ಬೆಂಗಳೂರು/ಮೈಸೂರು: ಮದುವೆ ದಿನವೇ ವರ ಹಾಗೂ ಆತನ ಕುಟುಂಬಸ್ಥರು ಮಂಟಪದಿಂದ ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೈಸೂರಿನ (Mysuru) ಪ್ರೇಮ್ ಚಂದ್ ಪರಾರಿಯಾಗಿರುವ ವರ. ಮೈಸೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರೇಮ್ ಚಂದ್, ಸಂತ್ರಸ್ತೆಯು ಒಂದೇ ತರಗತಿಯಲ್ಲಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹವಾಗಿತ್ತು. ಸಂತ್ರಸ್ತೆ ಬಿಇ ಬಳಿಕ ಎಂಎಸ್ ಮುಗಿಸಿದ ಫ್ರಾನ್ಸ್ನಲ್ಲಿ ಕೆಲಸಕ್ಕೆ ಸೇರಿದ್ದಳು. ಆರೋಪಿ ಪ್ರೇಮ್ ಕೂಡ ಪ್ಯಾರೀಸ್ನಲ್ಲಿ ಕೆಲಸಕ್ಕೆ ಸೇರಿದ್ದ. ಇಬ್ಬರ ಸ್ನೇಹ ಬಳಿಕ ಪ್ರೀತಿ ತಿರುಗಿ ಪ್ಯಾರೀಸ್ನಲ್ಲಿ ಸುತ್ತಾಡುತ್ತಿದ್ದರು. ಇದನ್ನೂ ಓದಿ: ರನ್ಯಾ ರಾವ್ ಬಂಧನ – ನಮಗೆ ಯಾವುದೇ ಮಾಹಿತಿ ಕೊಟ್ಟಿಲ್ಲ: ಪರಮೇಶ್ವರ್
Advertisement
Advertisement
ಇಬ್ಬರು ಮನೆಯವರನ್ನು ಒಪ್ಪಿಸಿ ಕಳೆದ ಜುಲೈನಲ್ಲಿ ಎಂಗೆಜ್ಮೆಂಟ್ ಮಾಡಿಕೊಂಡಿದ್ದರು. ಕುಟುಂಬಸ್ಥರು ಮಾ. 3ರಂದು ಪ್ರೇಮ್ ಹಾಗೂ ಸಂತ್ರಸ್ಥೆಯ ಮದುವೆ ದಿನಾಂಕ ನಿಶ್ಚಯಿಸಿದ್ದರು. ಸಂತ್ರಸ್ಥೆಯ ತಂದೆ ಗಾಂಧಿನಗರದ ನಂದಿ ಕ್ಲಬ್ ಮಂಟಪ ಬುಕ್ ಮಾಡಿದ್ದರು.
Advertisement
ಫೆ. 28ರಿಂದಲೇ ಮದುವೆ ಕಾರ್ಯಕ್ರಮ ಆರಂಭವಾಗಿತ್ತು. ಮಾ. 1 ರಂದು ಮೆಹಂದಿ ಹಾಗೂ ಹಳದಿ ಶಾಸ್ತ್ರ ಕೂಡ ಮುಗಿದಿತ್ತು. ಈ ವೇಳೆ ಪ್ರೇಮ್ ತಂದೆ ಶಿವಕುಮಾರ್ ಪವಾನಿ, ತಾಯಿ ರಾಧ, ಸಂಬಂಧಿ ಮಂಜು, ಭರತ್ 50 ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರು ನೀಡುವಂತೆ ಸಂತ್ರಸ್ತೆ ತಂದೆ ಬಳಿ ಬೇಡಿಕೆಯಿಟ್ಟಿದ್ದರು. ಮದುವೆಗೆ ಸುಮಾರು 25 ಲಕ್ಷ ರೂ. ಖರ್ಚಾಗಿದೆ. ಹಾಗಾಗಿ ಅಷ್ಟೆಲ್ಲಾ ಕೊಡಲು ಸಾಧ್ಯವಿಲ್ಲ ಎಂದು ಸಂತ್ರಸ್ತೆ ತಂದೆ ಹೇಳಿದ್ದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಮಾಡೇ ಮಾಡ್ತೀವಿ, ಎಷ್ಟು ಏರಿಕೆ ಅಂತ ಸಿಎಂ ಜೊತೆ ಚರ್ಚೆ – ವೆಂಕಟೇಶ್
Advertisement
ಈ ವಿಷಯ ತಿಳಿಯುತ್ತಿದ್ದಂತೆ ಪ್ರೇಮ್ ಹಾಗೂ ಆತನ ಕುಟುಂಬಸ್ಥರು ಮದುವೆ ಮಂಟಪದಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಮದುವೆ ಶಾಸ್ತ್ರಕ್ಕೆ ವರನ್ನು ಕರೆಯಲು ಹೋದಾಗ ವಿಷಯ ಬೆಳಕಿಗೆ ಬಂದಿದೆ. ಈಗ ಸಂತ್ರಸ್ತೆ ತಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿತ್ತಾ ತರುಣ್ ಸುಧೀರ್ ಚಿತ್ರತಂಡ?- ಅರಣ್ಯಾಧಿಕಾರಿ ಹೇಳೋದೇನು?
ದೂರಿನಲ್ಲಿ ವರ ಪ್ರೇಮ್ ಸಂತ್ರಸ್ತೆಯನ್ನು ಮದುವೆಗೂ ಮುನ್ನ ಬಲವಂತವಾಗಿ ಲೈಗಿಂಕವಾಗಿ ಬಳಸಿಕೊಂಡಿದ್ದಾನೆಂದು ಉಲ್ಲೇಖಿಸಲಾಗಿದೆ.