ವಿಜಯಪುರ: ಸಾತ್ವಿಕ್ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ ಪ್ರಕರಣ ಸಂಬಂಧ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದ್ದ ಯಂತ್ರೋಪಕರಣಗಳ 3.70 ಲಕ್ಷ ರೂ ಬಿಲ್ ಬಾಕಿ ಉಳಿದಿದೆ.
ಹೌದು, ಕಳೆದ ವರ್ಷ ಏಪ್ರಿಲ್ 03 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿತ್ತು. ಬಾಲಕ ಕೊಳವೆ ಬಾವಿಗೆ ಬಿದ್ದ 4 ಗಂಟೆಯಲ್ಲಿ ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.ಇದನ್ನೂ ಓದಿ: ಚಿಕ್ಕಮಗಳೂರು| ತಹಶೀಲ್ದಾರ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ!
ಕಾರ್ಯಾಚರಣೆಯಲ್ಲಿ 2 ಹಿಟಾಚಿ, 3 ಜೆಸಿಬಿ, 4 ಟ್ರಾಕ್ಟರ್ ಬ್ರೇಕರ್ಸ್, 1 ಹ್ಯಾಂಡ್ ಡ್ರಿಲ್ಲಿಂಗ್, 1 ಸ್ಟೋನ್ ಕಟ್ಟಿಂಗ್ ಮಷಿನ್, 1 ವಾಟರ್ ಟ್ಯಾಂಕರ್ ಬಳಕೆ ಮಾಡಲಾಗಿತ್ತು. ಪರಿಸ್ಥಿತಿಯನ್ನು ಅರಿತ ಮಾಲೀಕರು ಈ ಎಲ್ಲ ಯಂತ್ರೋಪಕರಣಗಳನ್ನು ಯಾವುದೇ ಕಂಡಿಷನ್ ಇಲ್ಲದೆ ತಂದು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಅಲ್ಲದೆ ಸಾತ್ವಿಕ್ ರಕ್ಷಣೆಗೆ ಹಗಲು ರಾತ್ರಿಯೆನ್ನದೇ ಯಂತ್ರೋಪಕರಣಗಳ ಚಾಲಕರು, ಮಾಲೀಕರು ಕಾರ್ಯಾಚರಣೆ ನಡೆಸಿದ್ದರು. ಇದರ ಫಲವಾಗಿಯೇ ಯಶಸ್ವಿಯಾಗಿ ಬಾಲಕನನ್ನು ಕೊಳವೆ ಬಾವಿಯಿಂದ ಹೊರತರಲಾಯಿತು.
ಆದರೆ ಕಾರ್ಯಾಚರಣೆ ವೇಳೆ ಹರಸಾಹಸಪಟ್ಟು ಮಗುವನ್ನು ಬದುಕುಳಿಸಿದ್ದ ಯಂತ್ರೋಪಕರಣಗಳ ಮಾಲೀಕರು ಈಗ ಅಲೆಡಾಡುವಂತಾಗಿದೆ. ಕಾರ್ಯಾಚರಣೆಗೆ ಬಳಸಲಾಗಿದ್ದ ಯಂತ್ರಗಳ 3.70 ಲಕ್ಷ ರೂ. ಬಿಲ್ನ್ನು ಜಿಲ್ಲಾಡಳಿತ ಬಾಕಿ ಉಳಿಸಿಕೊಂಡಿದೆ. ಕಳೆದ 11 ತಿಂಗಳಿಂದ ಬಿಲ್ ಬಾಕಿಯಿಟ್ಟುಕೊಂಡಿದ್ದು, ಪ್ರತಿನಿತ್ಯ ಬಿಲ್ ಕೊಡಿ ಎಂದು ಯಂತ್ರೋಪಕರಣಗಳ ಮಾಲೀಕರು ಅಲೆದಾಡುವಂತಾಗಿದೆ.
ಇದು ಕೇವಲ ಯಂತ್ರೋಪಕರಣಗಳಿಗೆ ಹಾಕಿದ ಡೀಸೆಲ್ ಬಿಲ್ ಆಗಿದ್ದು, ಅಸಲಿಗೆ 10 ಲಕ್ಷ ರೂ.ಗೂ ಅಧಿಕ ಬಿಲ್ ಬರಬೇಕು. ಕೊಳವೆ ಬಾವಿ ಕಾರ್ಯಾಚರಣೆ ವೇಳೆ ಹಿಂದೆ ಮುಂದೆ ಯೋಚಿಸದೆ ಯಂತ್ರೋಪಕರಣಗಳನ್ನ ಒದಗಿಸಿದ್ದು, ಜಿಲ್ಲಾಡಳಿತ ಕೇವಲ ಡೀಸೆಲ್ ಬಿಲ್ ಕೊಡುವುದಕ್ಕೆ ಈ ರೀತಿ ಸತಾಯಿಸುತ್ತಿದ್ದಾರೆ ಎಂದು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಹಿಂದಿ ಬೇಡ ಅನ್ನೋರು ತಮಿಳು ಸಿನಿಮಾವನ್ನು ಯಾಕೆ ಹಿಂದಿಗೆ ಡಬ್ಬಿಂಗ್ ಮಾಡ್ತೀರಿ: ಪವನ್ ಕಲ್ಯಾಣ್ ಪ್ರಶ್ನೆ