೈಲ್ವೆ ನಿಲ್ದಾಣದಲ್ಲೇ ಬಿಟ್ಟು ಹೋದ

Public TV
1 Min Read
tmk love 5

ತುಮಕೂರು: ಯುವಕನೋರ್ವ ಅಪ್ರಾಪ್ತೆಯನ್ನು ಪ್ರೀತಿಸಿ, ಮದುವೆಯಾಗಿ ಬಳಿಕ ಕೈ ಕೊಟ್ಟು ಹೋದ ಘಟನೆ ತುಮಕೂರಿನಲ್ಲಿ ನಡೆದಿದೆ.

ಯುವಕನನ್ನೇ ನಂಬಿ ಮನೆಬಿಟ್ಟು ಬಂದ ಬಾಲಕಿ ಈಗ ಪರಿತಪಿಸುತಿದ್ದಾಳೆ. ನಾರಾಣಪ್ಪರ ಮಗ ಮಧು ಎಂಬ ಯುವಕ 17 ವರ್ಷದ ಬಾಲಕಿಯನ್ನು ಪ್ರೀತಿಸಿದ್ದಾನೆ. ಇಲ್ಲಸಲ್ಲದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ.

ಧರ್ಮಸ್ಥಳದಿಂದ ವಾಪಸ್ಸಾಗುತಿದ್ದಾಗ ವಿಚಾರ ತಿಳಿದ ಯುವಕನ ತಂದೆ-ತಾಯಿ, ಬಾಲಕಿ ದಲಿತಳಾಗಿರುವುದರಿಂದ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಯುವಕ ರೈಲ್ವೆ ನಿಲ್ದಾಣದಲ್ಲೇ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

ಯುವಕ ಮಧುವನ್ನು ನಂಬಿ ಹೋದ ಬಾಲಕಿಯನ್ನ ಈಗ ಆಕೆಯ ಪೋಷಕರು ಕೂಡ ಮನೆಗೆ ಸೇರಿಸುತ್ತಿಲ್ಲ. ದಲಿತ ಸಂಘಟನೆಗಳು ಬಾಲಕಿಯ ನೆರವಿಗೆ ನಿಂತು ಆಶ್ರಯ ನೀಡಿದ್ದಾರೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

tmk love 1

tmk love 4

tmk love 2

tmk love

tmk love 3

Share This Article
Leave a Comment

Leave a Reply

Your email address will not be published. Required fields are marked *