ತಾಯಿ ಅಕ್ರಮ ಸಂಬಂಧಕ್ಕೆ ಮಗು ಬಲಿ – ಆರೋಪಿ ಬಂಧನ

Public TV
1 Min Read
MURDER INVESTIGATION3

ಬೆಂಗಳೂರು: ತಾಯಿ ಅಕ್ರಮ ಸಂಬಂಧಕ್ಕೆ ಮಗ ಬಲಿಯಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪ್ರಿಯಕರ ಸಂಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆ ಫೋನ್ (mobile) ಸ್ವೀಕಾರ ಮಾಡುತ್ತಿಲ್ಲವೆಂದು ಕೋಪಗೊಂಡು ಆಕೆಯ ಮಗವನ್ನು ಕಿಡ್ನ್ಯಾಪ್ (Kidnap) ಮಾಡಿ ಕೆರೆಯಲ್ಲಿ ಎಸೆದಿದ್ದ. ಇದನ್ನೂ ಓದಿ: 15 ಕೋಟಿ ವ್ಯವಹಾರವೇ ಖ್ಯಾತ ನಟ ಸತೀಶ್ ಕೌಶಿಕ್ ಸಾವಿಗೆ ಕಾರಣ

MURDER INVESTIGATION 1

ಏನಿದು ಘಟನೆ?
ಪ್ರವೀಣ್ ಮತ್ತು ಸಂಪತ್ ಇಬ್ಬರೂ ಸ್ನೇಹಿತರು. ಹೀಗಾಗಿ ಪ್ರವೀಣ್ ತನ್ನ ಮನೆಗೆ ಸಂಪತ್‍ನನ್ನು ಆಗಾಗ್ಗೆ ಕರೆದುಕೊಂಡು ಬರುತ್ತಿದ್ದ. ಈ ವೇಳೆ ಪ್ರವೀಣ್ ಪತ್ನಿಯೊಂದಿಗೆ ಸಂಪತ್ ಸಲುಗೆ ಬೆಳಸಿಕೊಂಡು, ಅಕ್ರಮ ಸಂಬಂಧ ಹೊಂದುತ್ತಾನೆ. ಈ ವಿಚಾರ ತಿಳಿದ ಪ್ರವೀಣ್, ಪತ್ನಿಗೆ ವಿಚ್ಛೇದನ ನೀಡುತ್ತಾನೆ.

 

MURDER INVESTIGATION

ಪ್ರವೀಣ್ ಜೊತೆ ವಿಚ್ಛೇದನ ( Divorce) ಪಡೆದ ಬಳಿಕ ಮಹಿಳೆ ಸಂಪತ್ ಜೊತೆ ಬೇರೆ ಮನೆ ಮಾಡಿಕೊಂಡು ಕೋಲಾರದ ಕೆಜಿಎಫ್ ನಲ್ಲಿ ವಾಸವಾಗಿರುತ್ತಾರೆ. ದಿನ ಕಳೆದಂತೆ ಪ್ರಿಯತಮೆ ನಡತೆ ಸರಿಯಿಲ್ಲ ಎಂದು ಸಂಪತ್ ಹಿಂಸೆ ಕೊಡುವುದಕ್ಕೆ ಶುರು ಮಾಡುತ್ತಾನೆ. ಸಂಪತ್ ಕಿರುಕುಳ ತಾಳಲಾರದೆ ಆತನ ನಂಬರ್ ಬ್ಲಾಕ್ ಮಾಡಿಕೊಂಡು ಪ್ರಿಯತಮೆ ಬೇರೆ ಕಡೆ ಹೋಗಿರುತ್ತಾಳೆ. ಹೇಗಾದ್ರು ಮಾಡಿ ಆಕೆಗೆ ಬುದ್ದಿ ಕಲಿಸಬೇಕೆಂದು ಸಂಪತ್ ತನ್ನ ಪ್ರಿಯತಮೆಯ ಗಂಡು ಮಗನನ್ನ ಕಿಡ್ನ್ಯಾಪ್ ಮಾಡಿ ಕೆರೆಯಲ್ಲಿ ಎಸೆದಿದ್ದ. ಬಳಿಕ ಸಂಪತ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದ.

ಮಗ ನಾಪತ್ತೆಯಾಗಿರುವುದು ತಿಳಿದ ಮಹಿಳೆ ಪೊಲೀಸರಿಗೆ ದೂರು ನೀಡುತ್ತಾಳೆ. ದೂರು ನೀಡಿದ 9 ದಿನಗಳ ಬಳಿಕ ಕೆರೆಯಲ್ಲಿ ಮಗುವಿನ ಶವ ಪತ್ತೆ ಆಗುತ್ತೆ. ಬಳಿಕ ಪೊಲೀಸರು ಸಂಪತ್ ನನ್ನ ವಿಚಾರಣೆ ಮಾಡಿದಾಗ, ಪ್ರಿಯತಮೆ ಮೇಲಿದ್ದ ಕೋಪಕ್ಕೆ ಹುಡುಗನನ್ನು ಕರೆದುಕೊಂಡು ಹೋಗಿ ಕೆರೆಗೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಬಾಗಲೂರು (Bagalur) ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು

Share This Article
Leave a Comment

Leave a Reply

Your email address will not be published. Required fields are marked *