ಮೀಟೂ ಪ್ರಕರಣದ ನಂತರ ದೇಶದಾದ್ಯಂತ ಸುದ್ದಿ ಮಾಡಿದ ಬಾಲಿವುಡ್ ತಾರೆ ತನುಶ್ರೀ ದತ್ತಾ ಅವರ ಕಾರು ಅಪಘಾತವಾಗಿದೆ. ಈ ಘಟನೆಯಿಂದಾಗಿ ಅವರ ಕಾಲಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?
ತನುಶ್ರೀ ಅವರು ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಹೊರಟಿದ್ದರು ದಾರಿ ಮಧ್ಯೆ ಕಾರಿನ ಬ್ರೇಕ್ ಫೇಲ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ. ಹೀಗಾಗಿ ಅವರ ಕಾಲಿಗೆ ಅನೇಕ ಗಾಯಗಳು ಆಗಿವೆ. ಆದರೂ, ದತ್ತಾ ದೇವರ ದರ್ಶನವನ್ನು ತಪ್ಪಿಸಿಲ್ಲ. ಆ ನೋವಿನಲ್ಲೇ ದೇವರ ದರ್ಶನ ಪಡೆದಿದ್ದಾರಂತೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ಮಹಾಕಲ್ ದೇವಸ್ಥಾನಕ್ಕೆ ಹೋಗುವುದು ನನ್ನ ಸಂಕಲ್ಪವಾಗಿತ್ತು. ಹೀಗಾಗಿ ಕಾರು ಅಪಘಾತವಾದರೂ, ನಾನು ದೇವರ ದರ್ಶನವನ್ನು ತಪ್ಪಿಸಲಿಲ್ಲ. ನೋವಿನಿಂದ ಕೂಡಿದ ಕಾಲುಗಳಿಂದಲೇ ದೇವಸ್ಥಾನಕ್ಕೆ ಹೋದೆ. ದೇವರ ದರ್ಶನ ಮಾಡಿದೆ. ಆ ದೇವರ ಅನುಗ್ರಹದಿಂದಾಗಿ ನನಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅವರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
ದತ್ತಾ ಅವರು ಈ ಸುದ್ದಿಯನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಹಾರೈಸಿದ್ದಾರೆ. ಶೀಘ್ರದಲ್ಲೇ ನಿಮ್ಮ ಕಾಲಿನ ನೋವು ಕಳೆದು ಹೋಗಲಿ ಎಂದು ಪ್ರಾರ್ಥಿಸಿದ್ದಾರೆ. ಅವರ ದೈವಭಕ್ತಿಯ ಕುರಿತಾಗಿಯೂ ಹಲವರು ಕೊಂಡಾಡಿದ್ದಾರೆ.