Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

ಆಸ್ಕರ್ ನಗೆ ಬೀರಿದ್ದ ಬೊಮ್ಮನ್-ಬೆಳ್ಳಿ ಬದುಕು ಮೂರಾಬಟ್ಟೆ

Public TV
Last updated: June 27, 2023 11:14 am
Public TV
Share
4 Min Read
Bomman Belli 2
SHARE

ಹೇಳೋದಕ್ಕೆ ಇವರು ಆಸ್ಕರ್ (Oscar) ಪ್ರಶಸ್ತಿ ಪುರಸ್ಕೃತರು. ಆದರೆ ಆಶ್ರಯಕ್ಕೆ ಸೂರಿಲ್ಲ. ಕುಡಿಯೋದಕ್ಕೆ ನೀರಿಲ್ಲ. ಮೋದಿ ಭೇಟಿಯಾದ್ರೂ ಭಾಗ್ಯದ ಬಾಗಿಲು ತೆರೆಯಲಿಲ್ಲ. ಜಗತ್ತೇ ಗುರುತಿಸಿದ ಸ್ಟಾರ್ ಆಗಿದ್ರೂ ಬದುಕು ಬದಲಾಗ್ಲಿಲ್ಲ. ಹೀಗೆ ಭರವಸೆಯ ಬೆಳಕಿನ ಕಡೆ ಇಣುಕುತ್ತಿರುವ ಆಸ್ಕರ್ ಪ್ರಶಸ್ತಿ ಪುರಸ್ಕೃತ ಡಾಕ್ಯುಮೆಂಟ್ರಿ ನಾಯಕ ದಂಪತಿಯೇ ಬೊಮ್ಮನ್ (Bomman) ಹಾಗೂ ಬೆಳ್ಳಿ. `ದಿ ಎಲಿಫೆಂಟ್ ವಿಸ್ಪರರ್ಸ್‌’ ಆಸ್ಕರ್ ಡಾಕ್ಯುಮೆಂಟ್ರಿಯ ಕಥಾ ನಾಯಕ ನಾಯಕಿ. ಹೇಗಿದೆ ಇವರ ಬದುಕೀಗ? ಆಸ್ಕರ್ ಬಂದ್ಮೇಲೆ ಬದಲಾಯಿತೆ? ಆಸ್ಕರ್ ಪ್ರಶಸ್ತಿ ಹಿಡಿದ ಕೈಗಳಿಗೆ ಕೊನೆ ಪಕ್ಷ ಮೂರ್ ಹೊತ್ತು ಸರಿಯಾಗಿ ಊಟ ಸಿಗುತ್ತಿದೆಯೇ? ಅದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

Bomman Belli 6

ಕಮರ್ಷಿಯಲ್ ಸಿನಿಮಾಗಳನ್ನೇ ನೋಡದಿರುವ ಈ ಕಾಲದಲ್ಲಿ ಇಡೀ ವಿಶ್ವ ಒಂದು ಸಾಕ್ಷ್ಯಚಿತ್ರದತ್ತ ತಿರುಗಿ ನೋಡುತ್ತದೆ ಎಂದರೆ ಅದಕ್ಕೆ ಕಾರಣ ಆಸ್ಕರ್ ಪ್ರಶಸ್ತಿ. 2022ನೇ ಸಾಲಿನ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ ಭಾರತದ ಸಾಕ್ಷ್ಯ ಚಿತ್ರವೇ `ದಿ ಎಲಿಫೆಂಟ್ ವಿಸ್ಪರರ್ಸ್‌’ (The Elephant the elephant Whisperers). ಆನೆ ಹಾಗೂ ಆನೆಯ ಪೋಷಕರ ಸಾಕ್ಷ್ಯಚಿತ್ರವಿದು. ಆಡಂಬರದಿಂದ ತೋರಿಸೋಕೆ ಇದು ಸಿನಿಮಾವಲ್ಲ ಡಾಕ್ಯುಮೆಂಟ್ರಿ. ನಿರಾಶ್ರಿತ ಆನೆಗಳನ್ನ ತಂದು ಪಳಗಿಸಿ ಮಕ್ಕಳಂತೆ ಸಾಕಿ ಸಲಹುವ ಅಸಲಿ ಹೀರೋ ಬೊಮ್ಮನ್ ದಂಪತಿ ಹಾಗೂ ಆನೆಯ ನಂಟಿನ ಕಥೆಯೇ ದಿ ಎಲಿಫೆಂಟ್ ವಿಸ್ಪರರ್ಸ್.  ಮಧುಮಲೈ ಅರಣ್ಯ ವ್ಯಾಪ್ತಿಯ ತೆಪ್ಪಕಾಡು ಅರಣ್ಯ ಪ್ರದೇಶದಲ್ಲಿ ಆನೆ ಶಿಬಿರವಿದೆ. ಇದೇ ಶಿಬಿರದಲ್ಲಿ ಆನೆ ಮಾವುತರು ವಾಸವಾಗಿದ್ದಾರೆ. ಆನೆಗಳನ್ನ ಪೋಷಿಸಿ ಪಾಲಿಸಿ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ತಂಡದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ದಂಪತಿಗಳು ಬೊಮ್ಮನ್ ಹಾಗೂ ಬೆಳ್ಳಿ.

Bomman Belli 1

ಪಟ್ಟಣದ ಸಂಪರ್ಕವೇ ಇಲ್ಲದೆ ಪ್ರಕೃತಿ ಜೊತೆ ಬಾಂಧವ್ಯ ಬೆಳೆಸಿಕೊಂಡಿರುವ ಬೊಮ್ಮನ್ ಬೆಳ್ಳಿಗೆ (Belli) ಅವರು ಅವರಾಗಿಯೇ ನಟಿಸಿದ ಡಾಕ್ಯುಮೆಂಟ್ರಿಗೆ ಆಸ್ಕರ್ ಬಂದ್ಮೇಲೆ ಜಗತ್ಪಸಿದ್ಧರಾದ್ರು. ಎಲ್ಲರೂ ಹುಡುಕಿಕೊಂಡು ಬಂದ್ರು. ಆಸ್ಕರ್ ಟ್ರೋಫಿ ಕೈಗಿಟ್ಟು ಫೋಟೋ ತೆಗೆಸಿಕೊಂಡ್ರು. ಅರಣ್ಯ ಅಧಿಕಾರಿಗಳು, ಗಣ್ಯರು ಸೇರಿ ಡಾಕ್ಯುಮೆಂಟ್ರಿ ನಿರ್ಮಾಪಕ, ನಿರ್ದೇಶಕಿಯೂ ಸೇರಿದಂತೆ ಬೊಮ್ಮನ್ ಬೆಳ್ಳಿಯ ಬೆನ್ನು ತಟ್ಟಿದ್ರು. ಆದರೆ ಇದರಿಂದ ಬೊಮ್ಮನ್ ಬೆಳ್ಳಿ ದಂಪತಿಯ ಹೊಟ್ಟೆ ತುಂಬಬೇಕಲ್ಲ. ಹೇಳೋದಕ್ಕೆ `ದಿ ಎಲಿಫೆಂಟ್ ವಿಸ್ಪರರ್ಸ್’ ತಂಡಕ್ಕೆ ಆಸ್ಕರ್ ಬಂದಿದೆ. ಬೊಮ್ಮನ್ ಬೆಳ್ಳಿ ಬದುಕು ಮೂರಾಬಟ್ಟೆಯಾಗಿದೆ. ಪ್ರಶಸ್ತಿ ಬಂದಿರೋದೇ ಇವರಿಗೆ ಶಾಪವಾಗಿ ಪರಿಣಮಿಸಿದೆ. ಅವರು ಬಂದ್ರಂತೆ, ಇವರು ಬಂದ್ರಂತೆ, ಅಷ್ಟು ಕೊಟ್ರಂತೆ, ಇಷ್ಟು ಕೊಟ್ರಂತೆ ಅನ್ನೋದು ಬರೀ ಸುದ್ದಿಯಾಗಿದೆ ಹೊರತು ಸಫಲವಾಗಲಿಲ್ಲ. ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಬಂದಾಗ ಹತ್ತಿರದಲ್ಲೇ ನಿಂತು ಮಾತನಾಡುವ ಅವಕಾಶ ಸಿಕ್ಕರೂ ಬೇಡಿಕೆ ಇಡಲು ಅಧಿಕಾರಿಗಳು ಇವರಿಗೆ ಅವಕಾಶ ಕೊಡಲಿಲ್ಲ.

Bomman Belli 3

ದಿ ಎಲಿಫೆಂಟ್ ವಿಸ್ಪರರ್ಸ್ ಗೆ  ಆಸ್ಕರ್ ಗೌರವ ಸಿಕ್ಕ ಬಳಿಕ ಓಟಿಟಿಯಲ್ಲಿ ಒಳ್ಳೆಯ ಬೆಲೆಗೆ ಸೇಲಾಗಿದೆ. ಕೋಟಿಗಟ್ಟಲೆ ಬಹುಮಾನಗಳನ್ನ ತಂಡ ಪಡೆದುಕೊಂಡಿದೆ. ಆದರೆ ಅದರಲ್ಲಿ ನಯಾಪೈಸೆಯೂ ಬೊಮ್ಮನ್ ಬೆಳ್ಳಿಗೆ ಸಿಗಲಿಲ್ಲ ಅನ್ನೋದೇ ದುರಂತ. ತಮಿಳುನಾಡು ಸಿಎಂ ಸ್ಟಾಲಿನ್ 1 ಲಕ್ಷ ರೂಪಾಯಿ ಹಣ ಕೊಟ್ಟಿದ್ದು ಬಿಟ್ರೆ ಈ ದಂಪತಿಯ ಬದುಕಿನಲ್ಲಿ ವಿಧಿ ಬರೆದ ಹಣೆಬರಹ ಬದಲಾಗಲಿಲ್ಲ.  ಕಾಡಿನಲ್ಲೊಂದು ಪುಟ್ಟ ಗುಡಿಸಲು. ಹೇಳಿ ಕೇಳಿ ಹೆಚ್ಚು ಮಳೆಕಾಡಿನ ಭಾಗ. ಆಸ್ತಿ ಪಾಸ್ತಿ ಸಂಪಾದನೆ ಏನೂ ಇಲ್ಲ. ಸರ್ಕಾರ ನೇಮಿಸಿಕೊಂಡ ಕೂಲಿಗಳಿವರು. ಸರ್ಕಾರದ ಅನುಮತಿ ಪಡೆದು ಡಾಕ್ಯುಮೆಂಟ್ರಿ ಚಿತ್ರೀಕರಣಕ್ಕೆ ಅವಕಾಶ ಪಡೆದುಕೊಂಡು ಬಂದಿತ್ತು ತಂಡ. ಅವರು ಹೇಳಿದಂತೆ ನಡೆದುಕೊಂಡು ಬಂದ್ರು ಬೊಮ್ಮನ್ ಬೆಳ್ಳಿ ದಂಪತಿ. ಆಸ್ಕರ್ ಗೌರವ ಏನೆಂಬುದರ ಅರಿವೂ ಇಲ್ಲದ ಮುಗ್ಧಜೀವಗಳಿಗೆ ತಮ್ಮ ಸುತ್ತಮುತ್ತ ಏನಾಗ್ತಿದೆ ಅನ್ನೋ ಅರಿವೂ ಇಲ್ಲ. ಆದರೆ ಸಹ ಮಾವುತರು ಮಾತ್ರ ಅಸೂಯೆ ಪಟ್ಕೊಂಡು ಇನ್ನಷ್ಟು ಸಂಕಷ್ಟಕ್ಕೆ ದೂಡಿಕೊಳ್ಳುವಂತಾಗಿದೆ ಬೊಮ್ಮನ್ ಕುಟುಂಬದ ಸ್ಥಿತಿ.

Bomman Belli 4

ನೆತ್ತಿಮೇಲೆ ಸರಿಯಾದ ಸೂರಿಲ್ಲ. ಕುಡಿಯಲು ಒಳ್ಳೆಯ ನೀರೂ ಇಲ್ಲ. ಹೀಗೇ 56 ವರ್ಷ ದೂಡಿದ್ದಾರೆ ಬೊಮ್ಮನ್. ಬಂಡೀಪುರದಲ್ಲಿ ಹುಟ್ಟಿದ್ರಿಂದ ಇವರಿಗೆ ಕನ್ನಡ ಮಾತನಾಡಲು ಬರುತ್ತೆ. ಕಾಡಿನಲ್ಲೇ ಜನನ. ಕಾಡಿನಲ್ಲೇ ಬದುಕು. ಆನೆಗಳೇ ಇವರ ಸ್ನೇಹಿತರು.  ಇಂದು ಬೊಮ್ಮನ್ ಬೆಳ್ಳಿ ಹೆಸರಿಗೆ ಆಸ್ಕರ್ ಸಿಕ್ಕಿರೋ ದೊಡ್ಡ ಗೌರವ ಇದೆ. ಆದರೆ ಬಡತನದ ಬೇಗೆಯಲ್ಲೇ ಬೇಯುತ್ತಿರುವ ಕುಟುಂಬಕ್ಕೆ ಹಸಿವಿನ ಮುಂದೆ ಬೇರೆ ಯಾವುದೂ ಲೆಕ್ಕಕ್ಕೆ ಬರೋದಿಲ್ಲ. ಬದುಕು ಬವಣೆಯ ಹಾದಿಯಲ್ಲಿ ಅದೆಷ್ಟೋ ಕಷ್ಟ ಕಣ್ಣಾರೆ ಕಂಡ ಇವರು ಹಿಂದೆ ಕಾಡುಗಳ್ಳ ವೀರಪ್ಪನ್ ಕಥೆಯ ನೆನಪಿಗೆ ಬರ‍್ತಾರೆ. ಡಾ.ರಾಜ್‌ಕುಮಾರ್‌ ಅವರನ್ನ ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದ ವೇಳೆಯೂ ಅದೇ ಕಾಡಿನಲ್ಲಿದ್ದ ಬೊಮ್ಮನ್ ಆ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದಾರೆ. ಸರ್ಕಾರದಿಂದ ಆ ವೇಳೆ ಅನೇಕ ಕಟ್ಟೆಚ್ಚರಗಳು ಶಿಬಿರದ ಮಾವುತರಿಗೆ ಹೇರಲಾಗಿತ್ತು. ಆ ಘಟನೆಯನ್ನೂ ನೆನಪು ಮಾಡಿಕೊಳ್ತಾರೆ ಬೊಮ್ಮನ್.

 

ಬೊಮ್ಮನ್ ಬೆಳ್ಳಿ ಹುಟ್ಟಿದಾಗಿಂದ ಕಾಡು, ಕಾಡುಪ್ರಾಣಿಗಳು, ಆನೆಗಳನ್ನ ಬಿಟ್ರೆ ಬೇರೇನನ್ನೂ ಕಂಡಿಲ್ಲ ನೋಡಿಲ್ಲ. ಅವರಿಗೆ ಇನ್ಯಾವ ದೊಡ್ಡ ಆಸೆಯೂ ಇಲ್ಲ. ಸಣ್ಣದೊಂದು ಸೌಕರ್ಯದ ಬೇಡಿಕೆ ಇಡ್ತಾರೆ. ಬೆಚ್ಚನೆ ಮಲಗಲೊಂದು ಸೂರು, ಆರೋಗ್ಯದಿಂದಿರಲು ಶುದ್ಧ ಕುಡಿಯುವ ನೀರು. ಆಸ್ಕರ್ ಪುರಸ್ಕೃತರಿಗೆ ಇಷ್ಟೂ ಸೌಲಭ್ಯಗಳಿಲ್ಲವೇ? ಅಸಲಿಗೆ ಬೊಮ್ಮನ್ ಬೆಳ್ಳಿ ಬದುಕೇ ಮಾವುತರ ಕೈಗೆ ಸಿಕ್ಕಿರುವ ಆನೆಯಂತಾಗಿದೆ. ಇದೇ ನೋಡಿ ವಾಸ್ತವ.

 

ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ
ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್
ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್
ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ
ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ
ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌
ಹಾಟ್‌ ಲುಕ್‌ನಲ್ಲಿ  ನಟಿ ನಭಾ ನಟೇಶ್
ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್
ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್
ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್
ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ
ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ
ಹಾಟ್ ಅವತಾರದಲ್ಲಿ ಗೀತಾ ಸೀರಿಯಲ್ ನಟಿ Sharmitha Gowda
ಹಾಟ್ ಅವತಾರದಲ್ಲಿ ಗೀತಾ ಸೀರಿಯಲ್ ನಟಿ Sharmitha Gowda
ಹಳದಿ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ..!
ಹಳದಿ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ..!
ಹನಿಮೂನ್‌ ಮುಗಿಸಿ ಬಂದ್ರು ಕಿಯಾರಾ-ಸಿದ್..!‌
ಹನಿಮೂನ್‌ ಮುಗಿಸಿ ಬಂದ್ರು ಕಿಯಾರಾ-ಸಿದ್..!‌

TAGGED:BelliBommanOscarThe Elephant Whispersಆಸ್ಕರ್ದಿ ಎಲಿಫೆಂಟ್ ವಿಸ್ಪರ್ಸ್ಬೆಳ್ಳಿಬೊಮ್ಮನ್
Share This Article
Facebook Whatsapp Whatsapp Telegram

Cinema Updates

madenur manu
ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್
8 hours ago
Akhil Akkineni Zainab Ravdjee
ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್
1 day ago
shivani swamy
‘ಸರಿಗಮಪ ಸೀಸನ್‌ 21’ರ ವಿನ್ನರ್‌ ಆದ ಬೀದರ್‌ ಪ್ರತಿಭೆ ಶಿವಾನಿ ಸ್ವಾಮಿ
1 day ago
Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
2 days ago

You Might Also Like

tractor fire
Chamarajanagar

ಬೆಂಕಿ ಬಿದ್ದರೂ ತಿಳಿಯದೇ ಟ್ರ್ಯಾಕ್ಟರ್‌ ಚಾಲನೆ- ನಾಲ್ವರು ಅಪಾಯದಿಂದ ಪಾರು

Public TV
By Public TV
46 minutes ago
Extreme Poverty India
Latest

ಭಾರತಕ್ಕೆ ಗುಡ್‌ನ್ಯೂಸ್: ದೇಶದ ಕಡುಬಡತನ ಪ್ರಮಾಣ 27.1% ರಿಂದ 5.3% ಕ್ಕೆ ಇಳಿಕೆ

Public TV
By Public TV
1 hour ago
BSY Grandson Wedding CM Siddaramaiah
Bengaluru City

ಬಿಎಸ್‌ವೈ ಮೊಮ್ಮಗನ ಆರತಕ್ಷತೆಯಲ್ಲಿ ಸಿಎಂ, ಡಿಸಿಎಂ ಭಾಗಿ

Public TV
By Public TV
2 hours ago
bengaluru stambede rcb
Bengaluru City

ಚಿನ್ನಸ್ವಾಮಿ ಕಾಲ್ತುಳಿತ – ಪರಿಹಾರ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರ

Public TV
By Public TV
3 hours ago
MC Sudhakar
Chikkaballapur

ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

Public TV
By Public TV
3 hours ago
man mums hugs
Latest

5 ನಿಮಿಷ ತಬ್ಬಿಕೊಳ್ಳಲು 600 ರೂ. ಕೊಡ್ತಾರಂತೆ ಚೀನಾ ಮಹಿಳೆಯರು!

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಅವತಾರದಲ್ಲಿ ಗೀತಾ ಸೀರಿಯಲ್ ನಟಿ Sharmitha Gowda ಹಳದಿ ಸೀರೆಯಲ್ಲಿ ಹಾಟ್ ಆಗಿ ಮಿಂಚಿದ ರಾಗಿಣಿ..! ಹನಿಮೂನ್‌ ಮುಗಿಸಿ ಬಂದ್ರು ಕಿಯಾರಾ-ಸಿದ್..!‌
Welcome Back!

Sign in to your account

Username or Email Address
Password

Lost your password?