Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

Bengaluru City

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ – ವಿರಾಜಪೇಟೆ ಶಾಸಕ ಪೊನ್ನಣ್ಣ ಹೆಸರು ಥಳಕು

Public TV
Last updated: April 4, 2025 4:04 pm
Public TV
Share
6 Min Read
BJP worker Vinay Somaiah commits suicide in Bengaluru Virajpet Congress MLA Ponnannas name is being mentioned
SHARE

– ಡೆತ್‌ನೋಟ್ ಬರೆದಿಟ್ಟು ವಿನಯ್ ಸೋಮಯ್ಯ ಆತ್ಮಹತ್ಯೆ
– ಗ್ರೂಪಿನ ಅಡ್ಮಿನ್‌ ಆಗಿದ್ದಕ್ಕೆ ನನ್ನ ಮೇಲೆ ಎಫ್‌ಐಆರ್‌
– ಒಬ್ಬರು 1 ರೂ. ನೀಡಿದ್ರೆ ಪತ್ನಿ, ಮಗಳಿಗೆ ಸಹಾಯವಾಗುತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಮಡಿಕೇರಿಯ (Madikeri) ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ವಿನಯ್‌ ಸೋಮಯ್ಯ (Vinay Somaiah) ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದು ಡೆತ್‌ನೋಟ್‌ನಲ್ಲಿ ವಿರಾಜಪೇಟೆಯ ಕಾಂಗ್ರೆಸ್‌ ಶಾಸಕ ಪೊನ್ನಣ್ಣ (A.S. Ponnanna) ಹೆಸರನ್ನು ಉಲ್ಲೇಖಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡದೇ ಇದ್ದರೂ ನಾನು ವಾಟ್ಸಪ್‌ ಗ್ರೂಪಿನ ಅಡ್ಮಿನ್‌ ಆಗಿದ್ದಕ್ಕೆ ನನ್ನ ಮೇಲೆ ಸುಳ್ಳು ಎಫ್‌ಐಆರ್‌ (FIR) ದಾಖಲು ಮಾಡಲಾಗಿದೆ. ಶಾಸಕ ಪೊನ್ನಣ್ಣ ಆದೇಶದಂತೆ ಪೊಲೀಸರು ನಡೆದುಕೊಂಡಿದ್ದಾರೆ. ಮಡಿಕೇರಿಯ ಕಾಂಗ್ರೆಸ್‌ ಶಾಸಕ ಮಂಥರ್‌ ಗೌಡ ಅವರು ನನಗೆ ಕಾಲ್‌ ಮಾಡಿ ಬೆದರಿಸಿದ್ದಾರೆ. ನನ್ನ ಆತ್ಮಹತ್ಯೆಗೆ ತೆನ್ನೀರ ಮಹೀನಾ ಕಾರಣ ಎಂದು ಡೆತ್‌ನೋಟ್‌ನಲ್ಲಿ ವಿನಯ್‌ ಬರೆದಿದ್ದಾರೆ.

ಸಾವಿಗೂ ಮುನ್ನ ವಿನಯ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ನಾಗವಾರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ ನೇಣಿಗೆ ಶರಣು

Madikeri party member vinay somaiah commits suicide at BJP office in Nagawara Bengaluru

ಎಲ್ಲರಿಗೂ ನನ್ನ ಕೊನೆಯ ನಮಸ್ತೇ,
ನಾನು ವಿನಯ್ ಕೆಎಸ್‌ 2 ತಿಂಗಳಿನಿಂದ ನನ್ನ ಮನಸ್ಸೇ ಹತೋಟಿಗೆ ಬರುತಿಲ್ಲ, ಯಾರೋ ಒಬ್ಬರು “ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು ವಾಟ್ಸಪ್‌ ಗ್ರೂಪಿನಲ್ಲಿ ಹಾಕಿದ ವಾಟ್ಸಪ್‌ ಮೆಸೇಜ್‌ಗೆ ಅಡ್ಮಿನ್‌ ಆದ ನಮ್ಮನ್ನು (ನನ್ನ ಅಡ್ಮಿನ್ ಮಾಡಿದ್ದು 5 ದಿನಗಳ ಹಿಂದೆ) ಹೊಣೆ ಮಾಡಿ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕಿ ಸಮಾಜಕ್ಕೆ ನಮ್ಮನ್ನು ಕಿಡಿಗೇಡಿಗಳು ಅಂತ ಪರಿಚಯಿಸಿ, ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ ತೆನ್ನೀರ ಮಹೀನಾ ಅವರು ನನ್ನ ಸಾವಿಗೆ ನೇರ ಹೊಣೆ.

ನಮ್ಮ ಮೇಲೆ ಎಫ್‌ಐಆರ್‌ ಹಾಕಿ ಕಿಡಿಗೇಡಿಗಳು ಅಂತ ಇಡೀ ಕೊಡಗಿಗೆ ವೈರಲ್ ಮಾಡಿದ್ದು ಕೂಡಾ ಇವನೇ, ಅದು ಕೂಡಾ ನಮ್ಮ ಫೋಟೋ ಹಾಕಿ, ನಮ್ಮ ಫೋಟೋವನ್ನು ನಮ್ಮ ಅನುಮತಿ ಇಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಉಪಯೋಗಿಸುತ್ತಾರೆ? ಅದು ಕೂಡಾ ಆರೋಪ ಸಾಬೀತು ಆಗದೇ, ಅದನ್ನು ನೋಡಿದ ನಮ್ಮ ಮನೆಯವರು ಹಾಗೂ ಸಂಬಧಿಕರಿಗೆ ಹೇಗೆ ಅನ್ನಿಸಿರಬಹುದು ಅಂತ ನೀವೇ ಊಹಿಸಿಕೊಳ್ಳಿ.

ಎಫ್‌ಐಆರ್‌ ಆದ ದಿನದಿಂದ ಜಾಮೀನು ಸಿಗುವ ತನಕ ನಾನು ನನ್ನ ಅಮ್ಮನ ಜೊತೆ ಮಾತನಾಡಿಲ್ಲ. ಈ ತೆನ್ನೀರ ಮಹೀನಾ ಕಾರಣಕ್ಕಾಗಿ ಜೀವ ಕಳೆದುಕೊಳ್ಳುತಿರುವ ವ್ಯಕ್ತಿ ನಾನು ಮೊದಲಿಗನಲ್ಲ. ಅವರನ್ನೇ ಕೇಳಿ, ಅವರ ಮಡದಿ ಆಸ್ಪತ್ರೆಗೆ ಸೇರಿದ ದಿನವೇ ಇನ್ನೊಂದು ಆತ್ಮಹತ್ಯೆ ನಡೆಯಿತು. ಆ ಆತ್ಮಹತ್ಯೆಗೂ ತನ್ನೀರ ಮಹೀನಾ ಹಾಗೂ ಅವನ ಮಡದಿಗೆ ಏನು ಸಂಬಂಧ ಅಂತ. ಆ ಆತ್ಮಹತ್ಯೆಯ ತನಿಖೆ ಆಗಬೇಕು. ಸಂಬಂಧಪಟ್ಟ ಅಧಿಕಾರಿಗಳು ಆ ಆತ್ಮಹತ್ಯೆ ಯ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು.

BJP worker Vinay Somaiah commits suicide in Bengaluru

ಆ ಗ್ರೂಪಿನಲ್ಲಿ ಇರುವ ಯಾರನ್ನು ಬೇಕಾದರೂ ಕೇಳಿ. ನನ್ನ ಒಂದು ಮೆಸೇಜ್ ಕೂಡಾ ಯಾರ ತೇಜೋವಧೆ ಮಾಡುವ ಹಾಗೆ ಇರಲಿಲ್ಲ. ನಾವು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕಾಗಿ ಕೆಲವು ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿ ನನ್ನ ಮೇಲೆ ಎಫ್‌ಐಆರ್‌ ಹಾಕಿದರು. ನಂತರ ಜಾಮೀನು ಸಿಕ್ಕಿದ ನಂತರ ಕೂಡಾ ನನ್ನ ಕಸಿನ್‌ ಹಾಗೂ ಸ್ನೇಹಿತರಿಗೆ ಕರೆ ಮಾಡಿ ಅವರ ಮನೆಗೆ ಹೋಗಿ ನನ್ನ ಅರೆಸ್ಟ್ ಮಾಡಲು ಮಡಿಕೇರಿಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಶುಕ್ರವಾರ ಜಾಮೀನು ಸಿಕ್ಕಿದರೂ ಕೂಡಾ ಶನಿವಾರ ನನ್ನ ಸ್ನೇಹಿತನ ಮನೆಗೆ ಹೋಗಿ ನನ್ನ ಬಗ್ಗೆ ವಿಚಾರಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ವಿರಾಜಪೇಟೆಯ ಶಾಸಕ ಪೊನ್ನಣ್ಣನ ಆದೇಶ ಅಂತ ಸ್ವಂತ ಮಡಿಕೇರಿಯ ಒಬ್ಬ ಪೊಲೀಸ್ ಪೇದೆ ಹೇಳಿದರು.

ನಂತರ ನನ್ನ ಸ್ನೇಹಿತನಿಗೆ ಪೊನ್ನಣ್ಣ ವಿನಯ್ ಅನ್ನೋ ಒಬ್ಬ ಕಾಲ್‌ ಮಾಡಿದ್ದ ನನಗೆ ಹಾಗೂ ಕೊಡವ ಹಾಗೂ ಗೌಡ ನಡುವೆ ಗಲಾಟೆ ಬಗ್ಗೆ ನನ್ನ ಜೊತೆ ಮಾತಾಡಿದ್ದು ಅಂತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಕಾಲ್‌ ಮಾಡಿದ್ದೇ ಆದಲ್ಲಿ ಕಾಲ್‌ ರೆಕಾರ್ಡ್ ತೋರಿಸಲಿ. ಇದನ್ನೂ ಓದಿ: ತಿಂಗಳಲ್ಲಿ 70 ಸಲ ನನ್ನ ಲೊಕೇಶನ್‌ ತೆಗೆಸುತ್ತಾರೆ: ಎಸ್‌ಪಿ ಮುಂದೆ ರಾಯಚೂರು ಬಿಜೆಪಿ ಶಾಸಕ ಅಳಲು

ನಾನು ಮೆಸೇಜ್ ಮಾಡಿದ್ದು ನಿಜ, ಅದು ಕೂಡಾ ಯಾರೋ ಕಳಿಸಿದ ಆಕ್ಷೇಪಾರ್ಹ ವಾಯ್ಸ್‌ ಮೆಸೇಜ್ ಅವರಿಗೆ ಕಳಿಸಿ, ಅವರಿಗೆ ವಿಷಯ ತಿಳಿಸಿದ್ದು, ಅದರ ಸ್ಕ್ರೀನ್‌ ಶಾಟ್‌ ಕೂಡಾ ಕಳುಹಿಸಿದ್ದೇನೆ. ಆದರೆ ಅದರ ಬಗ್ಗೆ ಎಫ್‌ಐಆರ್‌ ಮಾಡದೇ ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್‌ಐಆರ್‌ ಹಾಕಿದ್ದು ಯಾವ ನ್ಯಾಯ?

ನಾನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಬಗ್ಗೆ ಗ್ರೂಪಿನಲ್ಲಿ ಕೇಳಿದ್ದಕ್ಕೆ ಮಡಿಕೇರಿಯ ಶಾಸಕ ಮಂಥರ್ ಗೌಡ ನನಗೆ ಕಾಲ್‌ ಮಾಡಿ ಹಾಗೆಲ್ಲ ಗ್ರೂಪಿನಲ್ಲಿ ಯಾಕೆ ಮೆಸೇಜ್ ಹಾಕ್ತಿಯ ಅಂತ ಅವರೇ ನಂಗೆ ಗದರಿದ್ದಾರೆ. ಏನಿದ್ರೂ ನನಗೆ ಹೇಳು, ಗ್ರೂಪ್‌ನಲ್ಲಿ ಹಾಕಿದ್ರೆ ಸರಿ ಇರಲ್ಲಾ ಅಂತ ನನಗೆ ಹೇಳಿದ್ದಾರೆ. ಪೂರಕ ಸಾಕ್ಷಿ ವಾಟ್ಸಪ್‌ ಕಾಲ್‌, ರಿಜಿಸ್ಟರ್‌ ಸ್ಕ್ರೀನ್‌ಶಾಟ್‌ ಕಳುಹಿಸಿದ್ದೇನೆ. ಅದರಲ್ಲಿ ನೀವೇ ನೋಡಿ ನಾನು ಅವರಿಗೆ ಕಾಲ್‌ ಮಾಡಿದ್ದಾ ಅಥವಾ ಅವರು ನನಗೆ ಕಾಲ್‌ ಮಾಡಿದ್ದಾ ಅಂತ. ಬೇಕಾದರೆ ಅವರ ವಾಟ್ಸಪ್‌ ಕಾಲ್‌ ಚೆಕ್ ಮಾಡಿ.

ಅದಲ್ಲದೇ ಹರೀಶ್ ಪೂವಯ್ಯ ಇವನು ಮಾರ್ಚ್ 11 ಕ್ಕೆ ಪೆರ್ಮೆರ ಕೊಡವ ಹಾಗೂ ನಂಗ ಕೊಡಗ್ ರ ಕೊಡವ ಮಕ್ಕ ಗ್ರೂಪಿನಲ್ಲಿ ಪುನಃ ಪುನಃ ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ತೆನ್ನೀರ ಮಹೀನಾ. ಅವನು ಬರೆದ ಆರ್ಟಿಕಲ್‌ ಅನ್ನು ಕೆಲವು ರಾಜಕೀಯ ಪ್ರೇರಿತ ಜನರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಮ್ಮ ತೇಜೋವಧೆ ಮಾಡುತ್ತಿದ್ದಾರೆ. ಅದು ಕೂಡಾ ಜಾಮೀನು ಆಗಿ ಎಫ್‌ಐಆರ್‌ ಮೇಲೆಯೇ ಮಾನ್ಯ ಹೈಕೋರ್ಟ್‌ನಿಂದ ತಡೆ ಬಂದ ಮೇಲೆ ಕೂಡಾ ಇವರು ನಮ್ಮನ್ನು ಕಿಡಿಗೇಡಿಗಳು ಅಂತ ಕರೆಯೋದು ಎಷ್ಟು ಸರಿ? ಕೆಲವು ಮೂಲಗಳಿಂದ ತಿಳಿದ ವಿಷಯ ಏನೆಂದರೆ, ನಮ್ಮ ಮೇಲೆ ರೌಡಿ ಶೀಟರ್ ಓಪನ್‌ ಮಾಡುವ ಹುನ್ನಾರ ಕೂಡಾ ನಡೆದಿದೆ. ಇವರಿಗೆಲ್ಲಾ ಸರಿಯಾದ ಶಿಕ್ಷೆ ಆಗಬೇಕು. ಆಗಲೇ ನನ್ನ ಸಾವಿಗೆ ನ್ಯಾಯ ದೊರಕುವುದು.

Madikeri party member vinay somaiah commits suicide at BJP office in Nagawara Bengaluru 1

ಕರ್ನಾಟಕ ಬಿಜೆಪಿ ಕುಟುಂಬಕ್ಕೆ ಹಾಗೂ ಕಾರ್ಯಕರ್ತರಲ್ಲಿ ನನ್ನ ಒಂದು ಬೇಡಿಕೆ. ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ (ಪ್ರತೀ ಒಬ್ಬರು ಒಂದು ರೂಪಾಯಿ ಕೊಟ್ಟರೂ ಅದು ನನ್ನ ಮಡದಿಯ ಹಾಗೂ ಮಗಳ ಭವಿಷ್ಯಕ್ಕೆ ಸಹಾಯವಾಗುತ್ತೆ) ಸಹಾಯ ಮಾಡಿ ನನ್ನ ತಾಯಿ, ಮಡದಿ, ಮಗಳು ಹಾಗೂ ನಮ್ಮ ಕುಟುಂಬಕ್ಕೆ ನನ್ನ ಸಾವಿನ ಸಮಯದಲ್ಲಿ ಟರ್ಚರ್‌ ಕೊಡದೇ ಎಲ್ಲಾ ಕಾರ್ಯ ಸುಸೂತ್ರವಾಗಿ ನಡೆಯಲು ಸಹಾಯ ಮಾಡಿ.

ಇದು ನನ್ನ ಕಳಕಳಿಯ ವಿನಂತಿ. ಯಾರೂ ಕೂಡಾ ನನ್ನ ಸಾವಿಗೆ ರಜೆ ಹಾಕಿ ದೂರದೂರಿಂದ ಬರುವ ಅವಶ್ಯಕತೆ ಇಲ್ಲ. ನೀವೆಲ್ಲಿದ್ದೀರೋ ಅಲ್ಲಿಂದಲೇ ನಮ್ಮ ಕುಟುಂಬಕ್ಕೆ ಆಶೀರ್ವದಿಸಿ. ಚಲನ್ ಅಣ್ಣ, ವಿಷ್ಣು ಅಣ್ಣ, ಹಾಗೂ ಸಚಿನ್ ಅಣ್ಣ ನನ್ನ ಮನೆಯವರೊಂದಿಗೆ ನಿಂತು ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಡಿ. ನನ್ನ ಮೇಲೆ ಎಫ್‌ಐಆರ್‌ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಅಪ್ಪಚ್ಚು ರಂಜನ್, ಚಲನ್, ಸಚಿನ್, ರಾಕೇಶ್ ದೇವಯ್ಯ, ಅಡ್ವೋಕೇಟ್ ನಿಶಾಂತ್, ಅಡ್ವೋಕೇಟ್ ಮೋಹನ್, ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.

ನನ್ನ ಸಾವು ಮುಂದೆ ಆಗುವ ರಾಜಕೀಯ ಪ್ರೇರಿತ ಎಫ್‌ಐಆರ್‌ ಒಂದು ಪಾಠವಾಗಬೇಕು ಹಾಗೂ ಪೊಲೀಸ್ ನವರು ಸ್ವಲ್ಪ ವಿಚಾರ ಮಾಡಿ ಎಫ್‌ಐಆರ್‌ ಹಾಕಬೇಕು. ಯಾರೋ ಒಬ್ಬರು ದೂರು ದಾಖಲಿಸಿದರು ಅಂತ ಸುಖಾ ಸುಮ್ಮನೆ ಎಫ್‌ಐಆರ್‌ ಹಾಕುವುದು ಎಷ್ಟು ಸರಿ?

ಈ ಮೆಸೇಜ್ ಅನ್ನು ಎಲ್ಲಾ ಸಾಮಾಜಿಕ ಜಾಲತಣದಲ್ಲಿ ಹಾಕಿ. ಇದರಿಂದಾಗಿ ಅಮಾಯಕರ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ಹಾಕುವುದು ಕೊನೆಗೊಳ್ಳಲಿ. ನಾನು ನಮ್ಮ ಮನೆಯವರಿಗೆ ಏನೂ ಬರೆಯುತಿಲ್ಲ, ಯಾಕೆಂದರೆ ನನಗೆ ಅವರಿಗೆ ಏನು ಹೇಳುವುದೆಂದು ತಿಳಿಯುತಿಲ್ಲ.

ಎಲ್ಲರೂ ಯೋಚಿಸಬಹುದು ಘಟನೆ ಆಗಿ ಇಷ್ಟು ದಿನ ಆದ ಮೇಲೆ ಇವನಿಗೆ ಏನಾಯಿತು ಅಂತ, ನಾನು ಒಮ್ಮೆ ನನ್ನ ಮನೆಗೆ ಹೋಗಿ ಬರೋದನ್ನ ಕಾಯುತಿದ್ದೆ. ನನ್ನ ಮನೆಗೆ ಹೋಗಿ ಎಲ್ಲಾ ಕುಟುಂಬದವರ ಜೊತೆ ಕಳೆದ ಒಳ್ಳೆಯ ಸಮಯದ ನೆನಪಿನಲ್ಲಿ ನಾನು ವಿದಾಯ ಹೇಳುತಿದ್ದೇನೆ. ಸಾಧ್ಯವಾದರೆ ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.

ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೋಗುತಿದ್ದೇನೆ. ಇಂತಿ ನಿಮ್ಮ ವಿನಯ್‌ ಕೆಎಸ್‌

TAGGED:bjpmadikerisuicideVinay Somaiahಆತ್ಮಹತ್ಯೆಬಿಜೆಪಿಮಡಿಕೇರಿವಿನಯ್‌ ಸೋಮಯ್ಯ
Share This Article
Facebook Whatsapp Whatsapp Telegram

Cinema news

Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories
Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post

You Might Also Like

Vande Bharat Train
Belgaum

ಪ್ರಹ್ಲಾದ್ ಜೋಶಿ ಮನವಿಗೆ ಮನ್ನಣೆ; ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಅಸ್ತು

Public TV
By Public TV
14 minutes ago
Indian Origin Techie Drown in US Waterfall
Crime

ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು

Public TV
By Public TV
18 minutes ago
SSLC Exams
Bengaluru City

SSLC ಪರೀಕ್ಷೆಗೆ 525 ಅಂಕ – ಕರಡು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Public TV
By Public TV
25 minutes ago
Jasprit Bumrah Mumbai Indians IPL
Cricket

114 ಎಸೆತ ಹಾಕಿಯೂ ವಿಕೆಟ್‌ ಪಡೆಯದ ಬುಮ್ರಾ

Public TV
By Public TV
37 minutes ago
kea
Bengaluru City

ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

Public TV
By Public TV
43 minutes ago
Krunal Pandya Hardik Pandya
Cricket

ಹಾರ್ದಿಕ್ ವಿಕೆಟ್‌ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್‌ vs ಬ್ರದರ್ ವಿಡಿಯೋ ವೈರಲ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?