ಸ್ವಚ್ಛತೆ ವೇಳೆ ಸಿಕ್ಕ ಬಿಯರ್ ಬಾಟಲಿ ಹಿಡಿದು ಅಮ್ಮನ ಬಳಿ ಓಡಿ ಹೋದ ಬಾಲಕ!

Public TV
1 Min Read
UDP BALAKA copy

– ಉಡುಪಿಯಲ್ಲಿ ಗಾಂಧಿಜಯಂತಿಯಂದು ಬಾಲಕ ಕಕ್ಕಾಬಿಕ್ಕಿ

ಉಡುಪಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆ ಸ್ವಚ್ಛತಾ ಅಭಿಯಾನ ಮಾಡಿದರು. ಈ ಸಂದರ್ಭದಲ್ಲಿ ಸಿಕ್ಕ ಬಿಯರ್ ಬಾಟಲಿ ಎತ್ತಿದ ಬಾಲಕ ಕಕ್ಕಾಬಿಕ್ಕಿಯಾಗಿದ್ದಾನೆ.

ಗಾಂಧಿಜಯಂತಿ ಹಿನ್ನೆಲೆಯಲ್ಲಿ ಇಂದು ಎಲ್ಲೆಡೆ ವಿಭಿನ್ನ ರೀತಿಯಲ್ಲಿ ರಾಷ್ಟ್ರಪಿತನ ಹುಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮಾತಾ ಅಮೃತಾನಂದಮಯಿ ಸಂಸ್ಥೆಯ ನೂರಕ್ಕೂ ಹೆಚ್ಚು ಜನ ಉಡುಪಿ ನಗರದಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಮಹಿಳೆಯರು-ಯುವಕರು, ಮಕ್ಕಳು-ವೃದ್ಧರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

udp balaka 3

ಬೆಳಗ್ಗೆ 7 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನ ಉಡುಪಿಯ ಕಲ್ಸಂಕಕ್ಕೆ ಬಂದಿತ್ತು. ವೈನ್ ಗೇಟ್ ಮುಂದೆ ಸ್ವಚ್ಛತಾ ಅಭಿಯಾನ ಮಾಡುವಾಗ ಪುಟ್ಟ ಬಾಲಕನಿಗೆ ಬಿಯರ್ ಬಾಟಲಿಯೊಂದು ಸಿಕ್ಕಿದೆ. ಬಿಯರ್ ಬಾಟಲಿ ಎತ್ತಿದ ಬಾಲಕ, ಬಿಯರ್ ಬಿಯರ್ ಅಂತ ಅಮ್ಮನ ಬಳಿ ಓಡಿ ಹೋಗಿದ್ದಾನೆ. ಅಮ್ಮ ಬಾಟಲಿ ಇಲ್ಲಿ ಹಾಕ್ಬೇಡ ಅಂತ ಹೇಳಿದ್ದಾರೆ.

ಬಿಯರ್ ಬಾಟಲಿ ಬಿಸಾಕಲೂ ಆಗದೇ, ಅಲ್ಲೇ ಇಡಲೂ ಆಗದೇ ಕೊನೆಗೆ ಬಾಲಕ ಖಾಲಿ ಬಾಟಲಿಯನ್ನು ಕಸದ ಬುಟ್ಟಿಗೆ ತುಂಬಿದ್ದಾನೆ. ಸಾರಾಯಿ ವಿರುದ್ಧ ಸಮರ ಸಾರಿದ್ದ ಗಾಂಧೀಜಿ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಾದರು. ಈ ಮೂಲಕ ಮದ್ಯ ವಿರೋಧಿ ಅಭಿಯಾನಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂಬ ನೇರ ಸಂದೇಶವನ್ನು ನೀಡಿದರು.

udp balaka 4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *