ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುವೆಂಪು ನಗರದಲ್ಲಿರುವ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.
ಕಳೆದ 2013 ರ ಚುನಾವಣೆಯ ನಂತರ ಹೆಬ್ಬಾಳ್ಕರ್ ಮನೆ ಮುಂಭಾಗದಲ್ಲಿ ನಿರಂತರವಾಗಿ ವಾಮಾಚಾರ ಮಾಡಲಾಗುತ್ತಿದೆ ಎನ್ನಲಾಗಿದೆ. ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದುಗುಂಬಳಕಾಯಿ, ಕುಂಕುಮ, ಅರಶಿಣ ಪತ್ತೆಯಾಗಿದೆ.
ಅಮವಾಸೆ ಮತ್ತು ಹುಣ್ಣಿಮೆ ದಿನಗಳಂದು ವಾಮಾಚಾರ ಹೆಚ್ಚಾಗಿರುತ್ತದೆ. ಮಾಟಮಂತ್ರದಿಂದ ಮಾನಸಿಕ ಹಿಂಸೆ ಆಗುತ್ತಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಮಾಟಮಂತ್ರದಂತಹ ಅನೇಕ ಘಟನೆ ನಡೆದಿವೆ. ನನ್ನ ಕಾರು, ಸಹೋದರ ಚನ್ನಾರಾಜ್ ಕಾರಿಗೆ ಅಪಘಾತಗಳಾಗಿವೆ. ಯಾವ ಸಾಧನೆಗೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು