ಚೆನ್ನೈ: ಮಾವಿನ ಗೊರಟೆಯನ್ನು ಶಾಲೆಯಲ್ಲಿ ಎಸೆದಿದ್ದರಿಂದ ಸಿಟ್ಟಿಗೆದ್ದ ಆತನ ಸಹಪಾಠಿಯೇ ಚಾಕುವಿನಿಂದ ಬಾಲಕನನ್ನು ಇರಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಬಳಿಯ ಶಾಲೆಯೊಳಗೆ ನಡೆದಿದೆ.
ಬನ್ನಿಹಳ್ಳಿ ಗ್ರಾಮದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. ಆ ಸಂದರ್ಭದಲ್ಲ್ಲಿ ಆತ ಮಾವಿನ ಗೊರಟೆಯನ್ನು ಎಸೆದಿದ್ದಾನೆ. ಇದರಿಂದಾಗಿ ಆತನಿಗೆ ಹಾಗೂ ಬಾಲಕನ ಸಹಪಾಠಿಯ ನಡುವೆ ಜಗಳ ಪ್ರಾರಂಭವಾಗಿದೆ. ಗೊರಟೆ ಎಸದಿದ್ದ ಬಾಲಕನಿಗೆ ಸಹಪಾಠಿಗಳು ಬೆದರಿಕೆಯನ್ನು ಹಾಕಿದ್ದಾರೆ.
- Advertisement 2
- Advertisement 3
ಆದರೂ ನಿಲ್ಲದ ಜಗಳ ವಿಕೋಪಕ್ಕೆ ಹೋಗಿ ಆತನ ಸಹಪಾಠಿಯೊಬ್ಬ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಆ ಬಾಲಕನಿಗೆ ಇರಿದಿದ್ದಾನೆ. ಇದಾದ ಬಳಿಕ ಚಾಕು ಇರಿದವರೆಲ್ಲರೂ ಭಯ ಭೀತರರಾಗಿ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್
- Advertisement 4
ಘಟನೆಯ ನಂತರ ಇತರ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಬಾಲಕನ ಕುಟುಂಬಕ್ಕೂ ತಿಳಿಸಿದ್ದಾರೆ. ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮದ್ಯ ಮಾರಾಟಗಾರರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ : ಕೆ.ಗೋಪಾಲಯ್ಯ